Karnataka Excise Department Recruitment 2026: ಅಬಕಾರಿ ಇಲಾಖೆಯಲ್ಲಿ 1,207 ಹುದ್ದೆಗಳ ನೇಮಕಾತಿ | ಪಿಯುಸಿ, ಪದವೀಧರರಿಗೆ ಭರ್ಜರಿ ಅವಕಾಶ!

Spread the love

WhatsApp Group Join Now
Telegram Group Join Now

Karnataka Excise Department Recruitment 2026: ಕರ್ನಾಟಕ ಅಬಕಾರಿ ಇಲಾಖೆಯಲ್ಲಿ 1,207 ಪೇದೆ ಮತ್ತು ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಸರ್ಕಾರದ ಗ್ರೀನ್ ಸಿಗ್ನಲ್! ಪಿಯುಸಿ, ಡಿಗ್ರಿ ಪಾಸಾದವರು ಭರ್ಜರಿ ಅವಕಾಶ. ಸಂಪೂರ್ಣ ಮಾಹಿತಿ ಇಲ್ಲಿದೆ….

ಸರ್ಕಾರಿ ಕೆಲಸ ಹಿಡಿಯಬೇಕು, ಅದರಲ್ಲೂ ಪೊಲೀಸ್ ಅಥವಾ ಅಬಕಾರಿ ಇಲಾಖೆಯ ಖಾಕಿ ಯೂನಿಫಾರ್ಮ್ (Uniform) ತೊಡಬೇಕು ಎಂದು ಹಗಲಿರುಳು ಓದುತ್ತಿರುವ ಯುವಜನತೆಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ.

ಹೌದು, ಬಹುದಿನಗಳಿಂದ ಕಾಯುತ್ತಿದ್ದ ಕರ್ನಾಟಕ ಅಬಕಾರಿ ಇಲಾಖೆಯ (Karnataka Excise Department) ಬರೋಬ್ಬರಿ 1,207 ಖಾಲಿ ಹುದ್ದೆಗಳ ಭರ್ತಿಗೆ ಕಾಲ ಕೂಡಿಬಂದಿದೆ.

ಇದನ್ನೂ ಓದಿ: Karnataka Farm Loan Waiver: ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಹಿನ್ನಲೆ ರೈತರ ಸಾಲ ಮನ್ನಾ | ಸಿಎಂ ಡಿಕೆ ಶಿವಕುಮಾರ್ ಮಹತ್ವದ ಸುಳಿವು!

ಆರ್ಥಿಕ ಇಲಾಖೆಯ ಗ್ರೀನ್ ಸಿಗ್ನಲ್

ಈ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಲು ಆರ್ಥಿಕ ಇಲಾಖೆಯು (Finance Department) ಅಧಿಕೃತವಾಗಿ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಆದೇಶವನ್ನೂ ಹೊರಡಿಸಿದೆ. ಈ ಬಾರಿಯ ನೇಮಕಾತಿಯಲ್ಲಿ ಸಾಕಷ್ಟು ಮಹತ್ವದ ಬದಲಾವಣೆಗಳಾಗಿದ್ದು, ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ನಿಯಮಗಳನ್ನು ಸರಳಗೊಳಿಸಲಾಗಿದೆ.

ಹಾಗಾದರೆ, ಈ ಹುದ್ದೆಗಳ ವಿವರಗಳೇನು? ಯಾರೆಲ್ಲಾ ಅರ್ಜಿ ಹಾಕಬಹುದು? ಪರೀಕ್ಷೆ ಹೇಗಿರುತ್ತದೆ? ಬನ್ನಿ, ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯೋಣ.

ಇದನ್ನೂ ಓದಿ: Karnataka Cancelled BPL Card: ಹೊಸ ಬಿಪಿಎಲ್ ಕಾರ್ಡ್ ವಿತರಣೆ | ಸರ್ಕಾರದಿಂದ ಸಿಹಿಸುದ್ದಿ

ಯಾವ್ಯಾವ ಹುದ್ದೆಗಳಿಗೆ ನೇಮಕಾತಿ? (Vacancy Details)

ಈ ಬಾರಿ ಒಟ್ಟು 1,207 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಇದರಲ್ಲಿ ಕಲ್ಯಾಣ ಕರ್ನಾಟಕ (Kalyana Karnataka) ಭಾಗದ ಹುದ್ದೆಗಳು ಸಹ ಸೇರಿವೆ. ಹುದ್ದೆಗಳ ಹಂಚಿಕೆ ಹೀಗಿದೆ:

  • ಅಬಕಾರಿ ಪೇದೆ (Excise Constable): 942 ಹುದ್ದೆಗಳು
  • ಅಬಕಾರಿ ಉಪ ನಿರೀಕ್ಷಕ / ಸಬ್ ಇನ್ಸ್‌ಪೆಕ್ಟರ್ (Excise Sub Inspector – ESI): 265 ಹುದ್ದೆಗಳು

ಇದನ್ನೂ ಓದಿ: Desi Cow 20 Litres Milk: ₹15 ಸಾವಿರದಲ್ಲಿ 20 ಲೀಟರ್ ಹಾಲು ಕೊಡುವ ನಾಟಿ ಹಸು | ರೈತರಿಗೆ ಬಂಪರ್ ಅವಕಾಶ

Karnataka Excise Department Recruitment 2026
Karnataka Excise Department Recruitment 2026

ಯಾರು ಅರ್ಜಿ ಸಲ್ಲಿಸಬಹುದು? (Educational Qualification)

ಅಬಕಾರಿ ಪೇದೆ ಹುದ್ದೆಗೆ: ಅಬಕಾರಿ ಪೇದೆ ಆಗಬೇಕೆಂಬ ಕನಸು ಹೊತ್ತವರು ಕಡ್ಡಾಯವಾಗಿ ದ್ವಿತೀಯ ಪಿಯುಸಿ (PUC-II) ಮುಗಿಸಿರಲೇಬೇಕು.

ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ: ಈ ಹುದ್ದೆಗೆ ಅರ್ಜಿ ಹಾಕುವವರು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ (Bachelor’s Degree) ಪಡೆದಿರಬೇಕು.

ಇದನ್ನೂ ಓದಿ: PM-Kisan Hosa arji: ಪಿಎಂ ಕಿಸಾನ್ ಹೊಸ ಅರ್ಜಿ ಆಹ್ವಾನ | ಯಾವ ರೈತರು ಅರ್ಜಿ ಹಾಕಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

ನೇಮಕಾತಿ ನಿಯಮಗಳಲ್ಲಿನ 3 ಬಿಗ್ ಅಪ್‌ಡೇಟ್ಸ್! (Key Changes in C&R Rules)

ಈ ಹಿಂದಿನ ನೇಮಕಾತಿ ಪ್ರಕ್ರಿಯೆಗಳಲ್ಲಿ ಸಾಕಷ್ಟು ಗೊಂದಲ ಮತ್ತು ವಿಳಂಬವಾಗುತ್ತಿತ್ತು. ಇದನ್ನು ತಪ್ಪಿಸಲು ಸರ್ಕಾರ ವೃಂದ ಮತ್ತು ನೇಮಕಾತಿ ನಿಯಮಗಳಿಗೆ (C&R Rules) ಮೇಜರ್ ಸರ್ಜರಿ ಮಾಡಿದೆ:

ಜಿಲ್ಲಾಮಟ್ಟದ ಪಟ್ಟಿ ರದ್ದು: ಈ ಹಿಂದೆ ಜಿಲ್ಲಾಧಿಕಾರಿಗಳು ನೇಮಕಾತಿ ಪ್ರಾಧಿಕಾರಿಯಾಗಿದ್ದರು ಮತ್ತು ಜಿಲ್ಲಾವಾರು ಆಯ್ಕೆ ಪಟ್ಟಿ ಇರುತ್ತಿತ್ತು. ಆದರೆ ಇನ್ಮುಂದೆ ಇಡೀ ರಾಜ್ಯಕ್ಕೆ ಒಂದೇ ‘ಅಂತಿಮ ರ್ಯಾಂಕಿಂಗ್ ಪಟ್ಟಿ’ (State-level Merit List) ಸಿದ್ಧಪಡಿಸಲಾಗುತ್ತದೆ. ಹಾಗಾಗಿ, ಅಬಕಾರಿ ಆಯುಕ್ತರೇ (Excise Commissioner)ನೇಮಕಾತಿ ಪ್ರಾಧಿಕಾರಿಯಾಗಿರುತ್ತಾರೆ.

WhatsApp Group Join Now
Telegram Group Join Now

ಇದನ್ನೂ ಓದಿ: Heavy Rain Karnataka: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಜುಲೈ 11ರವರೆಗೆ ರಾಜ್ಯದಲ್ಲಿ ಭಾರೀ ಮಳೆ | ಯಾವ ಜಿಲ್ಲೆಗಳಿಗೆ ಹೆಚ್ಚು ಮಳೆ?

ಕೆಇಎಗೆ ಜವಾಬ್ದಾರಿ: ಮೊದಲೆಲ್ಲಾ ಅಬಕಾರಿ ಪೇದೆ ಹುದ್ದೆಗಳನ್ನು ಕೆಪಿಎಸ್‌ಸಿ (KPSC) ಮೂಲಕ ತುಂಬಲಾಗುತ್ತಿತ್ತು. ಈಗ ಈ ನೇಮಕಾತಿ ಪರೀಕ್ಷೆಯನ್ನು ನಡೆಸುವ ಜವಾಬ್ದಾರಿಯನ್ನು ‘ಕರ್ನಾಟಕ ಪರೀಕ್ಷಾ ಪ್ರಾಧಿಕಾರ’ಕ್ಕೆ (KEA) ವಹಿಸಲಾಗಿದೆ. ಇದರಿಂದ ಪ್ರಕ್ರಿಯೆ ಮತ್ತಷ್ಟು ವೇಗವಾಗಿ ನಡೆಯುವ ನಿರೀಕ್ಷೆಯಿದೆ.

ಹುದ್ದೆಗಳ ವಿಲೀನ: ಮಹಿಳೆ ಮತ್ತು ಪುರುಷ ಎಂದು ಪ್ರತ್ಯೇಕವಾಗಿದ್ದ ಪೇದೆ ಹುದ್ದೆಗಳನ್ನು ಇದೀಗ ಒಂದೇ ವೃಂದವಾಗಿ (Merger of Cadres) ಸೇರ್ಪಡೆ ಮಾಡಲಾಗಿದೆ.

ಇದನ್ನೂ ಓದಿ: NMMS Scholarship 2026-27: ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ವರ್ಷಕ್ಕೆ ₹12,000 ನೆರವು | 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಪರೀಕ್ಷಾ ಮಾದರಿ ಹೇಗಿರುತ್ತೆ ಗೊತ್ತಾ? (New Exam Pattern)

ಸ್ಪರ್ಧಾತ್ಮಕ ಪರೀಕ್ಷೆಗೆ (Competitive Exam) ಓದುತ್ತಿರುವವರಿಗೆ ಇದು ನಿಜಕ್ಕೂ ರಿಲೀಫ್ ನೀಡುವ ವಿಚಾರ. ಯಾಕೆಂದರೆ, ಹಳೆಯ ಪದ್ಧತಿಯಲ್ಲಿದ್ದ ಪ್ರಬಂಧ ಬರೆಯುವುದು ಮತ್ತು ಭಾಷಾಂತರ (Translation) ಮಾಡುವ ಪತ್ರಿಕೆಗಳನ್ನು ಈಗ ಕೈಬಿಡಲಾಗಿದೆ!

ಒಂದೇ ಪೇಪರ್: ಈಗ ಕೇವಲ ಒಂದೇ ಒಂದು ‘ಸಾಮಾನ್ಯ ಅಧ್ಯಯನ-1’ (General Studies) ಪತ್ರಿಕೆ ಇರಲಿದೆ.

ಇದನ್ನೂ ಓದಿ: Mudra Loan: ಗ್ಯಾರಂಟಿ ಇಲ್ಲದೆ ₹20 ಲಕ್ಷ ಮುದ್ರಾ ಲೋನ್ | ಈ ಸಾಲ ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿ

ಮಲ್ಟಿಪಲ್ ಚಾಯ್ಸ್: ಪರೀಕ್ಷೆಯು 100 ಅಂಕಗಳಿಗೆ ನಡೆಯಲಿದ್ದು, ಎಲ್ಲವೂ ಬಹು-ಆಯ್ಕೆ ಪ್ರಶ್ನೆಗಳೇ (MCQs) ಆಗಿರುತ್ತವೆ. ಸಮಯ 2 ಗಂಟೆಗಳ ಕಾಲಾವಕಾಶ ಇರುತ್ತದೆ.

ಏನೇನು ಓದಬೇಕು? (Syllabus): ಇತಿಹಾಸ, ವಿಜ್ಞಾನ, ಭೂಗೋಳ, ಭಾರತದ ಸಂವಿಧಾನ, ರಾಷ್ಟ್ರೀಯ ಸ್ವಾತಂತ್ರ‍್ಯ ಚಳುವಳಿ, ಮಾನಸಿಕ ಸಾಮರ್ಥ್ಯ (Mental Ability) ಮತ್ತು ನೈತಿಕ ಶಿಕ್ಷಣದ ಮೇಲೆ ಪ್ರಶ್ನೆಗಳಿರುತ್ತವೆ. ಸಬ್ ಇನ್ಸ್ಪೆಕ್ಟರ್‌ಗೆ ಡಿಗ್ರಿ ಮಟ್ಟದ ಹಾಗೂ ಪೇದೆಗೆ ಪಿಯುಸಿ ಮಟ್ಟದ ಪ್ರಶ್ನೆಗಳು ಬರುತ್ತವೆ.

ಇದನ್ನೂ ಓದಿ: Mane Manege e-Swathu: ‘ಮನೆ ಮನೆಗೆ ಇ-ಸ್ವತ್ತು’ ಅಭಿಯಾನ | ಮುಂದಿನ ತಿಂಗಳಿಂದ ಮನೆ ಬಾಗಿಲಲ್ಲೇ ಸಿಗಲಿದೆ ಇ-ಸ್ವತ್ತು

ದೈಹಿಕ ಸಾಮರ್ಥ್ಯ ಪರೀಕ್ಷೆ (Physical Test)

ಕೆಇಎ (KEA) ನಡೆಸುವ ಲಿಖಿತ ಪರೀಕ್ಷೆಯಲ್ಲಿ ಪಾಸ್ ಆದ ಅಭ್ಯರ್ಥಿಗಳಿಗೆ ಮುಂದಿನ ಹಂತದಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆ (Physical Endurance Test) ಇರುತ್ತದೆ.

ಇದನ್ನು ಹಿಂದಿನಂತೆಯೇ ಆಯಾ ಜಿಲ್ಲಾಧಿಕಾರಿಗಳ ನೇತೃತ್ವದಲ್ಲೇ ನಡೆಸಲಾಗುತ್ತದೆ. ಅಲ್ಲಿ ಅಂತಿಮವಾಗಿ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ರೆಡಿ ಮಾಡಲಾಗುತ್ತದೆ.

ಇದನ್ನೂ ಓದಿ: Indira Kit Distribution: ಬಿಪಿಎಲ್ ಕಾರ್ಡುದಾರರಿಗೆ ಇಂದಿರಾ ಕಿಟ್ ವಿತರಣೆ | ಸರ್ಕಾರದ ಮಹತ್ವದ ಮಾಹಿತಿ ಇಲ್ಲಿದೆ…

ಮುಂದೇನು?

ಸರ್ಕಾರದ ಕಡೆಯಿಂದ ಅಸ್ತು ಎಂದಾಗಿರುವುದರಿಂದ, ಮುಂದಿನ ಕೆಲವೇ ದಿನಗಳಲ್ಲಿ ಕೆಇಎ ಅಥವಾ ಅಬಕಾರಿ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಧಿಕೃತ ಅಧಿಸೂಚನೆ (Official Notification) ಬಿಡುಗಡೆಯಾಗಲಿದೆ.

ಲಕ್ಷಾಂತರ ಜನ ಸ್ಪರ್ಧೆಯಲ್ಲಿ ಇರುವುದರಿಂದ, ಅಪ್ಲಿಕೇಶನ್ ಬಿಡುವವರೆಗೂ ಕಾಯದೆ ಇಂದೇ ಪರೀಕ್ಷೆ ಹಾಗೂ ದೈಹಿಕ ಸಿದ್ಧತೆಗಳನ್ನು (Exam Preparation) ಶುರು ಮಾಡುವುದು ಜಾಣ್ಮೆಯ ನಿರ್ಧಾರ. ಗುಡ್ ಲಕ್!

ನೇಮಕಾತಿ ಕುರಿತ ಆರ್ಥಿಕ ಇಲಾಖೆಯ ಆದೇಶ ಪ್ರತಿ: Download 

Government Employees DA Hike: ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ | ಜುಲೈನಿಂದ 3% ಡಿಎ ಹೆಚ್ಚಳ? ಸಂಬಳ ಎಷ್ಟು ಏರಿಕೆ? ಇಲ್ಲಿದೆ ಸಂಪೂರ್ಣ ಮಾಹಿತಿ


Spread the love
error: Content is protected !!