Cow Rubber Mat Silage Bag Scheme: ಹಸುಗಳಿಗೆ ರಬ್ಬರ್ ಮ್ಯಾಟ್, ಸೈಲೇಜ್ ಬ್ಯಾಗ್ ವಿತರಣೆ | ಪಶು ಇಲಾಖೆಯಿಂದ ಅರ್ಜಿ ಆಹ್ವಾನ

Spread the love

WhatsApp Group Join Now
Telegram Group Join Now

Cow Rubber Mat Silage Bag Scheme: ಹಸುಗಳಿಗೆ ರಬ್ಬರ್ ಮ್ಯಾಟ್ ಹಾಗೂ ಸೈಲೇಜ್ ಬ್ಯಾಗ್ ವಿತರಣೆಗೆ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ…

ರಾಜ್ಯದಲ್ಲಿ ಹೈನುಗಾರಿಕೆ (Dairy Farming) ನಡೆಸುತ್ತಿರುವ ರೈತರಿಗೆ ಹಾಗೂ ಪಶುಪಾಲಕರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಉಪಯುಕ್ತ ಯೋಜನೆ ಜಾರಿಯಾಗಿದೆ. ಹೈನುಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಪರಿಚಯಿಸುವುದರ ಜೊತೆಗೆ ಪಶುಗಳ ಆರೋಗ್ಯ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ.

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ (Department of Animal Husbandry & Veterinary Services)ವತಿಯಿಂದ 2025-26ನೇ ಸಾಲಿನ ತಾಲ್ಲೂಕು ಪಂಚಾಯತ್ ಅನುದಾನದಡಿ ವೈಜ್ಞಾನಿಕ ತಾಂತ್ರಿಕತೆ ಪರಿಚಯ ಕಾರ್ಯಕ್ರಮ ಅಡಿಯಲ್ಲಿ ಹಸುಗಳಿಗೆ ರಬ್ಬರ್ ನೆಲಹಾಸು (Rubber Mat) ಮತ್ತು ಸೈಲೇಜ್ ಬ್ಯಾಗ್ (Silage Bag) ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಓದಿ: State Government Drought Declaration: ರಾಜ್ಯ ಸರ್ಕಾರದಿಂದ ಬರ ಘೋಷಣೆ | ರೈತರಿಗೆ ₹22,500 ವರೆಗೂ ಪರಿಹಾರ?

ಯಾರು ಅರ್ಜಿ ಸಲ್ಲಿಸಬಹುದು?

ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವು ಅರ್ಹತೆಗಳನ್ನು ನಿಗದಿಪಡಿಸಲಾಗಿದೆ. ಹೈನುಗಾರಿಕೆಯಲ್ಲಿ ಅನುಭವ ಹೊಂದಿರುವವರು ಹಾಗೂ ಕನಿಷ್ಠ 2 ರಾಸುಗಳನ್ನು (ಜಾನುವಾರುಗಳನ್ನು) ಸಾಕುತ್ತಿರುವವರು ಅರ್ಜಿ ಸಲ್ಲಿಸಬಹುದು.

ಇದರ ಜೊತೆಗೆ ಸ್ಥಳೀಯ ಪಶುವೈದ್ಯಾಧಿಕಾರಿ ಅಥವಾ ಪಶುವೈದ್ಯರಿಂದ ದೃಢೀಕರಣ ಪತ್ರ (Certificate) ಪಡೆದಿರಬೇಕು. ಸರ್ಕಾರದ ನಿಯಮಾನುಸಾರ ಮಹಿಳೆಯರು, ಅಂಗವಿಕಲರು ಹಾಗೂ ಅಲ್ಪಸಂಖ್ಯಾತರಿಗೆ ಮೀಸಲಾತಿ (Reservation) ಸೌಲಭ್ಯವೂ ಲಭ್ಯವಿದೆ.

ಇದನ್ನೂ ಓದಿ: Panchayat Election 2026: ಪಂಚಾಯಿತಿ ಫೈಟ್ 2026: ಗ್ರಾಪಂ ಜೊತೆಗೆ ತಾಪಂ, ಜಿಪಂ ಚುನಾವಣೆಗೂ ಗ್ರೀನ್ ಸಿಗ್ನಲ್ | ಸರ್ಕಾರದಿಂದ ಮಹತ್ವದ ಸಿದ್ಧತೆ

ಫ್ರೂಟ್ ಐಡಿ (Fruit ID) ಕಡ್ಡಾಯ

ಯೋಜನೆಯಡಿ ಆಯ್ಕೆಯಾಗುವ ಪ್ರತಿಯೊಬ್ಬ ಫಲಾನುಭವಿಯೂ ತಮ್ಮ ಜಾನುವಾರುಗಳಿಗೆ ಫ್ರೂಟ್ ಐಡಿ (Fruit ID) ಹೊಂದಿರಬೇಕು. ಆದ್ದರಿಂದ ಈಗಾಗಲೇ ಫೂಟ್ ಐಡಿ ಮಾಡಿಸದವರು ತಮ್ಮ ವ್ಯಾಪ್ತಿಯ ಪಶುವೈದ್ಯರನ್ನು ಸಂಪರ್ಕಿಸಿ ಈ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳುವುದು ಉತ್ತಮ.

ಇದನ್ನೂ ಓದಿ: Hasu Emme Kharidi Sahayadhana: ಹಸು, ಎಮ್ಮೆ ಖರೀದಿಗೆ ಸರ್ಕಾರದ ಆರ್ಥಿಕ ನೆರವು | ಮಹಿಳೆಯರಿಂದ ಅರ್ಜಿ ಆಹ್ವಾನ

Cow Rubber Mat Silage Bag Scheme
Cow Rubber Mat Silage Bag Scheme

ಎಷ್ಟು ಸಹಾಯಧನ ಸಿಗುತ್ತದೆ?

ಈ ಯೋಜನೆಯಡಿ ರಬ್ಬರ್ ನೆಲಹಾಸು ಹಾಗೂ ಸೈಲೇಜ್ ಬ್ಯಾಗ್ ಖರೀದಿಗೆ ಸರ್ಕಾರ ಶೇ.50ರಷ್ಟು (50% Subsidy) ವೆಚ್ಚವನ್ನು ಭರಿಸುತ್ತದೆ. ಉಳಿದ ಶೇ.50ರಷ್ಟು ಮೊತ್ತವನ್ನು ಫಲಾನುಭವಿಯೇ ಪಾವತಿಸಬೇಕಾಗುತ್ತದೆ.

ಈ ಸೌಲಭ್ಯ ಹಲವು ವರ್ಷಗಳಿಂದ ಯಶಸ್ವಿಯಾಗಿ ಜಾರಿಯಲ್ಲಿದ್ದು, ಅರ್ಹ ಹೈನುಗಾರರಿಗೆ ಪ್ರತಿವರ್ಷ ಹಂತ ಹಂತವಾಗಿ ವಿತರಿಸಲಾಗುತ್ತಿದೆ.

ಇದನ್ನೂ ಓದಿ: Crop Insurance Release: ರೈತರಿಗೆ ಬೆಳೆ ವಿಮೆ ಪರಿಹಾರ ಬಿಡುಗಡೆ: ₹585.72 ಕೋಟಿ ಮಂಜೂರು, ಮೊಬೈಲ್‌ನಲ್ಲೇ ಸ್ಟೇಟಸ್ ಪರಿಶೀಲಿಸುವುದು ಹೇಗೆ?

ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ಸೌಲಭ್ಯ

ಈ ಯೋಜನೆಯಡಿ ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ರಬ್ಬರ್ ನೆಲಹಾಸು ಹಾಗೂ ಸೈಲೇಜ್ ಬ್ಯಾಗ್ ವಿತರಿಸಲಾಗುತ್ತದೆ. ಇದರಿಂದ ಹೆಚ್ಚಿನ ಸಂಖ್ಯೆಯ ಹೈನುಗಾರರಿಗೆ ಯೋಜನೆಯ ಲಾಭ ದೊರೆಯುವ ನಿರೀಕ್ಷೆಯಿದೆ.

ಇದನ್ನೂ ಓದಿ: Podi Process Land Subdivision: ಜಮೀನು ಪೋಡಿ ಮಾಡಿಸಿಕೊಳ್ಳುವುದು ಹೇಗೆ? ರೈತರಿಗೆ ಹಂತ-ಹಂತದ ಮಾಹಿತಿ

ಕೆಎಂಎಫ್ (KMF) ಮೂಲಕವೂ ವಿತರಣೆ

WhatsApp Group Join Now
Telegram Group Join Now

ರಾಜ್ಯ ಸರ್ಕಾರದ ಈ ಯೋಜನೆಯ ಜೊತೆಗೆ ಕರ್ನಾಟಕ ಹಾಲು ಮಹಾಮಂಡಳ (KMF) ಸಹ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಅರ್ಹ ಫಲಾನುಭವಿಗಳಿಗೆ ರಬ್ಬರ್ ನೆಲಹಾಸು ಮತ್ತು ಸೈಲೇಜ್ ಬ್ಯಾಗ್ ವಿತರಿಸುವ ಕಾರ್ಯವನ್ನು ಕೈಗೊಳ್ಳಲಿದೆ.

ಇದನ್ನೂ ಓದಿ: Karnataka Farm Loan Waiver: ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಹಿನ್ನಲೆ ರೈತರ ಸಾಲ ಮನ್ನಾ | ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುಳಿವು!

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ರೈತರು ಮತ್ತು ಪಶುಪಾಲಕರು ತಮ್ಮ ಜಿಲ್ಲೆಯ ಮುಖ್ಯ ಪಶುವೈದ್ಯಾಧಿಕಾರಿಗಳ ಕಚೇರಿ ಅಥವಾ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಕಚೇರಿಯಿಂದ ಅರ್ಜಿ ನಮೂನೆಯನ್ನು ಪಡೆದುಕೊಳ್ಳಬಹುದು.

ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಸಂಬಂಧಿತ ಕಚೇರಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಜುಲೈ 18 ಕೊನೆಯ ದಿನಾಂಕವಾಗಿದೆ. ಆದ್ದರಿಂದ ಆಸಕ್ತರು ಕೊನೆಯ ಕ್ಷಣದವರೆಗೆ ಕಾಯದೆ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸುವುದು ಒಳಿತು.

ಇದನ್ನೂ ಓದಿ: PM-Kisan Hosa arji: ಪಿಎಂ ಕಿಸಾನ್ ಹೊಸ ಅರ್ಜಿ ಆಹ್ವಾನ | ಯಾವ ರೈತರು ಅರ್ಜಿ ಹಾಕಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

ಅಗತ್ಯ ದಾಖಲೆಗಳು

ಅರ್ಜಿಯೊಂದಿಗೆ ಸಾಮಾನ್ಯವಾಗಿ ಈ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

  1. ಭರ್ತಿ ಮಾಡಿದ ಅರ್ಜಿ ನಮೂನೆ
  2. ಸ್ಥಳೀಯ ಪಶುವೈದ್ಯರ ದೃಢೀಕರಣ ಪತ್ರ
  3. ಫ್ರೂಟ್ ಐಡಿ (Fruit ID) ವಿವರ
  4. ಆಧಾರ್ ಕಾರ್ಡ್ ಪ್ರತಿ
  5. ಅಗತ್ಯವಿದ್ದರೆ ಜಾತಿ ಅಥವಾ ಮೀಸಲಾತಿ ಸಂಬಂಧಿತ ಪ್ರಮಾಣಪತ್ರ
  6. ಇಲಾಖೆ ಸೂಚಿಸಿರುವ ಇತರೆ ದಾಖಲೆಗಳು

ಇದನ್ನೂ ಓದಿ: Desi Cow 20 Litres Milk: ₹15 ಸಾವಿರದಲ್ಲಿ 20 ಲೀಟರ್ ಹಾಲು ಕೊಡುವ ನಾಟಿ ಹಸು | ರೈತರಿಗೆ ಬಂಪರ್ ಅವಕಾಶ

ಕೂಡಲೇ ಅರ್ಜಿ ಹಾಕಿ

ಹೈನುಗಾರಿಕೆಯನ್ನು ಆಧುನಿಕ ಹಾಗೂ ಲಾಭದಾಯಕವಾಗಿಸಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅವುಗಳಲ್ಲಿ ರಬ್ಬರ್ ನೆಲಹಾಸು ಮತ್ತು ಸೈಲೇಜ್ ಬ್ಯಾಗ್ ವಿತರಣೆ ಯೋಜನೆಯೂ ಪ್ರಮುಖವಾಗಿದೆ.

ಹಸುಗಳ ಆರೋಗ್ಯ ಕಾಪಾಡುವುದು, ಹಾಲಿನ ಉತ್ಪಾದನೆ ಸುಧಾರಿಸುವುದು ಹಾಗೂ ಮೇವು ಸಂಗ್ರಹವನ್ನು ವೈಜ್ಞಾನಿಕವಾಗಿ ನಿರ್ವಹಿಸಲು ಈ ಸೌಲಭ್ಯ ಸಹಕಾರಿಯಾಗಲಿದೆ. ಅರ್ಹ ರೈತರು ಈ ಅವಕಾಶವನ್ನು ಬಳಸಿಕೊಂಡು ಜುಲೈ 18ರೊಳಗೆ ಅರ್ಜಿ ಸಲ್ಲಿಸುವುದು ಉತ್ತಮ.

Crop Insurance Compensation: ರೈತರಿಗೆ ಸಿಹಿ ಸುದ್ದಿ: 55,326 ರೈತರ ಖಾತೆಗೆ ಬೆಳೆ ವಿಮೆ ಹಣ ಜಮಾ | ನಿಮ್ಮ ಬ್ಯಾಂಕ್ ಖಾತೆ ಚೆಕ್ ಮಾಡಿ…


Spread the love
error: Content is protected !!