ಅವಧಿಗಿಂತ ಮೊದಲೇ ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶವಾಗಿದೆ. ಮುಂದಿನ 4 ದಿನ ಭಾರೀ ಮಳೆಯಾಗಲಿದ್ದು; ಐಎಂಡಿ ರೆಡ್ ಅಲರ್ಟ್ ಘೋಷಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ…
ರಾಜ್ಯಕ್ಕೆ ಮುಂಗಾರು ಮಳೆ ಭರ್ಜರಿ ಎಂಟ್ರಿ ಕೊಟ್ಟಿದೆ. 2009ರ ನಂತರ ಇದೇ ಮೊದಲ ಬಾರಿಗೆ ನೈಋತ್ಯ ಮುಂಗಾರು ಅವಧಿಗಿಂತ ಮೊದಲೇ ದಕ್ಷಿಣ ಭಾರತಕ್ಕೆ ಕಾಲಿಟ್ಟಿದೆ. ನಿನ್ನೆ ಮೇ 24ರಂದು ಕೇರಳದ ಮೂಲಕ ಕರ್ನಾಟಕದ ಕರಾವಳಿ ಪ್ರದೇಶಕ್ಕೂ ಪ್ರವೇಶಿಸಿದೆ.
ಇದು ರೈತರಿಗೆ ಸಂತಸದ ವಿಷಯವಾಗಿದ್ದು, ಅತ್ಯಧಿಕ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಮುನ್ನೆಚ್ಚರಿಕೆಯೂ ಅತ್ಯಗತ್ಯ. ಹೀಗಾಗಿ ಹವಾಮಾನ ಇಲಾಖೆ ರಾಜ್ಯದ ಕೆಲ ಜಿಲ್ಲೆಗಳಿಗೆ ಭಾರಿ ಮಳೆಯ ರೆಡ್ ಅಲರ್ಟ್ ಘೋಷಣೆ ಮಾಡಿದೆ.
Ration Card New Rules- ರೇಷನ್ ಕಾರ್ಡ್ ಅರ್ಜಿ | ಇನ್ಮುಂದೆ ಕಠಿಣ ನಿಯಮ | 25 ಲಕ್ಷ ಕಾರ್ಡುಗಳ ರದ್ದತಿ?
16 ವರ್ಷಗಳ ನಂತರ ಮುಂಗಾರು ಮುಂಚಿತ ಪ್ರವೇಶ
ಹವಾಮಾನ ಇಲಾಖೆ (IMD) ನೀಡಿರುವ ಮಾಹಿತಿ ಪ್ರಕಾರ, ಈ ಬಾರಿ ನೈಋತ್ಯ ಮುಂಗಾರು ಮೇ 24ರ ಶನಿವಾರವೇ ಕರ್ನಾಟಕ ಪ್ರವೇಶಿಸಿದ್ದು, ಇದು 16 ವರ್ಷಗಳ ಹಿಂದೆ 2009ರ ಮೇ 23ರಂದು ಸಂಭವಿಸಿದ ಮುಂಗಾರು ಪ್ರವೇಶದ ನಂತರ ಇದೇ ಮೊದಲ ಬಾರಿಗೆ ಮನ್ಸೂನ್ ಆಗಮನವಾದಂತಾಗಿದೆ.
ಹವಾಮಾನ ತಜ್ಞರು ತಿಳಿಸುವಂತೆ, ಮುಂಗಾರು ಕಾಲಕಾಲಕ್ಕೆ ಬದಲಾವಣೆ ಹೊಂದುತ್ತಿದ್ದರೂ, ಇದರ ಆರಂಭದ ದಿನಾಂಕವು ಭಾರತದಲ್ಲಿ ಸಂಪೂರ್ಣವಾಗಿ ಮಳೆಯ ಪ್ರಮಾಣಕ್ಕೆ ನೇರ ಸಂಬಂಧ ಹೊಂದಿಲ್ಲ. ಆದರೆ ಈ ವರ್ಷ, ಏಪ್ರಿಲ್ ತಿಂಗಳಲ್ಲಿ ನೀಡಿದ ಪೂರ್ವಾನುಮಾನ ಪ್ರಕಾರ, ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ.

ಯಾವ ಜಿಲ್ಲೆಗಳಲ್ಲಿ ಎಚ್ಚರಿಕೆಗೆ ಅಲರ್ಟ್?
ಮುಂಗಾರು ಪ್ರವೇಶದಿಂದಾಗಿ ಇಂದಿನಿಂದ (ಮೇ 25) ಮೇ 28ರ ವರೆಗೆ ಮುಂದಿನ ನಾಲ್ಕು ದಿನ ಭಾರೀ ಮಳೆ ಸುರಿಯುವ ಸಂಭವವಿದ್ದು; ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಇದರ ಜೊತೆಗೆ ಮದ್ಯ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಆರೆಂಜ್ ಮತ್ತು ಯೆಲ್ಲೋ ಅಲರ್ಟ್’ಗಳನ್ನು ಪ್ರಕಟಿಸಲಾಗಿದೆ.
ರೆಡ್ ಅಲರ್ಟ್ (ಮೇ 25-28)
- ಉಡುಪಿ
- ದಕ್ಷಿಣ ಕನ್ನಡ
- ಉತ್ತರ ಕನ್ನಡ
- ಚಿಕ್ಕಮಗಳೂರು
- ಕೊಡಗು
ಈ ಜಿಲ್ಲೆಗಳಲ್ಲಿ ನಿರಂತರ ಭಾರಿ ಮಳೆಯ ಸಾಧ್ಯತೆ ಇರುವುದರಿಂದ ನದಿಗಳ ನೀರಿನ ಮಟ್ಟ ಏರಿಕೆ, ಭೂಕುಸಿತದ ಅಪಾಯ ಹಾಗೂ ಸಾರ್ವಜನಿಕ ಬದುಕಿನಲ್ಲಿ ಅಡೆತಡೆ ಉಂಟಾಗುವ ಸಾಧ್ಯತೆಗಳು ಹೆಚ್ಚಿವೆ.
ಆರೆಂಜ್ ಅಲರ್ಟ್ (4 ದಿನ)
- ಮೈಸೂರು
- ಚಾಮರಾಜನಗರ
- ಮಂಡ್ಯ
- ಹಾಸನ
- ಬೆಳಗಾವಿ
- ಧಾರವಾಡ
ಈ ಭಾಗಗಳಲ್ಲಿ ಸಾಧಾರಣದಿಂದ ಭಾರೀ ಮಳೆಯ ವಾತಾವರಣವಿದ್ದು, ಕೆಲವೊಂದು ಕಡೆಗಳಲ್ಲಿ ಮೋಡ ಕವಿದ ವಾತಾವರಣ, ಜೋರಾದ ಗಾಳಿ ಸಹಿತ ಮಳೆಯ ಸಂಭವವಿದೆ.
ಯೆಲ್ಲೋ ಅಲರ್ಟ್ (ಮುಂದಿನ 48 ಗಂಟೆ)
- ಗದಗ
- ಹಾವೇರಿ
ಈ ಜಿಲ್ಲೆಗಳಲ್ಲಿ ಭಾರೀ ಮಳೆಯ ಸಾಧ್ಯತೆ ಕಡಿಮೆ ಇದ್ದರೂ, ಸಮಯಕ್ಕೆ ಸರಿಯಾಗಿ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.
ರೈತರಿಗೆ ಬಂಪರ್ ಬೆಳೆ
ಮಲೆನಾಡು ಹಾಗೂ ಹಳೇ ಮೈಸೂರು ಭಾಗದ ರೈತರು ಈ ಬಾರಿ ಮುಂಗಾರಿನ ಮೊದಲ ದಿನಗಳಲ್ಲಿ ಬಂದ ಉತ್ತಮ ಮಳೆಯ ಕಾರಣದಿಂದಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಬೆಳೆ ಬಿತ್ತನೆಗೆ ಅನುಕೂಲವಿರುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಕೃಷಿಕರಲ್ಲಿ ಭರವಸೆ ಮೂಡಿಸಿದೆ.
ಹವಾಮಾನ ಇಲಾಖೆಯ ಮೂಲಗಳ ಪ್ರಕಾರ, ಈ ವರ್ಷದ ಮುಂಗಾರು ಋತುವಿನಲ್ಲಿ ದೇಶಾದ್ಯಂತ ಸಾಮಾನ್ಯಕ್ಕಿಂತ 106% ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ. ಇದು ನೀರಾವರಿ ಯೋಜನೆಗಳು, ರೈತರ ಕೃಷಿ ಚಟುವಟಿಕೆಗಳು, ಹಾಗೂ ಕುಡಿಯುವ ನೀರಿನ ಸಂಗ್ರಹಕ್ಕೆ ಸಹಕಾರಿಯಾಗುವ ಸಾಧ್ಯತೆ ಇದೆ.
Rohini Rain- ಮೇ 25ರಿಂದ ರಾಜ್ಯದಲ್ಲಿ ರೋಹಿಣಿ ಮಳೆ ಆರ್ಭಟ | ಈ ಜಿಲ್ಲೆಗಳಿಗೆ ರೆಡ್ ಅಲರ್ಟ್
ಸಂತಸದ ಜೊತೆಗೆ ಮುನ್ನೆಚ್ಚರಿಕೆ ಅಗತ್ಯ
ಹವಾಮಾನ ತಜ್ಞ ಡಾ. ಶ್ರೀನಿವಾಸ ರೆಡ್ಡಿಯವರು ಮುಂಗಾರು ಮೊದಲೇ ಪ್ರವೇಶಿಸಿರುವುದು ಸಂತಸದ ವಿಷಯವೇ ಸರಿ, ಆದರೆ ಮುಂದಿನ ದಿನಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗಬಹುದಾದ್ದರಿಂದ ಜನತೆ ಎಚ್ಚರಿಕೆಯಿಂದಿರುವುದು ಅತ್ಯಂತ ಅಗತ್ಯ ಎಂದು ಸಲಹೆ ನೀಡಿದ್ದಾರೆ.
ಮುಂಗಾರು ತನ್ನ ಭರ್ಜರಿ ಎಂಟ್ರಿಯೊಂದಿಗೆ ಈ ಬಾರಿ ನಿರೀಕ್ಷೆಗಿಂತ ಹೆಚ್ಚು ಶಕ್ತಿ ಪ್ರದರ್ಶಿಸುತ್ತಿದ್ದು, ಇದು ಕರ್ನಾಟಕದ ಹವಾಮಾನ ಚಕ್ರದಲ್ಲಿ ಹೊಸ ಅಧ್ಯಾಯ ಆರಂಭಿಸಬಹುದು. ರೈತರು, ಸಾರ್ವಜನಿಕರು ಮತ್ತು ಅಧಿಕಾರಿಗಳು ಎಲ್ಲರೂ ಕೂಡ ಸಜ್ಜಾಗಬೇಕಾದ ಸಮಯವಿದು.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.