Karnataka High Court Recruitment 2026: ಕರ್ನಾಟಕ ಹೈಕೋರ್ಟ್ನಲ್ಲಿ 70 ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳಿಗೆ ಪದವೀಧರರಿಂದ ಅರ್ಜಿ ಆಹ್ವಾನ. ₹1.42 ಲಕ್ಷದವರೆಗೆ ವೇತನ. ಏಪ್ರಿಲ್ 15 ಕೊನೆಯ ದಿನ. ಸಂಪೂರ್ಣ ಮಾಹಿತಿ ಇಲ್ಲಿದೆ…
ನಮಸ್ಕಾರ ಓದುಗರೇ! ಸರ್ಕಾರಿ ಕೆಲಸ ಸಿಗುವುದು ಇಂದಿನ ದಿನಗಳಲ್ಲಿ ಎಷ್ಟು ಕಷ್ಟ ಅನ್ನೋದು ನಮಗೆಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲೂ ಒಂದು ಭದ್ರವಾದ ಭವಿಷ್ಯ, ಸಮಾಜದಲ್ಲಿ ಗೌರವ ಹಾಗೂ ಉತ್ತಮ ಸಂಬಳ ಇರುವ ಕೆಲಸಕ್ಕಾಗಿ ಲಕ್ಷಾಂತರ ಯುವಕ-ಯುವತಿಯರು ಹಗಲಿರುಳು ಓದುತ್ತಾ ಕಾಯುತ್ತಿರುತ್ತಾರೆ.
ನಿಮಗೂ ಕೂಡ ರಾಜ್ಯ ಸರ್ಕಾರಿ ಹುದ್ದೆಯ ಕನಸಿದ್ದರೆ, ಇಲ್ಲಿದೆ ನೋಡಿ ನಿಮಗೊಂದು ಭರ್ಜರಿ ಸಿಹಿಸುದ್ದಿ! ಕರ್ನಾಟಕ ರಾಜ್ಯದ ಅತ್ಯುನ್ನತ ನ್ಯಾಯಾಂಗ ಸಂಸ್ಥೆಯಾದ ‘ಉಚ್ಚ ನ್ಯಾಯಾಲಯ’ವು (Karnataka High Court) ಇದೀಗ ಖಾಲಿ ಇರುವ ‘ಸಹಾಯಕ ನ್ಯಾಯಾಲಯ ಕಾರ್ಯದರ್ಶಿ’ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ.
ಇದನ್ನೂ ಓದಿ: District Court Recruitment 2026: 10ನೇ ಪಾಸ್ ಆದವರಿಗೆ ಕೋರ್ಟ್ನಲ್ಲಿ ₹61,300 ಸಂಬಳದ ಜಾಬ್ | ಸಂಪೂರ್ಣ ಮಾಹಿತಿ ಇಲ್ಲಿದೆ
ಒಟ್ಟು 70 ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ನ್ಯಾಯಾಂಗ ಇಲಾಖೆಯಲ್ಲಿ ನಿಮ್ಮ ವೃತ್ತಿಬದುಕನ್ನು ರೂಪಿಸಿಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದೆ.
ಬನ್ನಿ, ಈ ಹುದ್ದೆಗಳಿಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ವಯೋಮಿತಿ ಎಷ್ಟಿರಬೇಕು? ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ? ಎಂಬ ಸಂಪೂರ್ಣ ಮಾಹಿತಿಯನ್ನು ಸರಳವಾಗಿ ತಿಳಿದುಕೊಳ್ಳೋಣ.
ಹುದ್ದೆಗಳ ವಿವರ: ಎಲ್ಲಿ, ಎಷ್ಟು ಖಾಲಿ ಇವೆ?
ಹೈಕೋರ್ಟ್ ಒಟ್ಟು 70 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದು, ಇದನ್ನು ಪ್ರಮುಖವಾಗಿ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆಂದೇ 11 ಹುದ್ದೆಗಳನ್ನು ಮೀಸಲಿಟ್ಟಿದ್ದರೆ, ರಾಜ್ಯದ ಉಳಿದ ಭಾಗದ ಅಭ್ಯರ್ಥಿಗಳಿಗೆ (ಉಳಿಕೆ ಮೂಲ ವೃಂದ) 59 ಹುದ್ದೆಗಳು ಲಭ್ಯವಿವೆ.
ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೇವಲ ಪದವಿ ಇದ್ದರೆ ಸಾಲದು, ಜೊತೆಗೆ ಕೆಲವೊಂದು ವಿಶೇಷ ಕೌಶಲ್ಯಗಳೂ ಅಗತ್ಯವಿರುತ್ತದೆ.
ಪದವಿ ಕಡ್ಡಾಯ: ನೀವು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ವಿಜ್ಞಾನ, ವಾಣಿಜ್ಯ ಅಥವಾ ಕಲಾ ವಿಭಾಗದಲ್ಲಿ (BA, B.Sc, B.Com ಇತ್ಯಾದಿ) ಪದವಿ ಮುಗಿಸಿರಬೇಕು.
ಇದನ್ನೂ ಓದಿ: Karnataka March Pension Delay: ಕರ್ನಾಟಕ ಪಿಂಚಣಿ ಹಣ ತಡ | ಕಾರಣ ಏನು? ಯಾವಾಗ ಜಮಾ ಆಗುತ್ತದೆ? ಸಂಪೂರ್ಣ ಮಾಹಿತಿ
ಶೀಘ್ರಲಿಪಿ ಹಾಗೂ ಟೈಪಿಂಗ್: ಹೈಕೋರ್ಟ್ ಕೆಲಸ ಅಂದರೆ ಅಲ್ಲಿ ಟೈಪಿಂಗ್ ವೇಗ ಬಹಳ ಮುಖ್ಯ. ಹಾಗಾಗಿ, ಇಂಗ್ಲಿಷ್ ಶೀಘ್ರಲಿಪಿ (Shorthand) ಮತ್ತು ಟೈಪ್ರೈಟರ್ ಪರೀಕ್ಷೆಯಲ್ಲಿ ‘ಸೀನಿಯರ್ ಗ್ರೇಡ್’ ಪಾಸ್ ಮಾಡಿರಬೇಕು ಅಥವಾ ತತ್ಸಮಾನ ಡಿಪ್ಲೊಮಾ ಹೊಂದಿರಬೇಕು.
ಕಂಪ್ಯೂಟರ್ ಜ್ಞಾನ: ಇಂದಿನ ಡಿಜಿಟಲ್ ಯುಗದಲ್ಲಿ ಪ್ರತಿಯೊಂದು ಕೆಲಸವೂ ಕಂಪ್ಯೂಟರ್ ಮೂಲಕವೇ ನಡೆಯುವುದರಿಂದ, ಕಂಪ್ಯೂಟರ್ ಜ್ಞಾನದ ಪ್ರಮಾಣಪತ್ರವನ್ನು ಹೊಂದಿರುವುದು ಕಡ್ಡಾಯ.

ವಯಸ್ಸಿನ ಮಿತಿ ಎಷ್ಟಿರಬೇಕು?
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಲೇಬೇಕು. ಹಾಗೆಯೇ, ಗರಿಷ್ಠ 40 ವರ್ಷದವರೆಗಿನ ಅಭ್ಯರ್ಥಿಗಳು ಅರ್ಜಿ ಹಾಕಬಹುದು.
ಒಂದು ವೇಳೆ ನೀವು ಮೀಸಲಾತಿ ವ್ಯಾಪ್ತಿಗೆ ಬರುವವರಾಗಿದ್ದರೆ, ಸರ್ಕಾರದ ನಿಯಮದಂತೆ ವಯೋಮಿತಿಯಲ್ಲಿ ಸಡಿಲಿಕೆ ಕೂಡ ಸಿಗುತ್ತದೆ. ಹಿಂದುಳಿದ ವರ್ಗದ (OBC) ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ (SC/ST) ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಇರಲಿದೆ.
ಇದನ್ನೂ ಓದಿ: Uchita Thotagarike Tarabeti: 10 ತಿಂಗಳ ಉಚಿತ ತೋಟಗಾರಿಕೆ ತರಬೇತಿಗೆ ಅರ್ಜಿ | ರೈತ ಮಕ್ಕಳಿಗೆ ಅವಕಾಶ
ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಇಲ್ಲಿ ಯಾವುದೇ ದೊಡ್ಡ ಲಿಖಿತ ಪರೀಕ್ಷೆಗಳ ಬಗ್ಗೆ ಅಧಿಸೂಚನೆಯಲ್ಲಿ ತಿಳಿಸಿಲ್ಲ. ಬದಲಾಗಿ, ನಿಮ್ಮ ಕೌಶಲ್ಯಕ್ಕೆ ಹೆಚ್ಚಿನ ಮಣೆ ಹಾಕಲಾಗುತ್ತದೆ. ಮೊದಲು ನೀವು ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಲಾಗುತ್ತದೆ.
ನಂತರ ಅರ್ಹ ಅಭ್ಯರ್ಥಿಗಳಿಗೆ ‘ಕೌಶಲ ಪರೀಕ್ಷೆ’ (Skill Test) ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿನ ನಿಮ್ಮ ಸಾಧನೆ ಮತ್ತು ನಿಮ್ಮ ಶೈಕ್ಷಣಿಕ ಅಂಕಗಳ (Merit) ಆಧಾರದ ಮೇಲೆ ಪಾರದರ್ಶಕವಾಗಿ ಅಂತಿಮ ಆಯ್ಕೆ ಮಾಡಲಾಗುತ್ತದೆ.
ಇದನ್ನೂ ಓದಿ: LPG Cylinder Booking New Rule: ಸಿಲಿಂಡರ್ ಬುಕ್ ಮಾಡುವವರಿಗೆ ಹೊಸ ನಿಯಮ | ಕೇಂದ್ರ ಸರ್ಕಾರದ ಮಹತ್ವದ ಆದೇಶ
ಸಂಬಳ ಎಷ್ಟು ಸಿಗುತ್ತದೆ ಗೊತ್ತಾ?
ಸರ್ಕಾರಿ ಕೆಲಸದ ಅತಿದೊಡ್ಡ ಆಕರ್ಷಣೆಯೇ ಅದರ ವೇತನ ಶ್ರೇಣಿ. ಈ ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಆರಂಭಿಕವಾಗಿ ₹44,900 ದಿಂದ ಹಿಡಿದು ಗರಿಷ್ಠ ₹1,42,400 ರವರೆಗೆ ಅತ್ಯಾಕರ್ಷಕ ಮಾಸಿಕ ವೇತನ ದೊರೆಯಲಿದೆ. ಇದರ ಜೊತೆಗೆ ಸರ್ಕಾರಿ ಸೌಲಭ್ಯಗಳೂ ಇರಲಿವೆ.
ಅರ್ಜಿ ಶುಲ್ಕದ ಮಾಹಿತಿ
- ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ: ₹500
- ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಇತರ ಮೀಸಲು ವರ್ಗದ ಅಭ್ಯರ್ಥಿಗಳಿಗೆ: ₹250
ಇದನ್ನೂ ಓದಿ: Personal Loan Tips- ತಕ್ಷಣಕ್ಕೆ ಪರ್ಸನಲ್ ಲೋನ್ ಬೇಕಾ? ಈ ಐದು ಟಿಪ್ಸ್ ಪಾಲಿಸಿ
ಅರ್ಜಿ ಸಲ್ಲಿಸುವುದು ಹೇಗೆ? ಮತ್ತು ಕೊನೆಯ ದಿನಾಂಕ
ಅರ್ಜಿಗಳನ್ನು ಕೇವಲ ಆನ್ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶವಿದೆ. ನೀವು ಕರ್ನಾಟಕ ಹೈಕೋರ್ಟ್ ಅಧಿಕೃತ ವೆಬ್ಸೈಟ್ karnatakajudiciary.kar.nic.inಗೆ ಭೇಟಿ ನೀಡಿ, ಅಲ್ಲಿರುವ ಅರ್ಜಿ ಸಲ್ಲಿಕೆ ಲಿಂಕ್ ಮೂಲಕ ಅರ್ಜಿ ತುಂಬಬೇಕು. (ಡೈರೆಕ್ಟರ್ ಅರ್ಜಿ ಲಿಂಕ್ ಲೇಖನದ ಕೊನೆಯಲ್ಲಿದೆ ಗಮನಿಸಿ)
ಅರ್ಜಿ ಸಲ್ಲಿಸುವಾಗ ನಿಮ್ಮ ಅಂಕಪಟ್ಟಿಗಳು, ಇತ್ತೀಚಿನ ಫೋಟೋ ಹಾಗೂ ಸಹಿಯನ್ನು ಸರಿಯಾಗಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವುದನ್ನು ಮರೆಯಬೇಡಿ.
ಇದನ್ನೂ ಓದಿ: Mudra Loan 20 lakhs: ಮುದ್ರಾ ಸಾಲದ ಮಿತಿ 20 ಲಕ್ಷಕ್ಕೆ ಏರಿಕೆ! ಗ್ಯಾರಂಟಿ ಇಲ್ಲದೆ ಲೋನ್ – ಪಡೆಯುವುದು ಹೇಗೆ?
ನೆನಪಿರಲಿ, ಅರ್ಜಿ ಸಲ್ಲಿಸಲು ಏಪ್ರಿಲ್ 15, 2026 ಕೊನೆಯ ದಿನವಾಗಿದೆ. ಕೊನೆಯ ಕ್ಷಣದಲ್ಲಿ ಸರ್ವರ್ ಸಮಸ್ಯೆ ಎದುರಾಗುವ ಸಾಧ್ಯತೆಗಳಿರುವುದರಿಂದ, ಆಸಕ್ತರು ಆದಷ್ಟು ಬೇಗ ಅರ್ಜಿ ಸಲ್ಲಿಸುವುದು ಜಾಣತನ.
ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರಲ್ಲಿ ಯಾರಾದರೂ ಪದವಿ ಮುಗಿಸಿ ಕೆಲಸದ ಹುಡುಕಾಟದಲ್ಲಿದ್ದರೆ, ಈ ಉಪಯುಕ್ತ ಮಾಹಿತಿಯನ್ನು ಖಂಡಿತ ಅವರೊಂದಿಗೆ ಹಂಚಿಕೊಳ್ಳಿ!

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.