BPL Ration Card- 2.86 ಲಕ್ಷ ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ | ಆಹಾರ ಇಲಾಖೆಯ ಮಹತ್ವದ ಮಾಹಿತಿ ಇಲ್ಲಿದೆ…

ರಾಜ್ಯದಲ್ಲಿ ಲಕ್ಷಾಂತರ ಜನ ಹೊಸ ಬಿಪಿಎಲ್ ರೇಷನ್ ಕಾರ್ಡ್’ಗಾಗಿ (BPL Ration Card) ಕಾತುರದಿಂದ ಕಾಯುತ್ತಿದ್ದಾರೆ. ಈ ಬಗ್ಗೆ ಆಹಾರ ಇಲಾಖೆ (Food Department) ನೀಡಿದ ಮಾಹಿತಿ ಇಲ್ಲಿದೆ… ರಾಜ್ಯಾದ್ಯಂತ ಹೊಸ ಬಿಪಿಎಲ್ ರೇಷನ್ ಕಾರ್ಡ್’ಗಾಗಿ ಲಕ್ಷಾಂತರ ಜನ ಕಾತುರದಿಂದ ಕಾಯುತ್ತಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮಾಹಿತಿ ಪ್ರಕಾರ ಈತನಕ ಸಲ್ಲಿಕೆಯಾದ ಅರ್ಜಿಗಳೆಷ್ಟು? ಅದರಲ್ಲಿ ತೀರಸ್ಕೃತವಾದ ಅರ್ಜಿಗಳೆಷ್ಟು? ಅರ್ಹ ಅರ್ಜಿಗಳೆಷ್ಟು? ಅರ್ಹರಿಗೆ ಬಿಪಿಎಲ್ ಕಾರ್ಡ್ ವಿತರಣೆ ಯಾವಾಗ? ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಆಹಾರ … Read more

Gold Price Drop- ಅಕ್ಷಯ ತೃತೀಯಕ್ಕೆ ಪಾತಾಳಕ್ಕೆ ಇಳಿಯುತ್ತಾ ಚಿನ್ನದ ಬೆಲೆ? ಸತತ ಇಳಿಕೆ ಕಾಣುತ್ತಿರುವ ಬಂಗಾರದ ಬೆಲೆ

ಇದೇ ಏಪ್ರಿಲ್ 30ಕ್ಕೆ ಅಕ್ಷಯ ತೃತೀಯ (Akshaya Tritiya 2025). ಭಾರತೀಯರು ಚಿನ್ನ ಖರೀದಿಗೆ ಅತ್ಯಂತ ಶುಭ ದಿನ ಎಂದು ನಂಬಿದ ಸುದಿನ. ಸರಿಯಾಗಿ ಅಕ್ಷಯ ತೃತೀಯ ಸಮೀಪಿಸಿದ ಹೊತ್ತಲ್ಲೇ ಬಂಗಾರದ ಬೆಲೆ ಗಣನೀಯ ಪ್ರಮಾಣದಲ್ಲಿ (Gold prices drop) ಇಳಿಕೆಯಾಗುತ್ತಿರುವುದು ಚಿನ್ನಪ್ರಿಯರ ಉತ್ಸಾಹ ಹೆಚ್ಚಿಸಿದೆ. ಒಂದು ಲಕ್ಷ ರೂಪಾಯಿ ಗಡಿ ಸಮೀಪಿಸಿದ್ದ ಚಿನ್ನದ ಬೆಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ಮತ್ತು ಷೇರುಪೇಟೆ ಕುಸಿತದಿಂದ (Stock market crash) ದಿನೇ ದಿನೇ ಕುಸಿಯುತ್ತಿದೆ. ಕಳೆದ … Read more

PM Surya Ghar Solar Yojana- ನಿಮ್ಮ ಮನೆಗೆ ಉಚಿತ ಸೋಲಾರ್ ಕರೆಂಟ್‌ಗಾಗಿ ಕೇವಲ ಐದೇ ನಿಮಿಷದಲ್ಲಿ ಅರ್ಜಿ ಹಾಕಿ | ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್…

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಪ್ರಧಾನ ಮಂತ್ರಿ ಸೂರ್ಯ ಘರ್ ಮಫ್ತಿ ಬಿಜ್ಲಿ ಯೋಜನೆಯಡಿ (PM Surya Ghar Muft Bijli Yojana) ನಿಮ್ಮ ಮನೆಗೆ ಸೋಲಾರ್ ವಿದ್ಯುತ್ (Solar Rooftop System) ಪಡೆಯಲು ಅರ್ಜಿ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ಮೊದಲೆಲ್ಲ ಸೂರ್ಯ ಘರ್ ಯೋಜನೆಯಡಿ ನೋಂದಣಿಗಾಗಿ ಹಲವು ದಾಖಲೆಗಳೊಂದಿಗೆ ಅರ್ಜಿದಾರರು ಡಿಸ್ಕಾಂ ಕಚೇರಿಗಳಿಗೆ ಅಲೆಯಬೇಕಿತ್ತು. ಈಗ ಅಂತಹ ತಾಪತ್ರಯವಿಲ್ಲ. ಎಲ್ಲವನ್ನೂ ಡಿಜಿಟಲೀಕರಣಗೊಳಿಸಿದ್ದು; ಯೋಜನೆಯ ವೆಬ್‌ಸೈಟ್‌ನಲ್ಲಿ ಕೇವಲ ಐದೇ ನಿಮಿಷದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಸೂರ್ಯ ಘರ್ ಯೋಜನೆ ಪ್ರಾರಂಭವಾದ … Read more

MUDRA Loan- ಶ್ಯೂರಿಟಿ ಇಲ್ಲದೇ ₹20 ಲಕ್ಷ ಸಾಲ | 33 ಲಕ್ಷ ಕೋಟಿ ರೂ. ಸಾಲ ವಿತರಣೆ

ಯಾವುದೇ ಶ್ಯೂರಿಟಿ ಇಲ್ಲದೆ (without Security) ಸಿಗುವ ಸಾಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಮುದ್ರಾ ಯೋಜನೆ’ (Pradhan Mantri Mudra Yojana) ಆರಂಭವಾಗಿ ನಿನ್ನೆ ಏಪ್ರಿಲ್ 8ಕ್ಕೆ ಬರೋಬ್ಬರಿ ಹತ್ತು ವರ್ಷವಾಗಿದೆ. ಈ ಹತ್ತು ವರ್ಷಗಳಲ್ಲಿ 33 ಲಕ್ಷ ಕೋಟಿ ರೂ.ಗಳ ಖಾತರಿ ರಹಿತ ಅಂದರೆ ಯಾವುದೇ ಶ್ಯೂರಿಟಿ ಇಲ್ಲದ ಸಾಲಗಳನ್ನು ವಿತರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಹೌದು, 2015ರಲ್ಲಿ ಆರಂಭಿಸಲಾದ ‘ಪ್ರಧಾನ ಮಂತ್ರಿ ಮುದ್ರಾ ಯೋಜನೆ’ಯಲ್ಲಿ ಸಣ್ಣ ಹಾಗೂ ಸೂಕ್ಷ್ಮ ವ್ಯವಹಾರಗಳಿಗೆ … Read more

PUC Supplementary Exam 2025- ಪಿಯುಸಿ ಫೇಲ್ ಆದವರಿಗೆ ಮತ್ತೊಂದು ಛಾನ್ಸ್ | ಶಿಕ್ಷಣ ಇಲಾಖೆ ಪ್ರಕಟಣೆ

2024-25ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶವನ್ನು (PUC Result 2025) ಶಿಕ್ಷಣ ಸಚಿವ ಮಧು ಬಂಗಾರಪ್ಪ ಇಂದು (ಏಪ್ರಿಲ್ 08) ಘೋಷಿಸಿದ್ದಾರೆ. ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಿದ ಮಕ್ಕಳು ಶೇಕಡಾ 82.54 ರಷ್ಟು ಪಾಸ್ ಆಗಿದ್ದಾರೆ. ಎಂದಿನAತೆ ಈ ಈ ಬಾರಿಯೂ ಸಾಕಷ್ಟು ವಿದ್ಯಾರ್ಥಿಗಳು ಫೇಲ್ ಕೂಡ ಆಗಿದ್ದಾರೆ. ಇಂದು ಫಲಿತಾಂಶ ಬಾರದೇ ಇರುವವರನ್ನು ‘ಅನುತ್ತೀರ್ಣ’ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಅವರಿಗೆ ಎರಡು ಅವಕಾಶ ನೀಡಲಾಗುತ್ತದೆ ಎಂದು ಶಿಕ್ಷಣ ಸಚಿವ … Read more

Electric Scooter Zelio- ₹50,000ಕ್ಕಿಂತ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ | ಝೆಲಿಯೋ ಲಿಟಲ್ ಗ್ರೇಸಿ ಹೊಸ ಸ್ಕೂಟರ್

ಎಲ್ಲೆಲ್ಲೂ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಹಂಗಾಮ ಶುರುವಾಗಿದೆ. ಆದರೆ, ಬೆಲೆ ಕೇಳಿದರೆ ಬೆಚ್ಚಿ ಬೀಳುವಂತಿದೆ. ಓಲಾ (Ola), ಅಥರ್ (Ether), ಟಿವಿಎಸ್ (TVS), ಬಜಾಜ್ (Bajaj) ಮುಂತಾದ ಪ್ರಮುಖ ಕಂಪನಿಗಳ ಎಲೆಕ್ಟ್ರಿಕ್ ಸ್ಕೂಟರ್‌ಗಳು ಒಂದು ಲಕ್ಷ ರೂ.ಗೂ ಹೆಚ್ಚು ಬೆಲೆ ಇರುವುದರಿಂದ ವಿದ್ಯುತ್ ಚಾಲಿತ ಸ್ಕೂಟರ್ ಖರೀದಿಗೆ ಮೀನಮೇಷ ಏಣಿಸುವಂತಾಗಿದೆ. ಆದರೆ, ಇದೀಗ ಅತೀ ಕಡಿಮೆ ಬೆಲೆ, ಹೆಚ್ಚು ಫೀಚರ್ಸ್ ಹೊಂದಿರುವ ವಿಶೇಷ ವಿದ್ಯುತ್ ಚಾಲಿತ ಸ್ಕೂಟರ್‌ವೊಂದು ಗಮನ ಸೆಳೆಯುತ್ತಿದೆ. ಝೆಲಿಯೋ ಲಿಟಲ್ ಗ್ರೇಸಿ (Zelio … Read more

Karnataka Second PUC Result- ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶವನ್ನು ನಿಮ್ಮ ಮೊಬೈಲ್‌ನಲ್ಲೇ ನೋಡಿ…

ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದೆ. ವಿದ್ಯಾರ್ಥಿಗಳು ತಮ್ಮ ಮೊಬೈಲ್‌ನಲ್ಲಿಯೇ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕ ಫಲಿತಾಂಶ ನೋಡಬಹುದು… ಬಹು ನಿರೀಕ್ಷಿತ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಲಿದೆ. ಈ ಸಂಬಂಧ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯಲ್ಲಿ ಇಂದು ಏಪ್ರಿಲ್ 08ರ ಮಧ್ಯಾಹ್ನ 12:30 ಗಂಟೆಗೆ ಸಚಿವರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಇವರ ಅಧ್ಯಕ್ಷತೆಯಲ್ಲಿ ಸುದ್ದಿಗೋಷ್ಠಿ ನಡೆದು, ನಂತರ ಫಲಿತಾಂಶವನ್ನು ಪ್ರಕಟಿಸಲಾಗುವುದು. ಕಳೆದ ವರ್ಷ, ದ್ವಿತೀಯ ಪಿಯುಸಿ … Read more

2nd PUC Result- ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ | ನಿಮ್ಮ ರಿಸೆಲ್ಟ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ…

ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕುತೂಹಲದಿಂದ ಕಾಯುತ್ತಿದ್ದ ಕರ್ನಾಟಕ ದ್ವೀತಿಯ ಪಿಯುಸಿ ಪರೀಕ್ಷೆ-1ರ (Second PU Exam-1) ಫಲಿತಾಂಶ ನಾಳೆ ಪ್ರಕಟವಾಗಲಿದೆ. ರಿಸೆಲ್ಟ್ ನೋಡುವ ಡೈರೆಲ್ಟ್ ಲಿಂಕ್ ಇಲ್ಲಿದೆ… ಹೌದು, ಕಳೆದ ಮಾರ್ಚ್ 01, 2025 ರಿಂದ ಮಾರ್ಚ್ 20,2025ರ ವರೆಗೆ ನಡೆಸಲಾಗಿದ್ದ ಕರ್ನಾಟಕ ದ್ವೀತಿಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ನಾಳೆ ಏಪ್ರಿಲ್ 8ರ ಮಧ್ಯಾಹ್ನ 1:30 ಗಂಟೆಗೆ ಪ್ರಕಟಿಸಲಾಗುವುದಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ (KSEAB) ಅಧಿಕೃತ ಪ್ರಕಟಣೆ ಹೊರಡಿಸಿದೆ. ಸದರಿ ದ್ವಿತೀಯ … Read more

Mobile Canteen Subsidy Scheme- ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಸಂಚಾರಿ ಕ್ಯಾಂಟೀನ್ ವಾಹನ ಖರೀದಿಗೆ ₹5 ಲಕ್ಷ ಸಹಾಯಧನ | ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ (Karnataka State Tourism Development) ಎಸ್.ಸಿ.ಎಸ್.ಪಿ., ಟಿ.ಎಸ್.ಪಿ ಯೋಜನೆ ಅಡಿಯಲ್ಲಿ ಮೊಬೈಲ್ ಕ್ಯಾಂಟೀನ್ (Mobile Canteen) ಖರೀದಿಗೆ ಸಹಾಯಧನ ನೀಡಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ 2024-25ನೇ ಸಾಲಿನ ಕಾರ್ಯಕ್ರಮಗಳ ಭಾಗವಾಗಿ ನಿರುದ್ಯೋಗಿಗಳಿಗೆ ಹೊಸ ಅವಕಾಶವೊಂದನ್ನು ನೀಡುತ್ತಿದೆ. ತಮ್ಮದೇ ಆದ ಮೊಬೈಲ್ ಕ್ಯಾಂಟೀನ್ (ಸಂಚಾರಿ ಆಹಾರ ವಾಹನ) ಆರಂಭಿಸಲು ಬಯಸುವ ಅಭ್ಯರ್ಥಿಗಳಿಗೆ ಸರ್ಕಾರದಿಂದ ಘಟಕ ವೆಚ್ಚದ ಶೇ.70ರಷ್ಟು ಅಥವಾ ಗರಿಷ್ಠ ₹5 ಲಕ್ಷದ ವರೆಗೆ ಹಣಕಾಸು … Read more

BPL Ration Card- ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ | ಅಧಿಕಾರಿಗಳ ಮೇಲೆ ಹೆಚ್ಚಿದ ಒತ್ತಡ | ಹೊಸ ಕಾರ್ಡ್ ಯಾವಾಗ?

ಬಿಪಿಎಲ್ ರೇಷನ್ ಕಾರ್ಡ್’ಗಳ (BPL Ration Card) ವಿತರಣೆ ಮಾಡುವಂತೆ ಆಹಾರ ಇಲಾಖೆಯ ಅಧಿಕಾರಿಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಹಾಗಿದ್ದರೆ ಹೊಸ ರೇಷನ್ ಕಾರ್ಡ್ ವಿತರಣೆ ಯಾವಾಗ? ಇಲ್ಲಿದೆ ಮಾಹಿತಿ… ರಾಜ್ಯದಲ್ಲಿ ಬಿಪಿಎಲ್ (Below Poverty Line) ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಕಳೆದ ಮಾರ್ಚ್’ನಿಂದ 10 ಕೆ.ಜಿ ಅಕ್ಕಿ ವಿತರಣೆ ಆರಂಭವಾಗಿದೆ. ಇದರ ಬೆನ್ನಲ್ಲೇ ಬಿಪಿಎಲ್ ಕಾರ್ಡ್’ಗೆ ಅರ್ಜಿ ಸಲ್ಲಿಸಿರುವ 2.86 ಲಕ್ಷ ಫಲಾನುಭವಿಗಳು ತಮಗೂ ಆದಷ್ಟು ಬೇಗ ಪಡಿತರ ಚೀಟಿ ಮಂಜೂರು ಮಾಡುವಂತೆ ಅಧಿಕಾರಿಗಳಿಗೆ … Read more

error: Content is protected !!