Gruha Jyothi Survey: ದಾಖಲೆ ನೀಡದಿದ್ದರೆ ಗೃಹಜ್ಯೋತಿ ಉಚಿತ ಕರೆಂಟ್ ಕಟ್ | ಸರ್ಕಾರದ ಹೊಸ ಎಚ್ಚರಿಕೆ

Spread the love

WhatsApp Group Join Now
Telegram Group Join Now

Gruha Jyothi Survey: ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಮಹತ್ವದ ಮಾಹಿತಿ. ರಾಜ್ಯಾದ್ಯಂತ ಮನೆ-ಮನೆ ಸಮೀಕ್ಷೆ ನಡೆಯುತ್ತಿದ್ದು, ಸಮೀಕ್ಷೆ ಹಾಗೂ ಸರ್ಕಾರದ ಹೊಸ ಸೂಚನೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ…

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ (Gruha Jyothi) ಯೋಜನೆಯ ಫಲಾನುಭವಿಗಳಿಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಯೋಜನೆಯಡಿ ನೋಂದಾಯಿಸಿಕೊAಡಿರುವ ಕುಟುಂಬಗಳ ಮಾಹಿತಿಯನ್ನು ಮರುಪರಿಶೀಲಿಸಲು (Verification) ರಾಜ್ಯಾದ್ಯಂತ ಮನೆ-ಮನೆ ಸಮೀಕ್ಷೆ ನಡೆಯುತ್ತಿದೆ.

ಇದನ್ನೂ ಓದಿ: LPG e-KYC Mandatory: ಎಲ್‌ಪಿಜಿ ಗ್ರಾಹಕರೇ ಗಮನಿಸಿ: ಆಗಸ್ಟ್ 15ರೊಳಗೆ ಇ-ಕೆವೈಸಿ ಮಾಡಿಸದಿದ್ದರೆ ಗ್ಯಾಸ್ ಸಂಪರ್ಕ ಬಂದ್!?

ಈ ವೇಳೆ ಅಗತ್ಯ ದಾಖಲೆಗಳು ಹಾಗೂ ಮಾಹಿತಿ ನೀಡಲು ನಿರಾಕರಿಸಿದರೆ, ಅಂತಹ ಕುಟುಂಬಗಳ ಗೃಹಜ್ಯೋತಿ ಸೌಲಭ್ಯ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಆದರೆ, ಇದುವರೆಗೆ ಯಾವುದೇ ಫಲಾನುಭವಿಯನ್ನು ಯೋಜನೆಯಿಂದ ಕೈಬಿಡಲಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಅಂತಿಮ ನಿರ್ಧಾರವನ್ನು ರಾಜ್ಯ ಸರ್ಕಾರವೇ ಕೈಗೊಳ್ಳಲಿದೆ.

ಇದನ್ನೂ ಓದಿ: India Post Staff Car Driver: 10ನೇ ತರಗತಿ ಪಾಸಾದವರಿಗೆ ಪೋಸ್ಟ್ ಆಫೀಸ್ ಕಾರ್ ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | 63,200 ರೂ. ವರೆಗೂ ಸಂಬಳ

ಏಕೆ ನಡೆಯುತ್ತಿದೆ ಮನೆ-ಮನೆ ಸಮೀಕ್ಷೆ?

ಗೃಹಜ್ಯೋತಿ ಯೋಜನೆಯ ಲಾಭ ನಿಜವಾದ ಅರ್ಹ ಫಲಾನುಭವಿಗಳಿಗೆ ತಲುಪುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಈ ಸಮೀಕ್ಷೆ ಆರಂಭಿಸಿದೆ. ಫಲಾನುಭವಿಗಳ ವೈಯಕ್ತಿಕ ಮಾಹಿತಿ, ವಿದ್ಯುತ್ ಸಂಪರ್ಕದ ವಿವರ ಹಾಗೂ ಅಗತ್ಯ ದಾಖಲೆಗಳನ್ನು ನವೀಕರಿಸುವುದು (Data Update) ಈ ಸಮೀಕ್ಷೆಯ ಮುಖ್ಯ ಉದ್ದೇಶವಾಗಿದೆ.

ಈ ಕಾರ್ಯಕ್ಕಾಗಿ ಮೀಟರ್ ರೀಡರ್‌ಗಳು (Meter Readers) ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ: Karnataka Voter List SIR: ವೋಟ್ ಲಿಸ್ಟ್‌ನಿಂದ ಕರ್ನಾಟಕದ 1 ಕೋಟಿ ಮತದಾರರ ಹೆಸರು ಕಟ್ | ನಿಮ್ಮ ಹೆಸರು ಇದೆಯೇ? ಈಗಲೇ ಹೀಗೆ ಪರಿಶೀಲಿಸಿ

ದಾಖಲೆ ನೀಡದಿದ್ದರೆ ಏನಾಗಬಹುದು?

ಸಮೀಕ್ಷೆ ವೇಳೆ ಮನೆ ಸದಸ್ಯರು ಮಾಹಿತಿ ನೀಡಲು ನಿರಾಕರಿಸಿದರೆ ಅಥವಾ ಅಗತ್ಯ ದಾಖಲೆಗಳನ್ನು ಸಲ್ಲಿಸದಿದ್ದರೆ, ಆ ಕುಟುಂಬದ ಹೆಸರು ಗೃಹಜ್ಯೋತಿ ಯೋಜನೆಯ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಇದೇ ವೇಳೆ ಮನೆಗೆ ಭೇಟಿ ನೀಡಿದಾಗ ಫಲಾನುಭವಿಗಳು ಮನೆಯಲ್ಲಿ ಇಲ್ಲದಿದ್ದರೆ, ಮತ್ತೊಮ್ಮೆ ಭೇಟಿ ನೀಡುವ ಅವಕಾಶವನ್ನೂ ಮೀಟರ್ ರೀಡರ್‌ಗಳಿಗೆ ನೀಡುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ.

ಇದನ್ನೂ ಓದಿ: Crop Insurance Compensation: ರೈತರಿಗೆ ₹585.72 ಕೋಟಿ ಬೆಳೆ ವಿಮೆ ಪರಿಹಾರ ಮಂಜೂರು | ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ

Gruha Jyothi Survey
Gruha Jyothi Survey

ವಿಶೇಷ ಶಿಬಿರಗಳಿಗೂ ಸರ್ಕಾರದ ಚಿಂತನೆ

ಮನೆ-ಮನೆ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗದ ಫಲಾನುಭವಿಗಳಿಗೆ ಅನುಕೂಲವಾಗುವಂತೆ ರಾಜ್ಯದ ಎಲ್ಲಾ ಎಸ್ಕಾಂ (ESCOM) ಕಚೇರಿಗಳಲ್ಲಿ ವಿಶೇಷ ಸಮೀಕ್ಷಾ ಶಿಬಿರಗಳನ್ನು (Special Survey Camp) ಆಯೋಜಿಸಲು ಸರ್ಕಾರದ ಅನುಮತಿ ಕೋರಲಾಗಿದೆ.

ಈ ಶಿಬಿರಗಳಲ್ಲಿ ಫಲಾನುಭವಿಗಳು ಸ್ವತಃ ಹಾಜರಾಗಿ ತಮ್ಮ ದಾಖಲೆಗಳು ಮತ್ತು ಅಗತ್ಯ ಮಾಹಿತಿಯನ್ನು ಸಲ್ಲಿಸಿ ಪರಿಶೀಲನೆ ಪೂರ್ಣಗೊಳಿಸಬಹುದು. ಇದರಿಂದ ಅರ್ಹರು ಯೋಜನೆಯ ಸೌಲಭ್ಯ ಕಳೆದುಕೊಳ್ಳದಂತೆ ನೋಡಿಕೊಳ್ಳುವ ಉದ್ದೇಶ ಸರ್ಕಾರದ್ದಾಗಿದೆ.

WhatsApp Group Join Now
Telegram Group Join Now

ಇದನ್ನೂ ಓದಿ: Gruha Jyothi Free Electricity: ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ಶಾಕ್: 82,220+ ಕುಟುಂಬಗಳಿಗೆ ಉಚಿತ ವಿದ್ಯುತ್ ಬಂದ್ | ನಿಮ್ಮ ಹೆಸರೂ ಇದೆಯೇ?

ಎಷ್ಟು ಮನೆಗಳ ಸಮೀಕ್ಷೆ ಪೂರ್ಣ?

ಇಂಧನ ಇಲಾಖೆಯ ಅಂಕಿ-ಅAಶಗಳ ಪ್ರಕಾರ, ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆಯಡಿ 1,65,32,652 ಗೃಹ ವಿದ್ಯುತ್ ಸಂಪರ್ಕಗಳು ನೋಂದಾಯಿಸಿಕೊAಡಿವೆ.

ಅವುಗಳಲ್ಲಿ ಆಗಸ್ಟ್ 2ರವರೆಗೆ 91,50,081 ಮನೆಗಳಲ್ಲಿ ಸಮೀಕ್ಷೆ ಪೂರ್ಣಗೊಂಡಿದ್ದು, ಇನ್ನೂ 73,82,571 ಮನೆಗಳ ಮಾಹಿತಿ ಸಂಗ್ರಹ ಬಾಕಿಯಿದೆ. ಇದರಿಂದ ಸಮೀಕ್ಷೆ ಕಾರ್ಯ ಇನ್ನೂ ದೊಡ್ಡ ಪ್ರಮಾಣದಲ್ಲಿ ಮುಂದುವರಿದಿದೆ.

ಇದನ್ನೂ ಓದಿ: Two Month Ration Distribution: ರೇಷನ್ ಕಾರ್ಡುದಾರರಿಗೆ ಗುಡ್ ನ್ಯೂಸ್: ಒಂದೇ ತಿಂಗಳಲ್ಲಿ ಎರಡು ಬಾರಿ ಪಡಿತರ ವಿತರಣೆ | ಯಾರಿಗೆ ಎಷ್ಟು ಧಾನ್ಯ ಸಿಗಲಿದೆ?

ಯಾವ ಎಸ್ಕಾಂ ವ್ಯಾಪ್ತಿಯಲ್ಲಿ ಎಷ್ಟು ಸಮೀಕ್ಷೆ?

ಇಲ್ಲಿಯವರೆಗೆ ವಿವಿಧ ವಿದ್ಯುತ್ ಸರಬರಾಜು ಸಂಸ್ಥೆಗಳ (ESCOMs) ವ್ಯಾಪ್ತಿಯಲ್ಲಿ ಪೂರ್ಣಗೊಂಡ ಸಮೀಕ್ಷೆಗಳ ವಿವರ ಹೀಗಿದೆ:

  • ಬೆಸ್ಕಾಂ (BESCOM) – 37,28,114 ಫಲಾನುಭವಿಗಳು
  • ಸಿಇಎಸ್‌ಸಿ (CESC – ಮೈಸೂರು) – 11,09,782 ಫಲಾನುಭವಿಗಳು
  • ಗೆಸ್ಕಾಂ (GESCOM) – 8,50,786 ಫಲಾನುಭವಿಗಳು
  • ಹೆಸ್ಕಾಂ (HESCOM) – 22,03,401 ಫಲಾನುಭವಿಗಳು
  • ಮೆಸ್ಕಾಂ (MESCOM) – 12,31,289 ಫಲಾನುಭವಿಗಳು
  • ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘ – 26,709 ಫಲಾನುಭವಿಗಳು

ಇದನ್ನೂ ಓದಿ: ITR Filing: ಐಟಿಆರ್ ಸಲ್ಲಿಕೆ | ಯಾರಿಗೆ ದಂಡ, ಯಾರಿಗೆ ವಿನಾಯಿತಿ? ಸರ್ಕಾರದ ಹೊಸ ಅಪ್ಡೇಟ್ ಇಲ್ಲಿದೆ…

ಅಪಾರ್ಟ್ಮೆಂಟ್‌ಗಳಲ್ಲಿ ಎದುರಾಗಿರುವ ಸಮಸ್ಯೆ

ಬೆಸ್ಕಾಂ ವ್ಯಾಪ್ತಿಯ ವೈಟ್‌ಫೀಲ್ಡ್, ಮಹದೇವಪುರ ಹಾಗೂ ಸರ್ಜಾಪುರ ಸೇರಿದಂತೆ ಕೆಲವು ದೊಡ್ಡ ಅಪಾರ್ಟ್ಮೆಂಟ್‌ಗಳಲ್ಲಿ ಮೀಟರ್ ರೀಡರ್‌ಗಳಿಗೆ ಪ್ರವೇಶ ನೀಡುತ್ತಿಲ್ಲ ಎಂಬ ದೂರುಗಳು ಇಲಾಖೆಗೆ ಬಂದಿವೆ. ಇದೇ ವೇಳೆ ಕೆಲವು ಫಲಾನುಭವಿಗಳು ತಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಲು ಹಿಂದೇಟು ಹಾಕುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇಂತಹ ಸಂದರ್ಭಗಳಲ್ಲಿ ಸಮೀಕ್ಷೆ ನಡೆಸುವ ಆಪ್‌ನಲ್ಲಿ “ಮಾಹಿತಿ ನೀಡಲು ನಿರಾಕರಿಸಿದ್ದಾರೆ” ಎಂಬ ಆಯ್ಕೆಯನ್ನು ದಾಖಲಿಸಲಾಗುತ್ತದೆ. ಜೊತೆಗೆ ಸಂಬAಧಪಟ್ಟ ಫಲಾನುಭವಿಯಿಂದ ಸಹಿಯನ್ನೂ ಪಡೆಯಲಾಗುತ್ತದೆ.

ಇದನ್ನೂ ಓದಿ: LPG Cylinder Price: ಎಲ್‌ಪಿಜಿ ಸಿಲಿಂಡರ್ ಬೆಲೆ ಭರ್ಜರಿ ಇಳಿಕೆ

ಅಧಿಕಾರಿಗಳು ಏನು ಹೇಳಿದ್ದಾರೆ?

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎನ್. ಶಿವಶಂಕರ್ ಅವರ ಪ್ರಕಾರ, ಇದುವರೆಗೆ ಯಾವುದೇ ಫಲಾನುಭವಿಯನ್ನು ಗೃಹಜ್ಯೋತಿ ಯೋಜನೆಯಿಂದ ಕೈಬಿಡಲಾಗಿಲ್ಲ.

ಯಾರನ್ನಾದರೂ ಯೋಜನೆಯ ಪಟ್ಟಿಯಿಂದ ಹೊರಗಿಡಬೇಕೇ ಅಥವಾ ಬೇಡವೇ ಎಂಬ ಅಂತಿಮ ನಿರ್ಧಾರವನ್ನು ರಾಜ್ಯ ಸರ್ಕಾರವೇ ಕೈಗೊಳ್ಳಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: PM Kisan Scheme Extended: ರೈತರಿಗೆ ಭರ್ಜರಿ ಗುಡ್‌ನ್ಯೂಸ್: ಪಿಎಂ-ಕಿಸಾನ್ ಹಣ ಹೆಚ್ಚಳ | ಕೇಂದ್ರದಿಂದ ₹3.15 ಲಕ್ಷ ಕೋಟಿ ಅನುದಾನ

ಫಲಾನುಭವಿಗಳು ಏನು ಮಾಡಬೇಕು?

ಗೃಹಜ್ಯೋತಿ ಯೋಜನೆಯ ಸೌಲಭ್ಯ ನಿರಂತರವಾಗಿ ಪಡೆಯಲು ಫಲಾನುಭವಿಗಳು ಸಮೀಕ್ಷೆ ವೇಳೆ ಅಧಿಕಾರಿಗಳೊಂದಿಗೆ ಸಹಕರಿಸುವುದು ಅಗತ್ಯವಾಗಿದೆ.

  • ಮೀಟರ್ ರೀಡರ್‌ಗಳು ಮನೆಗೆ ಬಂದಾಗ ಅಗತ್ಯ ದಾಖಲೆಗಳನ್ನು ತೋರಿಸಿ.
  • ಕೇಳಲಾಗುವ ಮಾಹಿತಿಯನ್ನು ಸರಿಯಾಗಿ ನೀಡಿ.
  • ಮೊದಲ ಬಾರಿ ಭೇಟಿ ನೀಡಿದಾಗ ಮನೆಯಲ್ಲಿ ಇಲ್ಲದಿದ್ದರೆ, ನಂತರ ನಡೆಯುವ ಸಮೀಕ್ಷೆ ಅಥವಾ ವಿಶೇಷ ಶಿಬಿರದಲ್ಲಿ ಭಾಗವಹಿಸಿ.
  • ಯಾವುದೇ ಗೊಂದಲ ಇದ್ದರೆ ಸಂಬAಧಿತ ಎಸ್ಕಾಂ ಕಚೇರಿಯನ್ನು ಸಂಪರ್ಕಿಸಿ.

ಇದನ್ನೂ ಓದಿ: Karmikara Makkalige Scholarship 2026: ಕಾರ್ಮಿಕರ ಮಕ್ಕಳಿಗೆ ₹25,000 ವರೆಗೆ ವಿದ್ಯಾರ್ಥಿವೇತನ | ಆನ್‌ಲೈನ್ ಅರ್ಜಿ ಆಹ್ವಾನ

ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮಾಹಿತಿಯನ್ನು ನವೀಕರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಸಮಗ್ರ ಸಮೀಕ್ಷೆ ನಡೆಸುತ್ತಿದೆ. ದಾಖಲೆಗಳು ಮತ್ತು ಮಾಹಿತಿ ನೀಡಲು ನಿರಾಕರಿಸಿದರೆ ಸೌಲಭ್ಯ ಕಳೆದುಕೊಳ್ಳುವ ಸಾಧ್ಯತೆ ಕುರಿತು ಎಚ್ಚರಿಕೆ ನೀಡಲಾಗಿದ್ದರೂ, ಸದ್ಯಕ್ಕೆ ಯಾವುದೇ ಫಲಾನುಭವಿಯನ್ನು ಯೋಜನೆಯಿಂದ ಕೈಬಿಡಲಾಗಿಲ್ಲ.

ಅಂತಿಮ ತೀರ್ಮಾನವನ್ನು ಸರ್ಕಾರವೇ ಕೈಗೊಳ್ಳಲಿದ್ದು, ಅರ್ಹ ಫಲಾನುಭವಿಗಳು ಸಮೀಕ್ಷೆಯಲ್ಲಿ ಸಹಕರಿಸಿ ತಮ್ಮ ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುವುದು ಅತ್ಯಂತ ಮುಖ್ಯವಾಗಿದೆ.

LPG e-KYC Mandatory: ಎಲ್‌ಪಿಜಿ ಗ್ರಾಹಕರೇ ಗಮನಿಸಿ: ಆಗಸ್ಟ್ 15ರೊಳಗೆ ಇ-ಕೆವೈಸಿ ಮಾಡಿಸದಿದ್ದರೆ ಗ್ಯಾಸ್ ಸಂಪರ್ಕ ಬಂದ್!?


Spread the love
error: Content is protected !!