Crop Insurance Money: ಬೆಳೆ ವಿಮೆ ಹಣ ಬಿಡುಗಡೆ: ರೈತರ ಖಾತೆಗೆ ₹246 ಕೋಟಿ ಪರಿಹಾರ ಜಮಾ | ನಿಮ್ಮ ಹಣ ಬಂದಿದೆಯೇ ಈಗಲೇ ಚೆಕ್ ಮಾಡಿ

Spread the love

WhatsApp Group Join Now
Telegram Group Join Now

Crop Insurance Money: ಬೆಳೆ ವಿಮೆ ಹಣ ಬಿಡುಗಡೆ: ರೈತರ ಖಾತೆಗೆ ₹246.9 ಕೋಟಿ ಬೆಳೆ ವಿಮೆ ಪರಿಹಾರ ಜಮಾ ಪ್ರಕ್ರಿಯೆ ಆರಂಭ. ನಿಮ್ಮ ಬೆಳೆ ವಿಮೆ ಹಣದ ಸ್ಟೇಟಸ್ ಮೊಬೈಲ್‌ನಲ್ಲಿ ಚೆಕ್ ಮಾಡಿ, ಮಾಹಿತಿ ಇಲ್ಲಿದೆ..

ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿಯಿಂದ ಸಂಕಷ್ಟಕ್ಕೆ ಒಳಗಾದ ರೈತರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. 2025ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಪ್ರಕೃತಿ ವಿಕೋಪದಿಂದ ನಷ್ಟ ಅನುಭವಿಸಿದ ರೈತರಿಗೆ ಬೆಳೆ ವಿಮೆ ಪರಿಹಾರ (Crop Insurance Compensation) ಹಣ ಬಿಡುಗಡೆ ಪ್ರಕ್ರಿಯೆ ಆರಂಭವಾಗಿದೆ.

ಒಟ್ಟು ₹246.9 ಕೋಟಿ ಮೊತ್ತದ ಬೆಳೆ ವಿಮೆ ಪರಿಹಾರ (Crop Insurance Amount) ರೈತರ ಖಾತೆಗಳಿಗೆ ಹಂತ ಹಂತವಾಗಿ ಜಮಾ ಆಗಲಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಹಾಗೂ ಸಂಸದ ಸಾಗರ್ ಖಂಡ್ರೆ ಅವರ ಪ್ರಯತ್ನದ ಫಲವಾಗಿ ಬಾಕಿ ಉಳಿದಿದ್ದ ಬೆಳೆ ವಿಮೆ ಪರಿಹಾರವನ್ನು ರೈತರಿಗೆ ತಲುಪಿಸುವ ಕಾರ್ಯ ವೇಗ ಪಡೆದುಕೊಂಡಿದೆ.

ಇದನ್ನೂ ಓದಿ: Anganwadi Worker Helper Recruitment: ರಾಜ್ಯದಾದ್ಯಂತ ಅಂಗನವಾಡಿ ನೇಮಕಾತಿ ಆರಂಭ | SSLC, PUC ಪಾಸ್ ಮಹಿಳೆಯರಿಗೆ ಭರ್ಜರಿ ಚಾನ್ಸ್ | ಜಿಲ್ಲಾವಾರು ಹುದ್ದೆಗಳ ವಿವರ ಇಲ್ಲಿದೆ…

2 ಲಕ್ಷಕ್ಕೂ ಹೆಚ್ಚು ರೈತರಿಗೆ ಬೆಳೆ ವಿಮೆ ಪ್ರಯೋಜನ

ಬೀದರ್ ಜಿಲ್ಲೆಯಲ್ಲಿ ಒಟ್ಟು 2,02,091 ರೈತರು ಬೆಳೆ ವಿಮೆ ಯೋಜನೆಗೆ (PM Fasal Bima Yojana) ನೋಂದಣಿ ಮಾಡಿಕೊಂಡಿದ್ದರು. ಸುಮಾರು 1,21,077 ಹೆಕ್ಟೇರ್ ಕೃಷಿ ಪ್ರದೇಶವನ್ನು ವಿಮಾ ವ್ಯಾಪ್ತಿಗೆ (Insurance Coverage) ಒಳಪಡಿಸಲಾಗಿತ್ತು.

ಮುಂಗಾರು ಹಂಗಾಮಿನಲ್ಲಿ ರೈತರು ತೊಗರಿ, ಸೋಯಾಬೀನ್, ಉದ್ದು, ಹೆಸರು ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯಲಾಗಿತ್ತು. ಆದರೆ ಅತಿಯಾದ ಮಳೆ, ಹವಾಮಾನ ವೈಪರಿತ್ಯ ಹಾಗೂ ಪ್ರಕೃತಿ ವಿಕೋಪಗಳಿಂದ ಹಲವು ರೈತರು ಬೆಳೆ ನಷ್ಟ ಅನುಭವಿಸಿದ್ದರು.

ಈ ಹಿನ್ನೆಲೆಯಲ್ಲಿ ಒಟ್ಟು 24,690ಕ್ಕೂ ಹೆಚ್ಚು ಬೆಳೆ ವಿಮೆ ಕ್ಲೇಮ್‌ಗಳು (Crop Insurance Claims) ಸಲ್ಲಿಕೆಯಾಗಿದ್ದವು.

ಇದನ್ನೂ ಓದಿ: Karnataka Heavy Rain Alert: ಜೂನ್ 15ರವರೆಗೆ ರಾಜ್ಯದಲ್ಲಿ ಭಾರೀ ಮಳೆ! 11+ ಜಿಲ್ಲೆಗಳಿಗೆ ಹೈ ಅಲರ್ಟ್, ನಿಮ್ಮ ಜಿಲ್ಲೆ ಇದೆಯೇ?

ಈಗಾಗಲೇ ₹110 ಕೋಟಿ ಹಣ ಪಾವತಿ

ವಿಮಾ ಕಂಪನಿಯು ಪರಿಶೀಲನೆ ನಡೆಸಿ 11,052 ಕ್ಲೇಮ್‌ಗಳನ್ನು ಇತ್ಯರ್ಥಪಡಿಸಿದ್ದು, ಈಗಾಗಲೇ ಸುಮಾರು ₹110 ಕೋಟಿ ಮೊತ್ತವನ್ನು ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ.

ಇನ್ನೂ ಹಲವು ರೈತರ ಕ್ಲೇಮ್‌ಗಳು ಬಾಕಿ ಉಳಿದಿದ್ದವು. ಬಾಕಿ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಸಚಿವರು ಹಾಗೂ ಸಂಸದರು ವಿಮಾ ಕಂಪನಿಗಳೊAದಿಗೆ ನಿರಂತರ ಸಭೆ ನಡೆಸಿ, ರೈತರಿಗೆ ತ್ವರಿತವಾಗಿ ಪರಿಹಾರ ನೀಡುವಂತೆ ಸೂಚಿಸಿದ್ದರು. ಇದರ ಪರಿಣಾಮವಾಗಿ ಉಳಿದ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ.

ಇದನ್ನೂ ಓದಿ: PM Kisan Money Stopped: ಕರ್ನಾಟಕದ ಲಕ್ಷಾಂತರ ರೈತರಿಗೆ ಪಿಎಂ ಕಿಸಾನ್ ಹಣ ಬಂದ್ | ನೀವೂ ಈ ಪಟ್ಟಿಯಲ್ಲಿದ್ದೀರಾ? ಈಗಲೇ ಪರಿಶೀಲಿಸಿ…

Crop Insurance Money
Crop Insurance Money

ಈ ತಿಂಗಳ ಅಂತ್ಯದೊಳಗೆ ₹51 ಕೋಟಿಗೂ ಹೆಚ್ಚು ಹಣ ಜಮಾ

ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಈ ತಿಂಗಳ ಅಂತ್ಯದೊಳಗೆ ₹51 ಕೋಟಿಗೂ ಹೆಚ್ಚು ಬೆಳೆ ವಿಮೆ ಪರಿಹಾರ ಹಣ (Crop Insurance Payment) ಹಂತ ಹಂತವಾಗಿ ಜಮಾ ಆಗಲಿದೆ. ಉಳಿದ ಸುಮಾರು ₹85 ಕೋಟಿ ಮೊತ್ತದ ಪರಿಹಾರ ಹಣವೂ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಮಾಹಿತಿ ನೀಡಲಾಗಿದೆ.

ರೈತರಿಗೆ ಸಮಯಕ್ಕೆ ಸರಿಯಾಗಿ ಹಾಗೂ ಯಾವುದೇ ವಿಳಂಬವಿಲ್ಲದೆ ಬೆಳೆ ವಿಮೆ ಹಣ ತಲುಪಬೇಕು ಎಂಬ ಉದ್ದೇಶದಿಂದ ಸಂಬಂಧಪಟ್ಟ ಅಧಿಕಾರಿಗಳು ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: PMMSY Scheme Subsidy: ಬೈಕ್, ಇ-ರಿಕ್ಷಾ ಖರೀದಿಗೆ ಸರ್ಕಾರದಿಂದ ಸಹಾಯಧನ | ಅರ್ಜಿ ಸಲ್ಲಿಸಲು ಇಲ್ಲಿದೆ ಸಂಪೂರ್ಣ ಮಾಹಿತಿ

ಮೊಬೈಲ್‌ನಲ್ಲಿ ಬೆಳೆ ವಿಮೆ ಹಣದ ಸ್ಟೇಟಸ್ ಚೆಕ್ ಮಾಡುವ ವಿಧಾನ

WhatsApp Group Join Now
Telegram Group Join Now

ಬೆಳೆ ವಿಮೆ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬಂದಿದೆಯೇ ಎಂಬುದನ್ನು ರೈತರು ಈಗ ಮನೆಯಲ್ಲಿಯೇ ಮೊಬೈಲ್ ಮೂಲಕ ಪರಿಶೀಲಿಸಬಹುದು. ಬೆಳೆ ವಿಮೆ ಸ್ಟೇಟಸ್ (Crop Insurance Status Check) ನೋಡಲು ಈ ಕ್ರಮಗಳನ್ನು ಅನುಸರಿಸಿ:

  • ಮೊದಲು ಬೆಳೆ ವಿಮೆಯ ಅಧಿಕೃತ ವೆಬ್‌ಸೈಟ್ samrakshane.karnataka.gov.in ಗೆ ಭೇಟಿ ನೀಡಿ.
  • ವೆಬ್‌ಸೈಟ್ ತೆರೆದ ನಂತರ Season / ಋತು ವಿಭಾಗದಲ್ಲಿ Kharif (ಮುಂಗಾರು) ಆಯ್ಕೆ ಮಾಡಿ.
  • ನಂತರ Next ಬಟನ್ ಮೇಲೆ ಕ್ಲಿಕ್ ಮಾಡಿ.
  • ಮುಂದಿನ ಪುಟದಲ್ಲಿ Claim Status / Application Status ಆಯ್ಕೆಯನ್ನು ಆಯ್ಕೆ ಮಾಡಿ.
  • ಅಲ್ಲಿ Mobile Number ಆಯ್ಕೆಯನ್ನು ಆರಿಸಿ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
  • Captcha Code ನಮೂದಿಸಿ Search ಮೇಲೆ ಕ್ಲಿಕ್ ಮಾಡಿ.
  • ನಂತರ ನಿಮ್ಮ ವಿವರಗಳನ್ನು ಆಯ್ಕೆ ಮಾಡಿದರೆ Payment Status (ಪಾವತಿ ಸ್ಥಿತಿ) ನಲ್ಲಿ ಬೆಳೆ ವಿಮೆ ಹಣದ ಸಂಪೂರ್ಣ ಮಾಹಿತಿ ಕಾಣಿಸುತ್ತದೆ.

ಇದನ್ನೂ ಓದಿ: PM Kisan 23ne Kantina Hana: ಪಿಎಂ ಕಿಸಾನ್ 23ನೇ ಕಂತಿನ ಹಣ ರಿಲೀಸ್ | ಮಹತ್ವದ ಮಾಹಿತಿ ಇಲ್ಲಿದೆ…

ಬೆಳೆ ವಿಮೆ ಯೋಜನೆ ರೈತರಿಗೆ ಹೇಗೆ ನೆರವಾಗುತ್ತದೆ?

ಕೃಷಿ ಕ್ಷೇತ್ರದಲ್ಲಿ ಪ್ರಕೃತಿ ವಿಕೋಪಗಳು ದೊಡ್ಡ ಸವಾಲಾಗಿವೆ. ಅತಿಯಾದ ಮಳೆ, ಬರ, ಗಾಳಿ, ಕೀಟಬಾಧೆ ಸೇರಿದಂತೆ ಹಲವು ಕಾರಣಗಳಿಂದ ರೈತರು ಬೆಳೆ ನಷ್ಟ ಅನುಭವಿಸುತ್ತಾರೆ.

ಇಂತಹ ಸಂದರ್ಭಗಳಲ್ಲಿ ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಬೆಳೆ ವಿಮೆ ಯೋಜನೆ (Crop Insurance Scheme) ಜಾರಿಗೆ ತರಲಾಗಿದೆ.

ಇದನ್ನೂ ಓದಿ: Karnataka Farm Loan Waiver: ಸರ್ಕಾರದಿಂದ ರೈತರಿಗೆ ಸಾಲ ಮನ್ನಾ ಗಿಫ್ಟ್ | ಯಾರಿಗೆ ಸಿಗಲಿದೆ ಇದರ ಪ್ರಯೋಜನ?

ಬೆಳೆ ವಿಮೆ ಯೋಜನೆಯಿಂದ ರೈತರು ನಷ್ಟದ ನಂತರ ಮತ್ತೆ ಕೃಷಿ ಚಟುವಟಿಕೆ ಆರಂಭಿಸಲು ಸಹಾಯವಾಗುತ್ತದೆ. ಸಂಕಷ್ಟದ ಸಮಯದಲ್ಲಿ ಈ ಪರಿಹಾರ ಹಣ ರೈತ ಕುಟುಂಬಗಳಿಗೆ ಆರ್ಥಿಕ ಬೆಂಬಲ ನೀಡುತ್ತದೆ.

ಆದ್ದರಿಂದ ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿರುವ ಪ್ರತಿಯೊಬ್ಬ ರೈತರು ತಮ್ಮ ಮೊಬೈಲ್ ಮೂಲಕ ಬೆಳೆ ವಿಮೆ ಪಾವತಿ ಸ್ಥಿತಿ (Crop Insurance Payment Status)  ಪರಿಶೀಲಿಸಿ, ಹಣ ಜಮಾ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಉತ್ತಮ.

Hani Neeravari Sahayadhana: ರೈತರಿಗೆ ಬಂಫರ್ ಕೊಡುಗೆ: ಹನಿ ನೀರಾವರಿ ಅಳವಡಿಕೆಗೆ ಸರ್ಕಾರಿ ಸಹಾಯಧನ | ಈಗಲೇ ಅರ್ಜಿ ಹಾಕಿ…


Spread the love
error: Content is protected !!