ಗೃಹಲಕ್ಷ್ಮಿ ಯೋಜನೆ ಹಣ (Karnataka Gruhalakshmi Yojana) ಬಹಳಷ್ಟು ಮಹಿಳೆಯರ ಖಾತೆಗೆ ಜಮಾ ಆಗುತ್ತಿಲ್ಲ ಎಂಬ ದೂರುಗಳಿವೆ. ಇದಕ್ಕೆ ಕಾರಣಗಳೇನು? ಪರಿಹಾರಗಳೇನು? ಎಂಬ ಕುರಿತ ಮಾಹಿತಿ ಇಲ್ಲಿದೆ…
ಕರ್ನಾಟಕ ಸರ್ಕಾರದ ಮಹಿಳಾ ಸಬಲೀಕರಣ ನಿಟ್ಟಿನಲ್ಲಿ ಜಾರಿಗೊಳಿಸಿರುವ ಮಹತ್ವದ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಪ್ರಮುಖವಾದದ್ದು. ಈ ಯೋಜನೆಯ ಮೂಲಕ ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಪ್ರತಿ ತಿಂಗಳು ₹2,000 ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ.
ಆದರೆ, ಇತ್ತೀಚೆಗೆ ಹಲವಾರು ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಕಾಲದಲ್ಲಿ ಜಮಾ ಆಗಿಲ್ಲ ಎಂಬ ಅಹವಾಲುಗಳು ವರದಿಯಾಗಿವೆ. ಈ ಸಮಸ್ಯೆ ಮೂಲ ಕಾರಣವೇನು? ಮತ್ತು ಅದಕ್ಕೆ ಸ್ಪಷ್ಟ ಪರಿಹಾರವೇನೆಂಬುದನ್ನು ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ.
ಏಕೆ ಹಣ ಜಮಾ ಆಗುತ್ತಿಲ್ಲ?
2025ರ ಮೇ ತಿಂಗಳಲ್ಲಿ 20ನೇ ಕಂತಿನ ಹಣ ವರ್ಗಾವಣೆ ಪ್ರಕ್ರಿಯೆ ನಡೆಸಲಾಗಿದೆ. ಈ ಕಂತಿನಲ್ಲಿ ಸಾವಿರಾರು ಮಹಿಳೆಯರ ಬ್ಯಾಂಕ್ ಖಾತೆಗೆ ₹2,000 ಜಮಾ ಮಾಡಲಾಗಿದೆ. ಆದರೆ ಕೆಲವರಿಗೆ ಈ ಹಣ ಜಮಾ ಆಗಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.
ಈ ಸಮಸ್ಯೆಗೆ ತಾಂತ್ರಿಕ ಕಾರಣ, ಡಾಕ್ಯುಮೆಂಟ್ ಮಿಸ್, ಇ-ಕೆವೈಸಿ ಸಮಸ್ಯೆ ಅಥವಾ ಬ್ಯಾಂಕ್ ಖಾತೆ ದೋಷಗಳಿಂದಾಗಿರುವ ಸಾಧ್ಯತೆ ಇದೆ. ಇದನ್ನು ಪರಿಶೀಲಿಸಿ ಸರಿಪಡಿಸಿಕೊಂಡರೆ ಖಂಡಿತವಾಗಿಯೂ ಎಲ್ಲಾ ಅರ್ಹ ಮಹಿಳೆಯರಿಗೆ ಹಣ ಸಂದಾಯವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಿಳಿಸಿದೆ.

ಹಣ ಜಮೆಯಾಗದ ಪ್ರಮುಖ ಕಾರಣಗಳು
- ಇ-ಕೆವೈಸಿ (e-KYC) ಪೂರ್ಣಗೊಂಡಿಲ್ಲ
- ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿಲ್ಲ
- ಬ್ಯಾಂಕ್ ಖಾತೆ ಸ್ಥಗಿತಗೊಂಡಿದೆ ಅಥವಾ ತಪ್ಪಾಗಿದೆ
- ರೇಷನ್ ಕಾರ್ಡ್ ಅಥವಾ ದಾಖಲೆಗಳಲ್ಲಿ ವ್ಯತ್ಯಾಸ
ಮಹಿಳಾ ಇಲಾಖೆಯ ಸೂಚನೆ ಏನು?
NPCI Failure/ E-KYC Failure ಆಗಿದ್ದಲ್ಲಿ ಗೃಹಲಕ್ಷ್ಮೀ ಹಣ ವರ್ಗಾವಣೆ ಆಗುವುದಿಲ್ಲ. ಇಂತಹ ಫಲಾನುಭವಿಗಳು ನಿಮ್ಮ ಹತ್ತಿರದ ಶಿಶು ಅಭಿವೃದ್ಧಿ ಯೋಜನಾಧಿಕಾರಿ (CDPO) ಕಚೇರಿಗೆ ಭೇಟಿ ನೀಡಿ ಗೃಹಲಕ್ಷ್ಮೀ ಯೋಜನೆಯ Status ಪರಿಶೀಲನೆ ಮಾಡಿಸಿಕೊಳ್ಳಿ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಇಂತಹ ಸಮಸ್ಯೆಯಾಗಿರುವ ಫಲಾನುಭವಿಗಳು ತಮ್ಮ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಆಧಾರ್ ಲಿಂಕ್ ಆಗಿರುವ ಮೊಬೈಲ್ ನಂಬರ್ ಹಾಗೂ ಪಾಸ್ ಬುಕ್ ತೆಗೆದುಕೊಂಡು ಸಿಡಿಪಿಒ ಕಚೇರಿಗೆ ಹೋಗಿ ಸರಿಪಡಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಗಮನದಲ್ಲಿರಿಸಬೇಕಾದ ವಿಶೇಷ ಸೂಚನೆಗಳು
ಯಾವ ಕಾರಣದಿಂದ ನಿಮ್ಮ ಹಣ ತಡವಾಗಿದೆಯೋ ಅಥವಾ ಬಂದಿಲ್ಲವೋ, ಅದನ್ನು ಕೂಡಲೇ ಸರಿಪಡಿಸದಿದ್ದರೆ ಮುಂದಿನ ಕಂತುಗಳೂ ಕೂಡ ನಿಲ್ಲಬಹುದು. ಅರ್ಜಿ ಸ್ಥಿತಿ ಅಥವಾ ಇ-ಆಧಾರ್ ಲಿಂಕ್ ಸಮಸ್ಯೆಗಳು ಸರಿಪಡಿಸಿದ ನಂತರವೇ ಹಣ ಖಚಿತವಾಗಿ ಜಮೆಯಾಗುತ್ತದೆ.
ನೀವು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಆಗಿದ್ದರೂ, ಹಣ ಬಂದಿಲ್ಲದಿದ್ದರೆ ಇದನ್ನು ಬೇಗನೆ ಗಮನಿಸಿ. ಸರಿಯಾದ ದಾಖಲೆಗಳೊಂದಿಗೆ ನಿಮ್ಮ ಸ್ಥಳೀಯ CDPO ಕಚೇರಿಗೆ ಭೇಟಿ ನೀಡಿ, ನಿಮ್ಮ ದಾಖಲೆಗಳನ್ನು ಪರಿಶೀಲಿಸಿ, ತೊಂದರೆ ಇದ್ದರೆ ತಕ್ಷಣ ಸರಿಪಡಿಸಿಕೊಳ್ಳಿ. ಆಗ ಮಾತ್ರ ನಿಮ್ಮ ಖಾತೆಗೆ ಮುಂದಿನ ಕಂತುಗಳು ನಿಗದಿತ ಕಾಲದಲ್ಲಿ ಬರಲು ಸಾಧ್ಯವಾಗುತ್ತದೆ.
Kharif Crop Insurance 2025- 2025-26 ಸಾಲಿನ ಮುಂಗಾರು ಹಂಗಾಮು ಬೆಳೆ ವಿಮೆ | ರೈತರೇ ಈಗಲೇ ಅರ್ಜಿ ಹಾಕಿ…

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.