Digital Property Registration- ಇಂದಿನಿಂದ ರಾಜ್ಯದಲ್ಲಿ ಆಸ್ತಿ ನೋಂದಣಿ ಸಂಪೂರ್ಣ ಡಿಜಿಟಲ್ | ಇ-ಸಹಿ ಇಲ್ಲದೇ ಆಸ್ತಿ ನೋಂದಣಿ ಅಸಾಧ್ಯ!

ಇಂದಿನಿಂದ ಕಂದಾಯ ಇಲಾಖೆಯ (Karnataka Revenue Department) ಹೊಸ ನಿಯಮ ಜಾರಿಗೆ ತಂದಿದ್ದು; ಇದರಿಂದ ರಾಜ್ಯದಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ ಸಂಪೂರ್ಣ ಡಿಜಿಟಲ್ (Digital Property Registration) ಆಗಲಿದೆ. ಈ ಕುರಿತ ಮಾಹಿತಿ ಇಲ್ಲಿದೆ… ಹೌದು, ಮೇ 26, 2025ರಿಂದ ಕರ್ನಾಟಕದಲ್ಲಿ ಆಸ್ತಿ ನೋಂದಣಿಗೆ ಹೊಸ ನಿಯಮ ಜಾರಿಯಾಗಿದೆ. ಈ ನಿಯಮದಡಿ ಇನ್ನು ಮುಂದೆ ಆಸ್ತಿ ನೋಂದಣಿ ಕಾರ್ಯವ್ಯವಹಾರಗಳು ಸಂಪೂರ್ಣ ಡಿಜಿಟಲ್ ಆಗಿದ್ದು, ಇ-ಸಹಿ (ಡಿಜಿಟಲ್ ಸಹಿ) ಕಡ್ಡಾಯವಾಗಿರಲಿದೆ. ಎಲ್ಲವೂ ಆನ್‌ಲೈನ್ ಕಂದಾಯ ಇಲಾಖೆ ‘ಕರ್ನಾಟಕ ಸ್ಟಾಂಪ್ … Read more

Bank Holidays June 2025- ಜೂನ್ ತಿಂಗಳಲ್ಲಿ ಬ್ಯಾಂಕುಗಳಿಗೆ ಸಾಲು ಸಾಲು ರಜೆ | ದಿನಾಂಕವಾರು ಮಾಹಿತಿ ಮತ್ತು ಉಪಯುಕ್ತ ಸಲಹೆ ಇಲ್ಲಿದೆ…

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಅಧಿಕೃತ ರಜೆ ಕ್ಯಾಲೆಂಡರ್ ಪ್ರಕಾರ ಜೂನ್ ತಿಂಗಳಲ್ಲಿ (Bank Holidays June 2025) ಬ್ಯಾಂಕುಗಳಿಗೆ ಒಟ್ಟು 12 ರಜೆಗಳಿದ್ದು; ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ಇನ್ನೇನು 2025ರ ಜೂನ್ ತಿಂಗಳು ಆರಂಭವಾಗಲಿದ್ದು, ಸಾರ್ವಜನಿಕ ರಜೆಗಳು, ವಾರಾಂತ್ಯಗಳು ಮತ್ತು ವಿವಿಧ ರಾಜ್ಯಗಳ ಸ್ಥಳೀಯ ಹಬ್ಬಗಳ ಹಿನ್ನೆಲೆ ದೇಶದಾದ್ಯಂತದ ಬ್ಯಾಂಕುಗಳಿಗೆ ಒಟ್ಟು 12 ದಿನ ರಜೆಗಳು ಇರಲಿವೆ. ಈ ರಜೆಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಪ್ರಕಟಿಸಿದ ಅಧಿಕೃತ ರಜೆ … Read more

Vidyadhan Scholarship 2025- ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ 75.000 ರೂ. ವರೆಗೂ ಆರ್ಥಿಕ ನೆರವು | ಕರ್ನಾಟಕ ವಿದ್ಯಾಧನ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಎಸ್‌ಎಸ್‌ಎಲ್‌ಸಿ ಪಾಸಾದ ವಿದ್ಯಾರ್ಥಿಗಳಿಂದ ‘ಕರ್ನಾಟಕ ವಿದ್ಯಾಧನ್ ವಿದ್ಯಾರ್ಥಿವೇತನ-2025’ಕ್ಕೆ (Vidyadhan Scholarship 2025) ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ… 2025ನೇ ಸಾಲಿನ ಸರೋಜಿನಿ ದಾಮೋದರನ್ ಫೌಂಡೇಶನ್ (Sarojini Damodaran Foundation- SDF) ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕರ್ನಾಟಕದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ‘ಕರ್ನಾಟಕ ವಿದ್ಯಾಧನ್ ವಿದ್ಯಾರ್ಥಿವೇತನ- 2025’ಕ್ಕೆ ಅರ್ಜಿ ಆಹ್ವಾನಿಸಿದೆ. ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯಿಂದ ಬಂದ ಶೈಕ್ಷಣಿಕವಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿರುವ ಈ ಸ್ಕಾಲರ್‌ಶಿಪ್ ಪ್ರಥಮ ಮತ್ತು ದ್ವಿತೀಯ ಪಿಯುಸಿ ಹಾಗೂ ದ್ವಿತೀಯ … Read more

Karnataka Mungaru 2025- ಮುಂಗಾರು ಮಳೆ ಭರ್ಜರಿ ಎಂಟ್ರಿ | ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ | ಹೆಚ್ಚು ಮಳೆ ಬೀಳುವ ಜಿಲ್ಲೆಗಳ ಮಾಹಿತಿ ಇಲ್ಲಿದೆ…

ಅವಧಿಗಿಂತ ಮೊದಲೇ ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶವಾಗಿದೆ. ಮುಂದಿನ 4 ದಿನ ಭಾರೀ ಮಳೆಯಾಗಲಿದ್ದು; ಐಎಂಡಿ ರೆಡ್ ಅಲರ್ಟ್ ಘೋಷಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ… ರಾಜ್ಯಕ್ಕೆ ಮುಂಗಾರು ಮಳೆ ಭರ್ಜರಿ ಎಂಟ್ರಿ ಕೊಟ್ಟಿದೆ. 2009ರ ನಂತರ ಇದೇ ಮೊದಲ ಬಾರಿಗೆ ನೈಋತ್ಯ ಮುಂಗಾರು ಅವಧಿಗಿಂತ ಮೊದಲೇ ದಕ್ಷಿಣ ಭಾರತಕ್ಕೆ ಕಾಲಿಟ್ಟಿದೆ. ನಿನ್ನೆ ಮೇ 24ರಂದು ಕೇರಳದ ಮೂಲಕ ಕರ್ನಾಟಕದ ಕರಾವಳಿ ಪ್ರದೇಶಕ್ಕೂ ಪ್ರವೇಶಿಸಿದೆ. ಇದು ರೈತರಿಗೆ ಸಂತಸದ ವಿಷಯವಾಗಿದ್ದು, ಅತ್ಯಧಿಕ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಮುನ್ನೆಚ್ಚರಿಕೆಯೂ … Read more

Mini Tractor- ರೈತರಿಗೆ ಮಿನಿ ಟ್ರ‍್ಯಾಕ್ಟರ್, ಪವರ್ ಟ್ರಿಲ್ಲರ್ ಸೇರಿದಂತೆ ತೋಟಗಾರಿಕೆ ಘಟಕಗಳಿಗೆ ಸಬ್ಸಿಡಿ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ಮಿನಿ ಟ್ರ‍್ಯಾಕ್ಟರ್, ಪವರ್ ಟ್ರಿಲ್ಲರ್ ಸೇರಿದಂತೆ ಇತರ ತೋಟಗಾರಿಕೆ ಘಟಕಗಳನ್ನು ಸಬ್ಸಿಡಿಯಲ್ಲಿ ಪಡೆಯಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ಕರ್ನಾಟಕ ತೋಟಗಾರಿಕೆ ಇಲಾಖೆ ವತಿಯಿಂದ 2025-26ನೇ ಸಾಲಿನಲ್ಲಿ ಮಿನಿ ಟ್ರ‍್ಯಾಕ್ಟರ್, ಪವರ್ ಟ್ರಿಲ್ಲರ್, ಹನಿ ನೀರಾವರಿ ಘಟಕ ಸೇರಿದಂತೆ ಹಲವು ತೋಟಗಾರಿಕೆ ಘಟಕಗಳಿಗೆ ಸಬ್ಸಿಡಿ (Subsidy) ನೀಡಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಸಬ್ಸಿಡಿ ಯೋಜನೆಗಳು ರಾಷ್ಟ್ರೀಯ ಮಟ್ಟದ ಯೋಜನೆಗಳಾದ: ರಾಷ್ಟ್ರೀಯ ತೋಟಗಾರಿಕೆ ಮಿಷನ್ (MIDH – Mission for … Read more

Karnataka Property Registration- ಮೇ 26ರಿಂದ ಆಸ್ತಿಗಳ ನೋಂದಣಿಗೆ ಹೊಸ ನಿಯಮ | ಜನಸಾಮಾನ್ಯರಿಗೆ ತಿಳಿದಿರಬೇಕಾದ ಮಹತ್ವದ ಮಾಹಿತಿ ಇಲ್ಲಿದೆ…

ಮೇ 26ರಿಂದ ಆಸ್ತಿ ನೋಂದಣಿಯಲ್ಲಿ (Karnataka Property Registration) ಡಿಜಿಟಲ್ ಆಗಲಿದ್ದು; ಕಾಗದದ ವ್ಯವಹಾರ ಸಂಪೂರ್ಣ ನಿಲ್ಲಲಿದೆ. ಇನ್ಮುಂದೆ ಡಿಜಿಟಲ್ ಸಹಿ, ಇ-ಸ್ಟಾಂಪ್ ಕಡ್ಡಾಯ. ಈ ಕುರಿತ ಮಹತ್ವದ ಮಾಹಿತಿ ಇಲ್ಲಿದೆ… ರಾಜ್ಯದಲ್ಲಿ ಆಸ್ತಿ ಹಸ್ತಾಂತರ, ಖರೀದಿ ಹಾಗೂ ಇತರೆ ದಾಖಲೆಗಳ ನೋಂದಣಿ ಪ್ರಕ್ರಿಯೆಯು ಮೇ 26, 2025ರಿಂದ ಹೊಸ ತಿರುವು ಪಡೆಯಲಿದೆ. ಉಪ-ನೋಂದಾಣಿಧಿಕಾರಿ ಕಚೇರಿ (Sub Registrar Office) ವ್ಯವಹಾರಗಳು ಸಂಪೂರ್ಣ ಡಿಜಿಟಲೀಕರಣ ಆಗಲಿವೆ. ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ವತಿಯಿಂದ ಜಾರಿಗೊಳ್ಳುತ್ತಿರುವ ‘ಕರ್ನಾಟಕ ಸ್ಟಾಂಪ್ … Read more

Ration Card New Rules- ರೇಷನ್ ಕಾರ್ಡ್ ಅರ್ಜಿ | ಇನ್ಮುಂದೆ ಕಠಿಣ ನಿಯಮ | 25 ಲಕ್ಷ ಕಾರ್ಡುಗಳ ರದ್ದತಿ?

ರೇಷನ್ ಕಾರ್ಡ್ ಅರ್ಜಿಗೆ ಹೊಸ ನಿಯಮ ಕಡ್ಡಾಯಗೊಳಿಸುವಂತೆ (Ration Card New Rules) ಆಡಳಿತ ಸುಧಾರಣಾ ಆಯೋಗವು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದ್ದು; ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ಬಿಪಿಎಲ್ ರೇಷನ್ ಕಾರ್ಡ್ ವ್ಯವಸ್ಥೆಯನ್ನು ಶುದ್ಧೀಕರಿಸಲು ಕರ್ನಾಟಕ ಸರ್ಕಾರ ಗಂಭೀರ ಹೆಜ್ಜೆ ಇಟ್ಟಿದೆ. ಇನ್ಮುಂದೆ ಹೊಸದಾಗಿ ರೇಷನ್ ಕಾರ್ಡಿ‍ಗಾಗಿ ಅರ್ಜಿ ಸಲ್ಲಿಸುವವರಿಗೆ ಕಠಿಣ ನಿಯಮ ಜಾರಿಗೊಳಿಸಲಾಗುತ್ತಿದೆ. ಜೊತೆಗೆ ಈಗಾಗಲೇ ಪಡಿತರ ಚೀಟಿ ಹೊಂದಿರುವ ಅನರ್ಹರ ಕಾರ್ಡ್ ರದ್ದತಿಗೂ ಮುಂದಾಗಿದೆ. ಈ ಸಂಬಂಧ ಕರ್ನಾಟಕ ಆಡಳಿತ ಸುಧಾರಣಾ … Read more

KCET Result 2025- ಸಿಇಟಿ ಫಲಿತಾಂಶ ಇಂದು ಪ್ರಕಟ | ರಿಸಲ್ಟ್ ಹೀಗೆ ನೋಡಿ | ಫಲಿತಾಂಶ ನಂತರದ ಪ್ರಮುಖ ಹಂತಗಳ ಮಾಹಿತಿ ಇಲ್ಲಿದೆ…

ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಉತ್ಸುಕತೆಯಿಂದ ನಿರೀಕ್ಷಿಸಿದ್ದ 2025ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ (UGCET) ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಇಂದು ಪ್ರಕಟಿಸಲಿದೆ… ಇಂದು ಮೇ 24ರ ಬೆಳಿಗ್ಗೆ 11:30ಕ್ಕೆ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಕೆಇಎ ಕಚೇರಿಯಲ್ಲಿ ಸಿಇಟಿ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ. ಫಲಿತಾಂಶ ಪ್ರಕಟ ನಂತರ ವಿದ್ಯಾರ್ಥಿಗಳು ಈ ವರ್ಷದ ಸಿಇಟಿ ಫಲಿತಾಂಶವನ್ನು ಮಧ್ಯಾಹ್ನ 2 ಗಂಟೆಯ ನಂತರ … Read more

KCET Result 2025- ಕೆಸಿಇಟಿ-2025 ಫಲಿತಾಂಶ ಮೇ 24ರಂದು ಪ್ರಕಟ | ಮೊಬೈಲ್‌ನಲ್ಲೇ ರಿಸಲ್ಟ್ ನೋಡಿ…

ಬಹುದಿನಗಳಿಂದ ಕಾದು ಕೂತಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ ಫಲಿತಾಂಶವನ್ನು (KCET Result 2025) ಮೇ 24ರಂದು ಪ್ರಕಟಿಸುತ್ತಿದೆ. ಈ ಕುರಿತ ವಿವರ ಇಲ್ಲಿದೆ… ಲಕ್ಷಾಂತರ ವಿದ್ಯಾರ್ಥಿಗಳು ಕಾತುರದಿಂದ ನಿರೀಕ್ಷಿಸುತ್ತಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (KCET) 2025ರ ಫಲಿತಾಂಶವನ್ನು ನಾಳೆ ಮೇ 24ರಂದು ಪ್ರಕಟಿಸಲಾಗುತ್ತಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಈ ಕುರಿತು ಎಲ್ಲಾ ತಯಾರಿಗಳನ್ನು ಪೂರ್ಣಗೊಳಿಸಿದ್ದು, ಫಲಿತಾಂಶವನ್ನು ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಮಧ್ಯಾಹ್ನದೊಳಗೆ ಲಭ್ಯವಾಗುವಂತೆ ಮಾಡಲಿದೆ. KCET ಪರೀಕ್ಷೆಯ ಹಿನ್ನಲೆ ಏಅಇಖಿ ಕರ್ನಾಟಕ … Read more

Rohini Rain- ಮೇ 25ರಿಂದ ರಾಜ್ಯದಲ್ಲಿ ರೋಹಿಣಿ ಮಳೆ ಆರ್ಭಟ | ಈ ಜಿಲ್ಲೆಗಳಿಗೆ ರೆಡ್ ಅಲರ್ಟ್

ಮೇ 25ರಿಂದ ರೋಹಿಣಿ ಮಳೆಯ (Rohini Rain) ಆರ್ಭಟ ಶುರುವಾಗಲಿದ್ದು; ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್, ಒಳನಾಡು ಪ್ರದೇಶಗಳಿಗೆ ಎಚ್ಚರಿಕೆ ನೀಡಲಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ… ಮುಂಗಾರು ಪ್ರವೇಶಕ್ಕೆ ದಿನಗಣನೆ ಶುರುವಾಗಿದೆ. ಇದರೊಂದಿಗೆ ರಾಜ್ಯದ ಹಲವೆಡೆ ಮುಂಗಾರು ಪೂರ್ವ ಮಳೆಯ ಆರ್ಭಟ ತೀವ್ರಗೊಂಡಿದ್ದು, ಈ ಬಾರಿಗೆ ರೋಹಿಣಿ ಮಳೆ ನಕ್ಷತ್ರ ಭಾರಿ ಮಳೆಯೊಂದಿಗೆ ಪ್ರಾರಂಭವಾಗಲಿದೆ ಎಂಬ ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಮೇ 25ರಿಂದ ಆರಂಭವಾಗಿ ಜೂನ್ 6ರ ವರೆಗೆ ಇರುವ ರೋಹಿಣಿ ಮಳೆಯು … Read more

error: Content is protected !!