ಹವಾಮಾನ ಇಲಾಖೆಯು (IMD) ಮೇ 6ರ ವರೆಗೆ ರಾಜ್ಯಾದ್ಯಂತ ಮಳೆ ಮುನ್ಸೂಚನೆ (Karnataka Rain Forecast) ನೀಡಿದೆ. ರಾಜ್ಯದ ಯಾವ್ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ? ಎಂಬ ಮಾಹಿತಿ ಇಲ್ಲಿದೆ…
ಕರ್ನಾಟಕದ ವಿವಿಧ ಭಾಗಗಳಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರೆದಿದೆ. ಸುಡುಬಿಸಿಲಿನಿಂದ ಬಸವಳಿದಿದ್ದ ರಾಜ್ಯದ ಜನತೆಗೆ ಈ ಮಳೆಯು ತಾತ್ಕಾಲಿಕ ತಂಪನ್ನು ನೀಡುತ್ತಿದೆ. ರಣಬಿಸಿಲಿನಿಂದ ಬಳಲುತ್ತಿದ್ದ ಪ್ರದೇಶಗಳಲ್ಲಿ ಮಳೆಯಾಗುತ್ತಿರುವುದು ತಾಪಮಾನ ಕಡಿಮೆಯಾಗಲು ಸಹಾಯ ಮಾಡಿದೆ.
ಚಂಡಮಾರುತದ ವಾಯುಚಲನೆ
ಆಂಧ್ರಪ್ರದೇಶ ಮತ್ತು ಯಾನಂ ಕರಾವಳಿಯ ಮೇಲ್ಮಟ್ಟದಲ್ಲಿ ಸಮುದ್ರಮಟ್ಟದಿಂದ ಸುಮಾರು 0.9 ಕಿಲೋ ಮೀಟರ್ ಎತ್ತರದಲ್ಲಿ ಚಂಡಮಾರುತದ ವಾಯುಚಲನೆ ಕಂಡುಬರುತ್ತಿದೆ. ಇದರ ಪರಿಣಾಮವಾಗಿ ಕರ್ನಾಟಕದ ಹಲವೆಡೆ ಮಳೆಯಾಗುತ್ತಿದೆ. ಇದೊಂದು ಮುಂಗಾರು ಪೂರ್ವದ ಚಲನೆಯ ಭಾಗವಾಗಿದ್ದು, ಮಳೆಯೊಂದಿಗೆ ತಾಪಮಾನದಲ್ಲಿ ಇಳಿಕೆಯನ್ನು ಕೂಡ ಉಂಟುಮಾಡುತ್ತಿದೆ.
PM Surya Ghar Free Solar Power- ಮನೆ ಮನೆಗೆ ಉಚಿತ ಸೋಲಾರ್ ವಿದ್ಯುತ್ | ಈಗಲೇ ಅರ್ಜಿ ಸಲ್ಲಿಸಿ…
ಮಳೆ ಮುನ್ಸೂಚನೆಯ ಪ್ರದೇಶಗಳ ವಿವರ
ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯ ಪ್ರಕಾರ, ಮುಂದಿನ ಮೇ 6ರ ವರೆಗೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ಹಗುರದಿಂದ ಆರಂಭಿಸಿ ಸಾಧಾರಣ ಪ್ರಮಾಣದ ಮಳೆ ಸುರಿಯುವ ಸಾಧ್ಯತೆ ಇದೆ.
ಕರಾವಳಿ ಜಿಲ್ಲೆಗಳು: ಮೇ 1 ರಿಂದ 6ರ ವರೆಗೆ ಇಡೀ ವಾರದ ವರೆಗೆ ಮಳೆಯ ನಿರೀಕ್ಷೆ ಇದೆ. ತೀವ್ರ ಬಿಸಿಲಿನಿಂದ ಮುಕ್ತಿ ದೊರೆಯಲಿದೆ. ಇನ್ನು ಉತ್ತರ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಮೇ 2, 3 ಹಾಗೂ 5 ರಂದು ಮಳೆಯಾಗಲಿದೆ.

ಉತ್ತರ ಕರ್ನಾಟಕದ ಜಿಲ್ಲೆಗಳು: ಮೇ 1 ಮತ್ತು 3ರಂದು ಹಾವೇರಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಗದಗ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವವಿದೆ.
ಮೇ 2ರಂದು ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕೊಪ್ಪಳ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ. ಮೇ 4ರಂದು ಯಾದಗಿರಿ, ಬೀದರ್, ಕಲಬುರಗಿ, ಕೊಪ್ಪಳ, ಗದಗ, ಹಾವೇರಿ, ರಾಯಚೂರು ಜಿಲ್ಲೆಗಳ ಮೇಲೆ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಒಳನಾಡು ಜಿಲ್ಲೆಗಳು: ದಕ್ಷಿಣ ಒಳನಾಡು ಜಿಲ್ಲೆಗಳಾದ ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಚಾಮರಾಜನಗರ, ಮಂಡ್ಯ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು, ರಾಮನಗರ ಜಿಲ್ಲೆಗಳಲ್ಲಿ ಇಂದಿನಿಂದ ಮೇ 6ರ ವರೆಗೆ ಒಂದು ವಾರ ಹಗುರ ಮಳೆಯ ಸಾಧ್ಯತೆ ಇದೆ.
ATM Transaction Fee Hike- ಮೇ 1ರಿಂದ ಬ್ಯಾಂಕ್ ಎಟಿಎಂ ಶುಲ್ಕ ಹೆಚ್ಚಳ: ಆರ್ಬಿಐ ಪರಿಷ್ಕೃತ ನಿಯಮ ಜಾರಿ
ರಣ ಬೇಸಿಗೆಯಿಂದ ತಾತ್ಕಾಲಿಕ ವಿಶ್ರಾಂತಿ
ಈ ಮುಂಗಾರು ಪೂರ್ವ ಮಳೆಯ ಪರಿಣಾಮವಾಗಿ ಏಪ್ರಿಲ್ 30ರಂದು ರಾಜ್ಯದ ಬಹುತೇಕ ಕಡೆಗಳಲ್ಲಿ ತಾಪಮಾನ ಕೊಂಚ ಇಳಿಕೆಯಾಗಿದೆ. ಸಾಮಾನ್ಯವಾಗಿ ಕಲಬುರಗಿ ಹಾಗೂ ಉತ್ತರ ಕರ್ನಾಟಕದ ಭಾಗಗಳಲ್ಲಿ ಈ ಸಮಯದಲ್ಲಿ 43° ರಿಂದ 46° ಡಿಗ್ರಿ ಸೆಲ್ಸಿಯಸ್ ವರೆಗೆ ತಾಪಮಾನ ಏರುತ್ತಿತ್ತು. ಆದರೆ, ಈ ಬಾರಿ ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 41.2°ಲಿ ಸೆ. ದಾಖಲಾಗಿದ್ದು, ಉಳಿದ ಜಿಲ್ಲೆಗಳಲ್ಲಿ 35° ರಿಂದ 37° ಡಿಗ್ರಿ ಸೆ. ನಡುವೆ ತಾಪಮಾನ ದಾಖಲಾಗಿದೆ.
ಮಳೆ ಮತ್ತು ಬಿರುಗಾಳಿ ಮುನ್ಸೂಚನೆ
ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯ ಪ್ರಕಾರ, ಕರ್ನಾಟಕದ ಹಲವು ಭಾಗಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಪ್ರತಿ ಗಂಟೆಗೆ 40 ಕಿ.ಮೀ. ವೇಗದಲ್ಲಿ ಬಿರುಗಾಳಿ ಮುನ್ಸೂಚನೆ ಇರುವ ಕಾರಣ ಜನರು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಹವಾಮಾನ ಇಲಾಖೆ ಸೂಚಿಸಿದೆ.
ಮುಗಿಯುತ್ತಿರುವ ಏಪ್ರಿಲ್ ತಿಂಗಳು ಹಾಗೂ ಆರಂಭವಾಗುತ್ತಿರುವ ಮೇ ತಿಂಗಳಲ್ಲಿ ಸಾಮಾನ್ಯವಾಗಿ ಬಿಸಿಲಿನ ತೀವ್ರತೆ ಹೆಚ್ಚಾಗಿರುತ್ತಿತ್ತು. ಆದರೆ, ಈ ಬಾರಿ ಮುಂಗಾರು ಪೂರ್ವ ಮಳೆ ರಾಜ್ಯದ ಹಲವು ಭಾಗಗಳಿಗೆ ತಾತ್ಕಾಲಿಕ ತಂಪನ್ನು ನೀಡುತ್ತಿದೆ. ಮೇ 6ರ ವರೆಗೆ ಮಳೆಯ ಮುನ್ಸೂಚನೆ ಇರುವುದರಿಂದ, ಸಾರ್ವಜನಿಕರು ಹವಾಮಾನ ಇಲಾಖೆ ಸೂಚನೆಗಳಿಗೆ ಅನುಗುಣವಾಗಿ ತಮ್ಮ ದಿನಚರಿಯನ್ನು ಹೊಂದಿಸಿಕೊಳ್ಳುವುದು ಸೂಕ್ತ.
PM Surya Ghar Free Solar Power- ಮನೆ ಮನೆಗೆ ಉಚಿತ ಸೋಲಾರ್ ವಿದ್ಯುತ್ | ಈಗಲೇ ಅರ್ಜಿ ಸಲ್ಲಿಸಿ…