Karnataka Yashasvini Yojana 2026- ಯಶಸ್ವಿನಿ ಯೋಜನೆಯಡಿ ಹಸುಗೂಸಿನಿಂದ ವೃದ್ಧರ ವರೆಗೂ 5 ಲಕ್ಷ ರೂ. ಉಚಿತ ಚಿಕಿತ್ಸೆ | ಹೊಸ ಮಾರ್ಗಸೂಚಿ ಬಿಡುಗಡೆ

Spread the love

WhatsApp Group Join Now
Telegram Group Join Now

ಯಶಸ್ವಿನಿ ಆರೋಗ್ಯ ಯೋಜನೆಗೆ (Karnataka Yashasvini Yojana 2026) ಸಂಬಂಧಸಿದಂತೆ ಸಹಕಾರ ಇಲಾಖೆ ಹೊಸ ಮತ್ತು ಸಮಗ್ರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

ರಾಜ್ಯದಲ್ಲಿ ಲಕ್ಷಾಂತರ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣೆಗೆ ಆಸರೆಯಾಗಿರುವ ಯಶಸ್ವಿನಿ ಆರೋಗ್ಯ ಯೋಜನೆಯನ್ನು 2025-26ನೇ ಸಾಲಿಗೂ ಮುಂದುವರಿಸಲು ರಾಜ್ಯ ಸರ್ಕಾರ ಅಧಿಕೃತವಾಗಿ ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಹಕಾರ ಇಲಾಖೆ ಹೊಸ ಮತ್ತು ಸಮಗ್ರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಈ ವರ್ಷದ ಯಶಸ್ವಿನಿ ಯೋಜನೆಯಲ್ಲಿ ಹಲವು ಮಹತ್ವದ ಬದಲಾವಣೆಗಳು ಮತ್ತು ಸೌಲಭ್ಯಗಳನ್ನು ಸೇರಿಸಲಾಗಿದ್ದು, ಅದರಲ್ಲೂ ನವಜಾತ ಶಿಶುಗಳಿಗೂ ಚಿಕಿತ್ಸೆ ಸಿಗುವ ವ್ಯವಸ್ಥೆ ಕಲ್ಪಿಸಿರುವುದು ಅತ್ಯಂತ ಪ್ರಮುಖ ಅಂಶವಾಗಿದೆ.

ಇದನ್ನೂ ಓದಿ: National Scholarship Portal- ರಾಷ್ಟ್ರೀಯ ವಿದ್ಯಾರ್ಥಿವೇತನ ಯೋಜನೆ: ವಿದ್ಯಾರ್ಥಿಗಳಿಗೆ 1.25 ಲಕ್ಷ ರೂ. ವರೆಗೆ ಸರ್ಕಾರದ ಆರ್ಥಿಕ ನೆರವು

Newborns Also Covered – ನವಜಾತ ಶಿಶುಗಳಿಗೂ ಚಿಕಿತ್ಸೆ

ಈವರೆಗೆ ಯಶಸ್ವಿನಿ ಯೋಜನೆಯ ಲಾಭವನ್ನು ಸಹಕಾರಿ ಸದಸ್ಯರು ಮಾತ್ರ ಪಡೆಯುತ್ತಿದ್ದರು. ಆದರೆ ಹೊಸ ಮಾರ್ಗಸೂಚಿಯ ಪ್ರಕಾರ, ಈಗ ಹುಟ್ಟಿದ ಮಗು ಕೂಡ ತಾಯಿಯ ಯಶಸ್ವಿನಿ ಕಾರ್ಡ್ ಆಧಾರದ ಮೇಲೆ ಚಿಕಿತ್ಸೆ ಪಡೆಯಲು ಅರ್ಹವಾಗಿರುತ್ತದೆ.

ಇದು ಗ್ರಾಮೀಣ ಹಾಗೂ ನಗರ ಭಾಗದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಬಹು ದೊಡ್ಡ ನಿಟ್ಟುಸಿರು ಬಿಡುವಂತಾಗಿದೆ. ಹೆರಿಗೆ ನಂತರ ಶಿಶು ಚಿಕಿತ್ಸೆಗೆ ಆಗುವ ಹೆಚ್ಚಿನ ವೆಚ್ಚವನ್ನು ಇದು ತಗ್ಗಿಸಲಿದೆ.

ಇದನ್ನೂ ಓದಿ: Gruhalakshmi 2 Months Pending Payment- ಗೃಹಲಕ್ಷ್ಮಿ ಯೋಜನೆ 2 ತಿಂಗಳ ಬಾಕಿ ಹಣ ಬಿಡುಗಡೆ | ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ

Registration & Target – ನೋಂದಣಿ ಪ್ರಕ್ರಿಯೆ ಮತ್ತು ಗುರಿ

2025-26ನೇ ಸಾಲಿನ ಯಶಸ್ವಿನಿ ಯೋಜನೆಗೆ ಜನವರಿ 3, 2026 ರಿಂದಲೇ ನೋಂದಣಿ ಆರಂಭವಾಗಿದೆ. ಮಾರ್ಚ್ 20-31, 2026 ರವರೆಗೆ ನೋಂದಣಿ ಅವಕಾಶ ನೀಡಲಾಗಿದೆ.

ಈ ಸಾಲಿನಲ್ಲಿ ರಾಜ್ಯಾದ್ಯಂತ 50 ಲಕ್ಷ ಸದಸ್ಯರನ್ನು ಯೋಜನೆಯಡಿ ಒಳಪಡಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಸಹಕಾರಿ ಸಂಘಗಳ ಮೂಲಕ ನೋಂದಣಿ ಕಾರ್ಯ ಆರಂಭಗೊಂಡಿದೆ.

Karnataka Yashasvini Yojana 2026
Karnataka Yashasvini Yojana 2026

Rural-Urban Contribution – ಗ್ರಾಮೀಣ – ನಗರ ಪ್ರತ್ಯೇಕತೆ ವಂತಿಗೆ

ಯಶಸ್ವಿನಿ ಯೋಜನೆಯಲ್ಲಿ ಗ್ರಾಮೀಣ ಮತ್ತು ನಗರ ಭಾಗದ ಸದಸ್ಯರಿಗೆ ವಿಭಿನ್ನ ವಂತಿಗೆ ನಿಗದಿಪಡಿಸಲಾಗಿದೆ.

  • ಗ್ರಾಮೀಣ ಪ್ರದೇಶದ ನಾಲ್ವರು ಸದಸ್ಯರ ಕುಟುಂಬಕ್ಕೆ: ವಾರ್ಷಿಕ ₹500- ಹೆಚ್ಚುವರಿ ಸದಸ್ಯರಿಗೆ ತಲಾ ₹100
  • ನಗರ ಪ್ರದೇಶದ ನಾಲ್ವರು ಸದಸ್ಯರ ಕುಟುಂಬಕ್ಕೆ: ವಾರ್ಷಿಕ ₹1000- ಹೆಚ್ಚುವರಿ ಸದಸ್ಯರಿಗೆ ತಲಾ ₹200
  • ಎಸ್‌ಸಿ / ಎಸ್‌ಟಿ ಸಮುದಾಯದ ಸದಸ್ಯರ ವಂತಿಗೆಯನ್ನು ಸರ್ಕಾರವೇ ಭರಿಸುತ್ತದೆ. ಅವರಿಗೆ ಯಾವುದೇ ಹಣ ಪಾವತಿ ಅಗತ್ಯವಿಲ್ಲ.

ಇದನ್ನೂ ಓದಿ: Rashtriya Gokul Mission Scheme – ರಾಷ್ಟ್ರೀಯ ಗೋಕುಲ ಮಿಷನ್: ಹಸು ಸಾಕಾಣಿಕೆಗೆ ಸರ್ಕಾರದ ಭರ್ಜರಿ ಸಹಾಯಧನ | ವರ್ಷಕ್ಕೆ ಹೆಚ್ಚುವರಿ ₹21,500 ಆದಾಯ

Treatments & Hospitals – ಲಭ್ಯವಿರುವ ಚಿಕಿತ್ಸೆಗಳು ಮತ್ತು ಆಸ್ಪತ್ರೆಗಳು

ಯಶಸ್ವಿನಿ ಯೋಜನೆಯಡಿ ಒಟ್ಟು 2,128 ವಿವಿಧ ಚಿಕಿತ್ಸೆಗಳು ಅನ್ವವಾಗುತ್ತವೆ. ಇದರಲ್ಲಿ 478 ಐಸಿಯು (ICU) ಚಿಕಿತ್ಸೆಗಳು ಸೇರಿವೆ.

ಫಲಾನುಭವಿಗಳಿಗೆ ಜನರಲ್ ವಾರ್ಡ್’ನಲ್ಲಿ ಉಚಿತ ಚಿಕಿತ್ಸೆ ಲಭ್ಯ. ಒಂದು ವೇಳೆ ಸೆಮಿ ಸ್ಪೆಷಲ್ ಅಥವಾ ಸ್ಪೆಷಲ್ ವಾರ್ಡ್ ಬಯಸಿದರೆ, ಅದರ ಹೆಚ್ಚುವರಿ ವೆಚ್ಚವನ್ನು ಫಲಾನುಭವಿಗಳೇ ಭರಿಸಬೇಕು.

ಚಿಕಿತ್ಸೆಗಳ ಪಟ್ಟಿ, ಆಸ್ಪತ್ರೆಗಳ ವಿವರ ಮತ್ತು ಶಸ್ತ್ರಚಿಕಿತ್ಸೆಗಳ ಮಾಹಿತಿಯನ್ನು ‘ಸಹಕಾರ ಸಿಂಧು’ ಪೋರ್ಟಲ್ ಅಥವಾ ಯಶಸ್ವಿನಿ ಟ್ರಸ್ಟ್ನ ಅಧಿಕೃತ ವೆಬ್‌ಸೈಟ್ ನಲ್ಲಿ ನೋಡಬಹುದು.

WhatsApp Group Join Now
Telegram Group Join Now

ಯಶಸ್ವಿನಿ ಯೋಜನೆಯ ಕುಟುಂಬದ ಪ್ರಧಾನ ಅರ್ಜಿದಾರ, ಆತ ತಂದೆ – ತಾಯಿ, ಪತಿ / ಪತ್ನಿ, ಮಕ್ಕಳು ಹಾಗೂ ಮೊಮ್ಮಕ್ಕಳು ಈ ಎಲ್ಲರೂ ಒಂದೇ ಕಾರ್ಡ್ ಅಡಿಯಲ್ಲಿ ಲಾಭ ಪಡೆಯಬಹುದು.

ಇದನ್ನೂ ಓದಿ: Karnataka Cold Wave Warning- ಕರ್ನಾಟಕದಲ್ಲಿ ಮತ್ತೆ ಹೆಚ್ಚಿದ ಚಳಿ | ಹಲವು ಜಿಲ್ಲೆಗಳಲ್ಲಿ ಶೀತ ಅಲೆ ಎಚ್ಚರಿಕೆ!

Card Distribution & Duplicate – ಕಾರ್ಡ್ ವಿತರಣೆ ಮತ್ತು ಡೂಪ್ಲಿಕೇಟ್ ವ್ಯವಸ್ಥೆ

ಏಪ್ರಿಲ್ 1, 2026 ರಿಂದ ಪ್ಲಾಸ್ಟಿಕ್ ಯಶಸ್ವಿನಿ ಕಾರ್ಡ್ ವಿತರಣೆ ಆರಂಭವಾಗಲಿದೆ. ಪ್ರತಿಯೊಬ್ಬ ಸದಸ್ಯನಿಗೂ ಯೂನಿಕ್ ಐಡಿ ಸಂಖ್ಯೆ ಹೊಂದಿರುವ ಕಾರ್ಡ್ ನೀಡಲಾಗುತ್ತದೆ.

ಕಾರ್ಡ್ ಕಳೆದುಹೋದರೆ ₹250 ಶುಲ್ಕ ಪಾವತಿಸಿ ಡೂಪ್ಲಿಕೇಟ್ ಕಾರ್ಡ್ ಪಡೆಯಬಹುದು. ತುರ್ತು ಸಂದರ್ಭಗಳಲ್ಲಿ ಕಾರ್ಡ್ ಇಲ್ಲದಿದ್ದರೂ, ಸಹಕಾರಿ ಸಂಘದ ದಾಖಲೆಗಳ ಆಧಾರದ ಮೇಲೆ ತಾತ್ಕಾಲಿಕ ಇ-ಕಾರ್ಡ್ ಪಡೆದು ಚಿಕಿತ್ಸೆ ಪಡೆಯಲು ಅವಕಾಶವಿದೆ.

Karnataka Yashasvini Yojana 2026
Karnataka Yashasvini Yojana 2026

ಇದನ್ನೂ ಓದಿ: Amrutha Swabhimani Kurigahi Subsidy- ಕುರಿ-ಮೇಕೆ ಸಾಕಾಣಿಕೆಗೆ 43,750 ರೂ. ಸರ್ಕಾರದ ಸಹಾಯಧನ | ಅರ್ಜಿ ಸಲ್ಲಿಕೆ ಸಂಪೂರ್ಣ ಮಾಹಿತಿ ಇಲ್ಲಿದೆ…

Treatment Cost Limit – ಚಿಕಿತ್ಸೆ ವೆಚ್ಚದ ಮಿತಿ

ಪ್ರತಿ ಕುಟುಂಬಕ್ಕೆ ವಾರ್ಷಿಕ ಗರಿಷ್ಠ ₹5 ಲಕ್ಷ ರೂ.ವರೆಗೆ ನಗದು ರಹಿತ ಚಿಕಿತ್ಸೆಗೆ ಅವಕಾಶವಿದೆ. ಈ ಸೌಲಭ್ಯವನ್ನು ಪಡೆಯಲು ಸಹಕಾರಿ ಸಂಘದ ಸದಸ್ಯತ್ವ ಕಡ್ಡಾಯ.

ಸಹಕಾರಿ ಸಂಘಗಳ ನೌಕರರಿಗೆ ಕನಿಷ್ಠ 3 ವರ್ಷ ಸೇವೆ ಸಲ್ಲಿಸಿರಬೇಕು. ಮಾಸಿಕ ವೇತನ ₹30,000 ಮೀರಬಾರದು. 30 ಸಾವಿರಕ್ಕೂ ಹೆಚ್ಚು ಸಂಬಳ ಪಡೆಯುವವರಿಗೆ ಯಶಸ್ವಿನಿ ಯೋಜನೆ ಅನ್ವಯವಾಗುವುದಿಲ್ಲ.

False Information Penalty – ಸುಳ್ಳು ಮಾಹಿತಿ ನೀಡಿದರೆ ಏನು?

ಯೋಜನೆಗೆ ನೋಂದಾಯಿಸುವ ವೇಳೆ ಸುಳ್ಳು ಮಾಹಿತಿ ನೀಡಿದರೆ ಅಥವಾ ಅರ್ಹತೆ ಇಲ್ಲದೆ ನೋಂದಣಿ ಮಾಡಿಕೊಂಡರೆ ಅಂತಹವರ ಸದಸ್ಯತ್ವ ರದ್ದಾಗುತ್ತದೆ. ಜೊತೆಗೆ ಪಾವತಿಸಿದ ಹಣವನ್ನು ಜಪ್ತಿ ಮಾಡಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟ ಎಚ್ಚರಿಕೆ ನೀಡಲಾಗಿದೆ.

ಆಧಾರ್ ಕಾರ್ಡ್ ಹಾಗೂ ಸಕ್ರಿಯ ಮೊಬೈಲ್ ಸಂಖ್ಯೆಯೊಂದಿಗೆ ಅರ್ಹ ಫಲಾನುಭವಿಗಳು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಮಾರ್ಚ್ 31ರ ವರೆಗೂ ನೋಂದಣಿ ಮಾಡಿಸಲು ಅವಕಾಶವಿದೆ.

ಇದನ್ನೂ ಓದಿ: Crop Loss and Crop Insurance Scheme- ಬೆಳೆ ಹಾನಿ ಮತ್ತು ಬೆಳೆ ವಿಮೆ ಪರಿಹಾರದ ಹಣ ರೈತರ ಖಾತೆಗೆ ಜಮಾ | ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

Important Dates – ಪ್ರಮುಖ ದಿನಾಂಕಗಳು

  • ನೋಂದಣಿ ಆರಂಭ: ಜನವರಿ 03, 2026
  • ನೋಂದಣಿ ಕೊನೆ ದಿನ: ಮಾರ್ಚ್ 20-31, 2026
  • ಚಿಕಿತ್ಸಾ ಅವಧಿ: ಏಪ್ರಿಲ್ 1, 2026 ರಿಂದ ಮಾರ್ಚ್ 31, 2027

ಯಶಸ್ವಿನಿ ಯೋಜನೆ 2025-26 ರಾಜ್ಯದ ಸಹಕಾರಿ ಸದಸ್ಯರಿಗೆ ಆರೋಗ್ಯದ ಭದ್ರತೆ ಒದಗಿಸುವ ಅತ್ಯಂತ ಮಹತ್ವದ ಯೋಜನೆಯಾಗಿದೆ. ವಿಶೇಷವಾಗಿ ನವಜಾತ ಶಿಶುಗಳಿಗೂ ಚಿಕಿತ್ಸೆ ಸಿಗುವ ವ್ಯವಸ್ಥೆ ಈ ಯೋಜನೆಯನ್ನು ಇನ್ನಷ್ಟು ಜನಪರವಾಗಿಸಿದೆ. ನೀವು ಸಹಕಾರಿ ಸಂಘದ ಸದಸ್ಯರಾಗಿದ್ದರೆ, ಸಮಯ ಮೀರದೆ ನೋಂದಣಿ ಮಾಡಿಕೊಂಡು ಈ ಯೋಜನೆಯ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಿ.

ಅಧಿಕೃತ ವೆಬ್‌ಸೈಟ್: sahakarasindhu.karnataka.gov.in

Karnataka Bank Personal Loan- ಕರ್ನಾಟಕ ಬ್ಯಾಂಕ್ ಪರ್ಸನಲ್ ಲೋನ್ | ಕಡಿಮೆ ಬಡ್ಡಿಯಲ್ಲಿ ₹25 ಲಕ್ಷವರೆಗೆ ಸುಲಭ ಸಾಲ


Spread the love
error: Content is protected !!