Tarpaulin Subsidy Scheme 2026- ರೈತರಿಗೆ ಕೃಷಿ ಇಲಾಖೆಯಿಂದ ಟಾರ್ಪಾಲಿನ್ ವಿತರಣೆಗೆ ಅರ್ಜಿ ಆಹ್ವಾನ

Spread the love

WhatsApp Group Join Now
Telegram Group Join Now

ರೈತರ ಬೆಳೆ ರಕ್ಷಣೆಗೆ ಕೃಷಿ ಇಲಾಖೆಯು 2026ನೇ ಸಾಲಿನ ‘ಟಾರ್ಪಾಲಿನ್ ಸಹಾಯಧನ ಯೋಜನೆ’ಗೆ (Tarpaulin Subsidy Scheme 2026) ಅರ್ಜಿ ಕರೆದಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ಹವಾಮಾನ ವೈಪರೀತ್ಯ, ಅಕಾಲಿಕ ಮಳೆ, ತೀವ್ರ ಬಿಸಿಲು ಇತ್ಯಾದಿ ನೈಸರ್ಗಿಕ ಅವಘಡಗಳಿಂದ ರೈತರ ಬೆಳೆ ರಕ್ಷಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ಕೃಷಿ ಇಲಾಖೆ ‘ಟಾರ್ಪಾಲಿನ್ ಸಹಾಯಧನ ಯೋಜನೆ – 2026’ (Tarpaulin Subsidy Scheme 2026) ಅನ್ನು ಜಾರಿಗೊಳಿಸಿದೆ.

ಮಾರುಕಟ್ಟೆಯಲ್ಲಿ ಸಾವಿರಾರು ರೂಪಾಯಿ ಬೆಲೆ ಬಾಳುವ ಟಾರ್ಪಾಲಿನ್ (ತಾಡಪತ್ರಿ) ಅನ್ನು ಇದೀಗ ರೈತರಿಗೆ ಅತಿ ಕಡಿಮೆ ದರದಲ್ಲಿ, ಭಾರೀ ಸಬ್ಸಿಡಿಯೊಂದಿಗೆ ಒದಗಿಸಲಾಗುತ್ತಿದೆ. ಇದು ರೈತರಿಗೆ ದೊಡ್ಡ ಆರ್ಥಿಕ ನೆರವಾಗುವುದರ ಜೊತೆಗೆ, ಬೆಳೆ ನಷ್ಟವನ್ನು ತಪ್ಪಿಸುವ ಮಹತ್ವದ ಹೆಜ್ಜೆಯಾಗಿದೆ.

ಇದನ್ನೂ ಓದಿ: Bajaj Chetak C25 Electric Scooter- ಭಾರೀ ಅಗ್ಗದ ಬೆಲೆಗೆ ಎಲೆಕ್ಟ್ರಿಕ್ ಬಜಾಜ್ ಚೇತಕ್ ಸ್ಕೂಟರ್ | ಭರ್ಜರಿ ಆಫರ್

Tarpaulin Scheme Objective – ಟಾರ್ಪಾಲಿನ್ ಯೋಜನೆಯ ಉದ್ದೇಶವೇನು?

ಕಟಾವು ನಂತರದ ಬೆಳೆ ನಷ್ಟವನ್ನು ಕಡಿಮೆ ಮಾಡುವುದು, ಅಕಾಲಿಕ ಮಳೆ ಮತ್ತು ಬಿಸಿಲಿನಿಂದ ಧಾನ್ಯವನ್ನು ರಕ್ಷಿಸುವುದು, ರೈತರ ಮೇಲೆ ಆಗುವ ಅನಗತ್ಯ ಖರ್ಚು ಕಡಿಮೆ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಟಾರ್ಪಾಲಿನ್ ಬಳಕೆಯಿಂದ ಸಣ್ಣ ಮತ್ತು ಮಧ್ಯಮ ವರ್ಗದ ರೈತರು ತಮ್ಮ ಬೆಳೆಯನ್ನು ಸುರಕ್ಷಿತವಾಗಿ ಒಣಗಿಸಬಹುದು, ಸಂಗ್ರಹಿಸಬಹುದು ಹಾಗೂ ಸಾಗಿಸಬಹುದು.

ಇದನ್ನೂ ಓದಿ: Atal Pension Yojana- ಪ್ರತೀ ತಿಂಗಳೂ 5000 ರೂ. ವೃದ್ಧಾಪ್ಯ ವೇತನ | ಕೇಂದ್ರ ಸಚಿವ ಸಂಪುಟ ಅನುಮೋದನೆ

Subsidy Structure – ಯಾರಿಗೆ ಎಷ್ಟು ಸಹಾಯಧನ?

ಕೃಷಿ ಇಲಾಖೆ ರೈತರನ್ನು ಎರಡು ಪ್ರಮುಖ ವರ್ಗಗಳಾಗಿ ವಿಂಗಡಿಸಿ ಸಬ್ಸಿಡಿ ನಿಗದಿಪಡಿಸಿದೆ:

  1. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ (SC/ST) ರೈತರಿಗೆ: ಈ ವರ್ಗದ ರೈತರಿಗೆ ಶೇ. 90% ಸಹಾಯಧನ ನೀಡಲಾಗುತ್ತಿದೆ. ಅಂದರೆ, ಟಾರ್ಪಾಲಿನ್‌ನ ಒಟ್ಟು ಬೆಲೆಯಲ್ಲಿನ ಕೇವಲ 10% ಮೊತ್ತವನ್ನು ಮಾತ್ರ ರೈತರು ಪಾವತಿಸಬೇಕು. ಇದು ಬಹುತೇಕ ಉಚಿತ ಸೌಲಭ್ಯ ಎನ್ನಬಹುದಾದಷ್ಟು ದೊಡ್ಡ ನೆರವಾಗಿದೆ.
  2. ಸಾಮಾನ್ಯ ವರ್ಗದ ರೈತರಿಗೆ: ಇತರೆ ಎಲ್ಲಾ ವರ್ಗದ ರೈತರಿಗೆ ಶೇ. 50% ಸಬ್ಸಿಡಿ ಲಭ್ಯವಿದೆ. ಮಾರುಕಟ್ಟೆ ದರದ ಅರ್ಧ ಬೆಲೆಗೆ ಉತ್ತಮ ಗುಣಮಟ್ಟದ ಟಾರ್ಪಾಲಿನ್ ದೊರೆಯಲಿದೆ.

ಇದನ್ನೂ ಓದಿ: Ujjwala Yojana 2.0- ಉಜ್ವಲ ಯೋಜನೆ 2.0: ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ

Tarpaulin Size & Usage – ಟಾರ್ಪಾಲಿನ್‌ನ ಅಳತೆ ಮತ್ತು ಉಪಯೋಗ

ಕೃಷಿ ಇಲಾಖೆ ವಿತರಿಸುವ ಟಾರ್ಪಾಲಿನ್‌ಗಳು ಬಾಳಿಕೆ ಬರುವ, ದಪ್ಪ ಮತ್ತು ಗುಣಮಟ್ಟದ ವಸ್ತುವಿನಿಂದ ತಯಾರಾಗಿವೆ. 8 ಮೀಟರ್ ಉದ್ದ ಹಾಗೂ 6 ಮೀಟರ್ ಅಗಲದ (8×6 ಮೀ.) ತಾಡಪತ್ರಿಗಳನ್ನು ವಿತರಿಸಲಾಗುತ್ತದೆ.

ಇದು ಕಟಾವು ಮಾಡಿದ ಬೆಳೆಯನ್ನು ಮಳೆ ನೀರಿನಿಂದ ರಕ್ಷಿಸಲು, ಕಣದಲ್ಲಿ ಅಥವಾ ಮನೆ ಮುಂದೆ ಧಾನ್ಯ ಒಣಗಿಸಲು, ಕೃಷಿ ಹೊಂಡಗಳಿಗೆ ಲೈನಿಂಗ್ ಮಾಡಲು ಮತ್ತು ಟ್ರ‍್ಯಾಕ್ಟರ್, ಯಂತ್ರೋಪಕರಣಗಳಿಗೆ ತಾತ್ಕಾಲಿಕ ಶೆಡ್ ನಿರ್ಮಿಸಲು ಸೇರಿದಂತೆ ದಿನನಿತ್ಯ ಉಪಯೋಗವಾಗುವ ಅಗತ್ಯ ಸಾಧನವಾಗಿದೆ.

Tarpaulin Subsidy Scheme 2026
Tarpaulin Subsidy Scheme 2026

ಇದನ್ನೂ ಓದಿ: Pumpset Akrama Sakrama Yojana- ಪಂಪ್‌ಸೆಟ್ ಅಕ್ರಮ-ಸಕ್ರಮ ಯೋಜನೆ: ರೈತರಿಗೆ ಹಗಲು ಹೊತ್ತಲ್ಲೇ 7 ಗಂಟೆ ಉಚಿತ ವಿದ್ಯುತ್

Eligibility Criteria – ಅರ್ಜಿ ಸಲ್ಲಿಸಲು ಅರ್ಹತೆಗಳು

ಈ ಯೋಜನೆಯ ಲಾಭ ಪಡೆಯಲು ರೈತರು ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:

  • ಅರ್ಜಿದಾರರು ಕರ್ನಾಟಕ ರಾಜ್ಯದ ಕಾಯಂ ನಿವಾಸಿ ಆಗಿರಬೇಕು
  • ಸ್ವಂತ ಜಮೀನು ಹೊಂದಿರಬೇಕು ಅಥವಾ ಲೀಸ್ ಆಧಾರದ ಮೇಲೆ ಕೃಷಿ ಮಾಡುತ್ತಿರಬೇಕು
  • ಕೃಷಿ ಇಲಾಖೆಯ FRUITS / ಇ-ಕೃಷಿ ಪೋರ್ಟಲ್‌ನಲ್ಲಿ ನೋಂದಾಯಿತ ರೈತ ಆಗಿರಬೇಕು
  • ಕಳೆದ 3 ವರ್ಷಗಳಲ್ಲಿ ಇದೇ ಯೋಜನೆಯಡಿ ಟಾರ್ಪಾಲಿನ್ ಪಡೆದಿರಬಾರದು

ಇದನ್ನೂ ಓದಿ: Bhu Odetan Yojana- ಸ್ವಂತ ಜಮೀನು ಖರೀದಿಸಲು ಸರ್ಕಾರದಿಂದ 12.50 ಲಕ್ಷ ರೂ. ವರೆಗೆ ಹಣಕಾಸು ನೆರವು!

Required Documents – ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

WhatsApp Group Join Now
Telegram Group Join Now

ರೈತ ಸಂಪರ್ಕ ಕೇಂದ್ರಕ್ಕೆ ಹೋಗುವಾಗ ಈ ದಾಖಲೆಗಳನ್ನು ಕಡ್ಡಾಯವಾಗಿ ಕೊಂಡೊಯ್ಯಬೇಕು:

  • ಆಧಾರ್ ಕಾರ್ಡ್ ಪ್ರತೀ
  • ಇತ್ತೀಚಿನ ಪಹಣಿ (RTC)
  • ಬ್ಯಾಂಕ್ ಪಾಸ್‌ಬುಕ್ ಮೊದಲ ಪುಟದ ಪ್ರತೀ
  • ಜಾತಿ ಪ್ರಮಾಣ ಪತ್ರ (SC/ST ರೈತರಿಗೆ ಮಾತ್ರ)
  • ಪಾಸ್‌ಪೋರ್ಟ್ ಸೈಜ್ ಫೋಟೋ
  • ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ

ಇದನ್ನೂ ಓದಿ: SBI Digital Personal Loan- ಎಸ್‌ಬಿಐ ಡಿಜಿಟಲ್ ಪರ್ಸನಲ್ ಲೋನ್ | ₹35 ಲಕ್ಷದ ವರೆಗೆ ಸಾಲ ಸೌಲಭ್ಯ | ಸಂಪೂರ್ಣ ಮಾಹಿತಿ ಇಲ್ಲಿದೆ…

Application Process – ಅರ್ಜಿ ಎಲ್ಲಿ ಮತ್ತು ಹೇಗೆ ಸಲ್ಲಿಸಬೇಕು?

ಈ ಯೋಜನೆ ಅಡಿಯಲ್ಲಿ ರೈತರು ತಾಡಪತ್ರಿ ಪಡೆಯಲು ನೇರವಾಗಿ ಅರ್ಜಿ ಸಲಿಸಬೇಕು. ರೈತರು ನೇರವಾಗಿ ತಮ್ಮ ಹೋಬಳಿ ಅಥವಾ ತಾಲೂಕು ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರ (Raita Samparka Kendra – RSK)ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.

ರೈತ ಸಂಪರ್ಕ ಕೇಂದ್ರದಲ್ಲಿ ನಿಗದಿತ ನಮೂನೆಯಲ್ಲಿ ಅರ್ಜಿ ತುಂಬಬೇಕು. ಅರ್ಜಿ ಸಲ್ಲಿಸಿದ ನಂತರ ರೈತರು ಮರೆಯದೇ ಸ್ವೀಕೃತಿ ರಸೀದಿ ಪಡೆದುಕೊಳ್ಳಬೇಕು.

ಇದನ್ನೂ ಓದಿ: Karnataka Yashasvini Yojana 2026- ಯಶಸ್ವಿನಿ ಯೋಜನೆಯಡಿ ಹಸುಗೂಸಿನಿಂದ ವೃದ್ಧರ ವರೆಗೂ 5 ಲಕ್ಷ ರೂ. ಉಚಿತ ಚಿಕಿತ್ಸೆ | ಹೊಸ ಮಾರ್ಗಸೂಚಿ ಬಿಡುಗಡೆ

Selection Method – ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

ಸಾಮಾನ್ಯವಾಗಿ ‘ಮೊದಲು ಬಂದವರಿಗೆ ಮೊದಲ ಆದ್ಯತೆ’ ಆಧಾರದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ ಅರ್ಜಿಗಳ ಸಂಖ್ಯೆ ಹೆಚ್ಚಾದರೆ ಲಾಟರಿ ಮೂಲಕ ಆಯ್ಕೆ ನಡೆಯುವ ಸಾಧ್ಯತೆ ಇದೆ.

ರಾಜ್ಯದ ಬಹುತೇಕ ಜಿಲ್ಲೆಗಳ ವಿವಿಧ ತಾಲ್ಲೂಕು ಮಟ್ಟದಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಆಯಾ ಜಿಲ್ಲೆ, ತಾಲ್ಲೂಕುಗಳಲ್ಲಿ ಅನುದಾನದ ಲಭ್ಯತೆಗೆ ಅನುಗುಣವಾಗಿ ಹಂತ ಹಂತವಾಗಿ ಟಾರ್ಪಾಲಿನ್ ವಿತರಣೆ ಮಾಡಲಾಗುತ್ತದೆ.

ರೈತರು ತಮ್ಮ ತಾಲೂಕು ಕೃಷಿ ಅಧಿಕಾರಿ ಅಥವಾ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ ‘ಟಾರ್ಪಾಲಿನ್ ಸಹಾಯಧನ ಯೋಜನೆ – 2026’ ಬಗ್ಗೆ ನಿಖರ ಮಾಹಿತಿ ಪಡೆಯುವುದು ಒಳಿತು.

ಇದನ್ನೂ ಓದಿ: Ashraya Vasathi Yojana- ಆಶ್ರಯ ಮನೆ ಯೋಜನೆಯಡಿ ಸ್ವಂತ ಮನೆ ನಿರ್ಮಾಣಕ್ಕೆ 2 ಲಕ್ಷ ರೂ. ಆರ್ಥಿಕ ನೆರವು

Visit Raita Samparka Kendra – ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ…

ಬೆಳೆ ರಕ್ಷಣೆ ಎನ್ನುವುದು ರೈತರ ಆದಾಯ ರಕ್ಷಣೆಯ ಮೊದಲ ಹೆಜ್ಜೆಯಾಗಿದೆ. ದುಬಾರಿ ದರಕ್ಕೆ ಟಾರ್ಪಾಲಿನ್ ಖರೀದಿಸಲು ಸಾಧ್ಯವಾಗದ ರೈತರಿಗೆ ಈ ಯೋಜನೆ ದೊಡ್ಡ ವರದಾನವಾಗಿದೆ.

ಕಡಿಮೆ ವೆಚ್ಚದಲ್ಲಿ, ಸರ್ಕಾರದ ಸಹಾಯಧನದೊಂದಿಗೆ ಟಾರ್ಪಾಲಿನ್ ಪಡೆಯಲು ಅವಕಾಶವನ್ನು ತಪ್ಪಿಸಿಕೊಳ್ಳದೇ ಇಂದೇ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ.

Google Pay Instant Loan Info- 9 ಲಕ್ಷ ರೂ. ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲಿಯೇ ಅರ್ಜಿ ಹಾಕಿ | ಇಲ್ಲಿದೆ ಸಂಪೂರ್ಣ ಮಾಹಿತಿ…


Spread the love
error: Content is protected !!