Govt SchemesNews

Voluntary Retirement- ಸ್ವಯಂ ನಿವೃತ್ತಿ ಪಡೆದ ಸರ್ಕಾರಿ ನೌಕರರಿಗೆ ಭತ್ಯೆ | ಕೇಂದ್ರ ಸಿಬ್ಬಂದಿ ಸಚಿವಾಲಯದ ಮಹತ್ವದ ಮಾಹಿತಿ

Spread the love

ಸ್ವಯಂ ಪ್ರೇರಿತ ನಿವೃತ್ತಿ (Voluntary Retirement) ಪಡೆಯುವ ಸರ್ಕಾರಿ ನೌಕರರಿಗೆ ಭತ್ಯೆ (ಪಿಂಚಣಿ) ಸಿಗಲಿದ್ದು; ಈ ಕುರಿತು ಕೇಂದ್ರ ಸಿಬ್ಬಂದಿ ಸಚಿವಾಲಯವು ನೀಡಿದ ಮಹತ್ವದ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ನಿವೃತ್ತಿ ನಂತರ ಭದ್ರತೆ ಮತ್ತು ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳು ಜಾರಿಯಲ್ಲಿವೆ. ಇತ್ತೀಚೆಗೆ, ಕೇಂದ್ರ ಸಿಬ್ಬಂದಿ ಸಚಿವಾಲಯವು ನಿವೃತ್ತಿ ಸಂಬಂಧಿತ ಮಹತ್ವದ ಪ್ರಕಟಣೆ ಹೊರಡಿಸಿದ್ದು, ಅದು ವಿಶೇಷವಾಗಿ ಸ್ವಯಂಪ್ರೇರಿತ ನಿವೃತ್ತಿ (VRS) ಆಯ್ಕೆಮಾಡುವ ನೌಕರರಿಗೆ ಹೆಚ್ಚಿನ ನೆರವಾಗಲಿದೆ.

VRS ಪಡೆದ ನೌಕರರಿಗೆ ಭತ್ಯೆ

ಹೊಸ ನಿಯಮಗಳ ಪ್ರಕಾರ, 20 ವರ್ಷಗಳ ಅಥವಾ ಅದಕ್ಕಿಂತ ಹೆಚ್ಚು ಅವಧಿ ಸೇವೆ ಸಲ್ಲಿಸಿದ ಕೇಂದ್ರ ಸರ್ಕಾರಿ ನೌಕರರು VRS ಆಯ್ಕೆ ಮಾಡಿದರೆ ಅವರು ಅನುಪಾತದ ಆಧಾರದ ಮೇಲೆ ಭತ್ಯೆ (ಪಿಂಚಣಿ) ಪಡೆಯಲು ಅರ್ಹರಾಗುತ್ತಾರೆ.

ಇದರಿಂದ, ವೈಯಕ್ತಿಕ ಕಾರಣಗಳಿಂದ ಅಥವಾ ಆರೋಗ್ಯದ ಕಾರಣದಿಂದ ಸರ್ಕಾರಿ ಸೇವೆಯನ್ನು ಮುಂದುವರಿಸಲು ಸಾಧ್ಯವಾಗದ ನೌಕರರಿಗೆ ಆರ್ಥಿಕ ಭದ್ರತೆ ಸಿಗಲಿದೆ.

ಇದನ್ನೂ ಓದಿ: Delhi Police Constable Recruitment 2025- ಪಿಯುಸಿ ಪಾಸಾದವರಿಗೆ ದಿಲ್ಲಿ ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ | 7,565 ಹುದ್ದೆಗಳ ನೇಮಕಾತಿ

ಏಕೀಕೃತ ಪಿಂಚಣಿ ಯೋಜನೆ (UPS) ಆಯ್ಕೆ

ಸಿಬ್ಬಂದಿ ಸಚಿವಾಲಯವು ಸೆಪ್ಟೆಂಬರ್ 2 ರಂದು ಹೊರಡಿಸಿದ ಅಧಿಸೂಚನೆಯ ಪ್ರಕಾರ, ಕೇಂದ್ರ ನಾಗರಿಕ ಸೇವೆಗಳ ಏಕೀಕೃತ ಪಿಂಚಣಿ ಯೋಜನೆ (Unified Pension Scheme – UPS) 2025 ಅಡಿಯಲ್ಲಿ, ನೌಕರರು ಹಳೆಯ NPS (National Pension System) ಬದಲಿಗೆ UPS ಆಯ್ಕೆ ಮಾಡಿಕೊಳ್ಳಬಹುದಾಗಿದೆ.

UPS ಅಡಿಯಲ್ಲಿ 25 ವರ್ಷಗಳ ಸೇವೆ ಮಾಡಿದವರು ಪೂರ್ಣ ಪ್ರಮಾಣದ ಪಿಂಚಣಿ ಪಡೆಯುವರು. ಆದರೆ, 20 ವರ್ಷಗಳ ಸೇವೆಯ ಬಳಿಕ VRS ಪಡೆದರೂ, ಅವರಿಗೆ ಅನುಪಾತದ ಆಧಾರದ ಮೇಲೆ ಭತ್ಯೆ ನೀಡಲಾಗುತ್ತದೆ.

ಸ್ವಯಂ ಪ್ರೇರಿತ ನಿವೃತ್ತಿ ಪಡೆಯುವ ಸರ್ಕಾರಿ ನೌಕರರಿಗೆ ಭತ್ಯೆ (ಪಿಂಚಣಿ) ಸಿಗಲಿದ್ದು; ಈ ಕುರಿತು ಕೇಂದ್ರ ಸಿಬ್ಬಂದಿ ಸಚಿವಾಲಯವು ನೀಡಿದ ಮಹತ್ವದ ಮಾಹಿತಿ ಇಲ್ಲಿದೆ...
Voluntary Retirement
VRS ಪಡೆದವರಿಗೆ ಹೆಚ್ಚುವರಿ ಲಾಭಗಳು

VRS ಮೂಲಕ ಸೇವೆಯಿಂದ ದೂರವಾಗುವ ನೌಕರರು ಕೇವಲ ಪಿಂಚಣಿಯಷ್ಟೇ ಅಲ್ಲ, ಹೆಚ್ಚುವರಿ ಸೌಲಭ್ಯಗಳನ್ನೂ ಪಡೆಯುತ್ತಾರೆ. ಆರು ತಿಂಗಳ ಅವಧಿಗೆ ಮೂಲ ವೇತನ ಮತ್ತು ತುಟ್ಟಿಭತ್ಯೆಯ 1/10ನೇ ಹಂಚಿಕೆ ಲಾಭ, Gratuity (ನಿವೃತ್ತಿ ಮೊತ್ತ) ಹಾಗೂ ಇತರ ಕಾನೂನುಬದ್ಧ ಸೌಲಭ್ಯಗಳು ದೊರೆಯಲಿವೆ.

ಇದರೊಂದಿಗೆ, VRS ಪಡೆದ ನಂತರ ನೌಕರರು ಅನುಪಾತದ ಆಧಾರದ ಮೇಲೆ ಭತ್ಯೆ ಪಡೆಯುವ ಮೊದಲು ಮೃತಪಟ್ಟರೆ, ಅವರ ವಿವಾಹಿತ ಸಂಗಾತಿಗೆ (ಅಥವಾ ಕಾನೂನುಬದ್ಧ ಹಕ್ಕುದಾರರಿಗೆ) ಪಾವತಿ ಮಾಡಲಾಗುತ್ತದೆ.

ಇದನ್ನೂ ಓದಿ: PM Surya Ghar Scheme- ಮನೆಗೆ ಪಿಎಂ ಸೂರ್ಯ ಘರ್ ಯೋಜನೆ ಉಚಿತ ಸೋಲಾರ್ ವಿದ್ಯುತ್ ಪಡೆಯೋದು ಹೇಗೆ? ಇಲ್ಲಿದೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್…

ಯಾರು ಇದರ ಪ್ರಯೋಜನ ಪಡೆಯಬಹುದು?

ಈ ಹೊಸ ನಿಯಮವು, ವಿಶೇಷವಾಗಿ 20 ವರ್ಷಗಳ ಸೇವೆ ಪೂರ್ಣಗೊಳಿಸಿದರೂ ಮುಂದುವರಿಸಲು ಸಾಧ್ಯವಾಗದ ನೌಕರರಿಗೆ ಸಹಾಯಕವಾಗಲಿದೆ. ಆರೋಗ್ಯ ಸಮಸ್ಯೆ, ಕುಟುಂಬದ ಜವಾಬ್ದಾರಿ ಅಥವಾ ವೈಯಕ್ತಿಕ ಕಾರಣಗಳಿಂದ ಉದ್ಯೋಗ ತ್ಯಜಿಸುವವರಿಗೆ ಇದು ದೊಡ್ಡ ಆರ್ಥಿಕ ನೆರವು.

ನಿವೃತ್ತಿ ಸಮಯದಲ್ಲಿ ನೌಕರರು ಆರ್ಥಿಕ ಒತ್ತಡ ಅನುಭವಿಸದಂತೆ ಮಾಡುವ ಉದ್ದೇಶ ಇದರ ಹಿಂದಿದೆ. ಕೇಂದ್ರ ಸಿಬ್ಬಂದಿ ಸಚಿವಾಲಯದ ಪ್ರಕಾರ, ಈ ನಿಯಮಗಳು ಸಮಗ್ರ ಮತ್ತು ಮಾನವೀಯ ದೃಷ್ಟಿಕೋನ ಹೊಂದಿದ್ದು, ಎಲ್ಲಾ ಕೇಂದ್ರ ಸರ್ಕಾರಿ ನೌಕರರಿಗೆ ಪ್ರಯೋಜನಕಾರಿ ಆಗುತ್ತವೆ.

Karnataka Arogya Sanjeevini Scheme 2025- ಸರ್ಕಾರಿ ನೌಕರರಿಗೆ ‘ಆರೋಗ್ಯ ಸಂಜೀವಿನಿ’ ಯೋಜನೆ ಜಾರಿ | ಅಕ್ಟೋಬರ್ 1ರಿಂದ ನಗದುರಹಿತ ಚಿಕಿತ್ಸೆ


Spread the love
WhatsApp Group Join Now
Telegram Group Join Now

Related Articles

Back to top button
error: Content is protected !!