ಇದೇ ಜುಲೈ ತಿಂಗಳಿನಿಂದ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (Govt Employees DA Hike) ಹೆಚ್ಚಳವಾಗುವ ಸಾಧ್ಯತೆ ಇದೆ. ಇದರಿಂದ ನೌಕರರ ಸಂಬಳ ಕೂಡ ಏರಿಕೆಯಾಗಲಿದ್ದು; ಈ ಕುರಿತ ಮಾಹಿತಿ ಇಲ್ಲಿದೆ…
ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಈ ಜುಲೈ ತಿಂಗಳಲ್ಲಿ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, 2025ರ ಜುಲೈನಲ್ಲಿ ತುಟ್ಟಿಭತ್ಯೆ (Dearness Allowance) ಶೇಕಡಾ 3% ಹೆಚ್ಚಳ ಆಗಬಹುದೆಂಬ ನಿರೀಕ್ಷೆ ಮೂಡಿದೆ.
ಇದರಿಂದ ಡಿಎ ಶೇಕಡಾ 55 ರಿಂದ 58ಕ್ಕೆ ಏರಿಕೆಯಾಗಬಹುದು. ಈ ಏರಿಕೆಯು ಕೇಂದ್ರ ಸರ್ಕಾರದ 7ನೇ ವೇತನ ಆಯೋಗದ ಅಡಿಯಲ್ಲಿ ಜಾರಿಗೆ ಬರುವ ಕೊನೆಯ ಡಿಎ ಪರಿಷ್ಕರಣೆ ಎನ್ನಲಾಗುತ್ತಿದೆ.
Solar Free Electricity- ಮನೆಗೆ 20 ವರ್ಷ ಉಚಿತ ಸೋಲಾರ್ ವಿದ್ಯುತ್ ಪಡೆಯಲು ಹೀಗೆ ಅರ್ಜಿ ಸಲ್ಲಿಸಿ…
ಡಿಎ ಏಕೆ ಹೆಚ್ಚಳವಾಗುತ್ತಿದೆ?
ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ – ಕೈಗಾರಿಕಾ ಕಾರ್ಮಿಕರಿಗಾಗಿ (AICPI-IW) ಅಂಕಿಅಂಶಗಳ ಆಧಾರದ ಮೇಲೆ ಡಿಎ ಪರಿಷ್ಕರಣೆ ಜರುಗುತ್ತದೆ. ಈ ಸೂಚ್ಯಂಕವು ದೇಶದ ಕಾರ್ಮಿಕರ ದಿನನಿತ್ಯದ ಜೀವನ ವೆಚ್ಚವನ್ನು ಪ್ರತಿಬಿಂಬಿಸುತ್ತದೆ.
2025ರ ಏಪ್ರಿಲ್ನಲ್ಲಿ AICPI-IW ಸೂಚ್ಯಂಕ 143.5ಕ್ಕೆ ತಲುಪಿದ್ದು, ಜನವರಿಯಲ್ಲಿ ಇದು 143.2 ಇತ್ತು. ನಿರಂತರವಾಗಿ ಸೂಚ್ಯಂಕ ಏರುತ್ತಿರುವುದು ಡಿಎ ಹೆಚ್ಚಳಕ್ಕೆ ದಾರಿ ಮಾಡಿಕೊಡುತ್ತಿದೆ.

ಡಿಎ ಲೆಕ್ಕಾಚಾರ ಹೇಗೆ ನಡೆಯುತ್ತದೆ?
- ಪ್ರತಿ ಆರು ತಿಂಗಳಿಗೊಮ್ಮೆ, ಜನವರಿ ಮತ್ತು ಜುಲೈ ತಿಂಗಳಲ್ಲಿ ಡಿಎ ಪರಿಷ್ಕರಣೆ ನಡೆಯುತ್ತದೆ.
- 2025ರ ಜನವರಿಯಲ್ಲಿ ಡಿಎ ಶೇಕಡಾ 2ರಷ್ಟು ಹೆಚ್ಚಳವಾಗಿ ಶೇಕಡಾ 55ರಷ್ಟು ಆಗಿತ್ತು.
- ಇದೀಗ, ಎಪ್ರಿಲ್ವರೆಗಿನ ಸೂಚ್ಯಂಕ ಸರಾಸರಿಯು ಶೇಕಡಾ 3ರಷ್ಟು ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ತಜ್ಞರು ನಿರ್ಧರಿಸಿದ್ದಾರೆ.
ಡಿಎ ಹೆಚ್ಚಳದಿಂದ ಎಷ್ಟು ಮಂದಿ ಲಾಭವಾಗಲಿದೆ?
ಈ ಹೆಚ್ಚಳದಿಂದ ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 65 ಲಕ್ಷ ಪಿಂಚಣಿದಾರರು ನೇರ ಲಾಭ ಪಡೆಯಲಿದ್ದಾರೆ. ಡಿಎ ನೌಕರರ ಸಂಬಳ ಅಥವಾ ಪಿಂಚಣಿಗೆ ಲಗತ್ತಿಸಲಾಗುತ್ತದೆ. ಹೀಗಾಗಿ ಈ ಹೆಚ್ಚಳ ವಾರ್ಷಿಕ ಆದಾಯವನ್ನು ಕೂಡ ಹೆಚ್ಚಿಸುತ್ತದೆ.
ಅಧಿಕೃತ ಘೋಷಣೆ ಯಾವಾಗ?
ಪ್ರತಿ ವರ್ಷದಂತೆ, ಈ ಬಾರಿಯೂ ಡಿಎ ಹೆಚ್ಚಳದ ಅಧಿಕೃತ ಪ್ರಕಟಣೆ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ದೀಪಾವಳಿ ಸಮಯದಲ್ಲಿ ಪ್ರಕಟವಾಗಲಿದೆ. ಆದರೆ ಪರಿಷ್ಕರಣೆ ಜುಲೈ 1, 2025ರಿಂದ ಪರಿಣಾಮಕಾರಿಯಾಗಿ ಜಾರಿಗೆ ಬರಲಿದೆ.
8ನೇ ವೇತನ ಆಯೋಗದ ನಿರೀಕ್ಷೆಯಲ್ಲಿ…
2026ರ ಆರಂಭದಲ್ಲಿ 8ನೇ ವೇತನ ಆಯೋಗವನ್ನು ಘೋಷಿಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ, ಈ ಡಿಎ ಪರಿಷ್ಕರಣೆ 7ನೇ ವೇತನ ಆಯೋಗದ ಕೊನೆಯ ಬದಲಾವಣೆ ಎನಿಸಲಿದೆ.
ಡಿಎ ಹೆಚ್ಚಳ ನೌಕರರ ಮತ್ತು ಪಿಂಚಣಿದಾರರ ಆರ್ಥಿಕ ಸ್ಥಿತಿಗೆ ನೇರವಾಗಿ ಸಹಾಯ ಮಾಡುವ ತೀರ್ಮಾನವಾಗಿದೆ. ಅಧಿಕೃತ ಘೋಷಣೆಯ ನಂತರವೇ ಈ ಪರಿಷ್ಕರಣೆ ಅಂತಿಮವಾಗುತ್ತದೆ. ಈ ಹಿನ್ನಲೆಯಲ್ಲಿ ನೌಕರರು ಸರ್ಕಾರದ ಅಧಿಕೃತ ಪ್ರಕಟಣೆಯ ನಿರೀಕ್ಷೆಯಲ್ಲಿದ್ದಾರೆ.
Old Pension Scheme Karnataka- ರಾಜ್ಯ ಸರಕಾರಿ ನೌಕರರಿಗೆ ಹಳೇ ಪಿಂಚಣಿ ಯೋಜನೆ ಜಾರಿ | ಸರ್ಕಾರದ ಮಹತ್ವದ ಸೂಚನೆ