Weed Mat Subsidy- ತೋಟಗಾರಿಕೆ ಇಲಾಖೆಯಿಂದ ವೀಡ್ ಮ್ಯಾಟ್ ಖರೀದಿಗೆ 1 ಲಕ್ಷ ರೂ. ಸಹಾಯಧನ | MIDH ಯೋಜನೆಯಡಿ ರೈತರಿಗೆ ಸುವರ್ಣಾವಕಾಶ

ವೀಡ್ ಮ್ಯಾಟ್ ಖರೀದಿಗೆ ತೋಟಗಾರಿಕೆ ಇಲಾಖೆಯಿಂದ ₹1 ಲಕ್ಷ ಸಹಾಯಧನ (Weed Mat Subsidy) ನೀಡಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ರೈತರು ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಪ್ರಗತಿಪರ ರೈತರಿಗಾಗಿ ರಾಜ್ಯ ಸರ್ಕಾರ ಪ್ರತಿವರ್ಷ ಅನೇಕ ಯೋಜನೆಗಳನ್ನು ಪರಿಚಯಿಸುತ್ತಿದೆ. ಆ ಪ್ರಕಾರ 2025-26ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆ ಕೂಡಾ ಮಹತ್ವದ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಅದರಡಿಯಲ್ಲಿ ರೈತರು ವೀಡ್ ಮ್ಯಾಟ್ (Weed Mat) ಖರೀದಿಗೆ ಭರ್ಜರಿ ಸಹಾಯಧನ ಪಡೆಯಬಹುದಾಗಿದೆ. ಕರ್ನಾಟಕ … Read more

BCM Free Hostel Admission 2025- ಮೆಟ್ರಿಕ್ ನಂತರದ ಬಿಸಿಎಂ ಉಚಿತ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

2025-26ನೇ ಸಾಲಿನ ಮೆಟ್ರಿಕ್ ನಂತರದ ಬಿಸಿಎಂ ವಿದ್ಯಾರ್ಥಿನಿಲಯಗಳಲ್ಲಿ (BCM Free Hostel Admission 2025) ಹೊಸದಾಗಿ ಪ್ರವೇಶ ಪಡೆಯಲು ಅರ್ಜಿ ಆಹ್ವಾಸಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ… ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಲ್ಲಿ 2025-26ನೇ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭಿಸಿದೆ. ಈ ಹಾಸ್ಟೆಲ್‌ಗಳಲ್ಲಿ ಹೊಸದಾಗಿ ಪ್ರವೇಶ ಬಯಸುವ ಬಾಲಕ ಮತ್ತು ಬಾಲಕಿಯರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಮೆಟ್ರಿಕ್ ನಂತರದ ಯಾವುದೇ ಸಾಮಾನ್ಯ ಪದವಿ ಕೋರ್ಸುಗಳಲ್ಲಿ ಪ್ರವೇಶ ಪಡೆದಿರುವ ಹಿಂದುಳಿದ ವರ್ಗಗಳ … Read more

IBPS Bank Recruitment 2025 – ವಿವಿಧ 11 ಸರ್ಕಾರಿ ಬ್ಯಾಂಕುಗಳಲ್ಲಿ 6,215 ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಸುವರ್ಣಾವಕಾಶ

ದೇಶದ 11 ಸರ್ಕಾರಿ ಬ್ಯಾಂಕುಗಳಲ್ಲಿ ಒಟ್ಟು 6,215 ಹುದ್ದೆಗಳಿಗೆ ಪದವೀಧರರಿಂದ (IBPS Bank Recruitment 2025 ) ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ… 2026-27ನೇ ಸಾಲಿಗೆ ಬ್ಯಾಂಕ್ ಉದ್ಯೋಗವನ್ನು ಕನಸು ಕಾಣುವ ಪದವೀಧರರಿಗೆ ಬಂಪರ್ ಸುದ್ದಿ! ಐಬಿಪಿಎಸ್ (Institute of Banking Personnel Selection) ಸಂಸ್ಥೆ ಬರೋಬ್ಬರಿ 6,215 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರೊಬೇಷನರಿ ಆಫೀಸರ್ (PO), ಮ್ಯಾನೇಜ್‌ಮೆಂಟ್ ಟ್ರೇನಿ (MT) ಮತ್ತು ಸ್ಪೆಷಲಿಸ್ಟ್ ಆಫೀಸರ್ (SO) … Read more

PM Yasasvi Scholarship 2025- ಕೇಂದ್ರ ಸರ್ಕಾರದಿಂದ ₹3.72 ಲಕ್ಷ ವರೆಗೆ ವಿಶೇಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ | 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಅವಕಾಶ

ಕೇಂದ್ರ ಸರ್ಕಾರ ‘ಪಿಎಂ ಯಶಸ್ವಿ ವಿದ್ಯಾರ್ಥಿವೇತನ 2025’ (PM Yasasvi Scholarship 2025) ಯೋಜನೆ ಅಡಿಯಲ್ಲಿ ಸ್ಕಾಲರ್‌ಶಿಪ್ ನೀಡಲು ಅರ್ಜಿ ಆಹ್ವಾನಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ಬಡ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಶಿಕ್ಷಣವನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ‘ಪಿಎಂ ಯಶಸ್ವಿ ವಿದ್ಯಾರ್ಥಿವೇತನ ಯೋಜನೆ 2025’ ಅನ್ನು ಘೋಷಿಸಿದ್ದು, ಇದರಡಿಯಲ್ಲಿ ತಲಾ ₹3.72 ಲಕ್ಷ ವರೆಗೆ ಶಿಷ್ಯವೇತನ ನೀಡಲಾಗುತ್ತದೆ. ಈ ಯೋಜನೆಯು ವಿದ್ಯಾರ್ಥಿಗಳು ಹೈಸ್ಕೂಲ್‌ನಿಂದ ಆರಂಭಿಸಿ ಕಾಲೇಜು ಮಟ್ಟದವರೆಗೆ ಉತ್ತಮವಾಗಿ ಓದುತ್ತಿದ್ದರೆ ಹಣಕಾಸು … Read more

Anganwadi LKG UKG Classes- ಅಕ್ಟೋಬರ್‌ನಿಂದ ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳು ಆರಂಭ | ಟೀಚರ್ ನೇಮಕಾತಿ ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ…

ರಾಜ್ಯ ಸರ್ಕಾರ ಅಕ್ಟೋಬರ್’ನಿಂದ ರಾಜ್ಯಾದ್ಯಂತ ಅಂಗನವಾಡಿಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು (Anganwadi LKG UKG Classes) ಆರಂಭಿಸಲು ತೀರ್ಮಾನಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಹತ್ವಾಕಾಂಕ್ಷಿ ಯೋಜನೆಯಂತೆ, ಈ ವರ್ಷ ಅಕ್ಟೋಬರ್ ತಿಂಗಳಿಂದ ರಾಜ್ಯದ ಅಂಗನವಾಡಿಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಅಧಿಕೃತವಾಗಿ ಆರಂಭಿಸಲು ತೀರ್ಮಾನಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಪ್ರತ್ಯೇಕ ಇಲಾಖೆಯಾಗಿ ರೂಪುಗೊಂಡು ಈ ಅಕ್ಟೋಬರ್ 2ರಂದು 50ನೇ ವಾರ್ಷಿಕೋತ್ಸವ … Read more

KCET Seat Blocking- ಸಿಇಟಿ ಸೀಟ್ ಬ್ಲಾಕಿಂಗ್ | ವಿದ್ಯಾರ್ಥಿಗಳಿಗೆ ಕೆಇಎ ಎಚ್ಚರಿಕೆ | ಬೇಕಾಬಿಟ್ಟಿ ಆಪ್ಷನ್ ಎಂಟ್ರಿಗೆ ಬ್ರೇಕ್

ಸಿಇಟಿ ಸೀಟ್ ಬ್ಲಾಕಿಂಗ್ (KCET Seat Blocking) ತಡೆಗೆ ಕೆಇಎ ಹೊಸ ಕಟ್ಟುನಿಟ್ಟಿನ ಕ್ರಮಗಳನ್ನು ಕ್ಯಗೊಂಡಿದ್ದು; ಬೇಕಾಬಿಟ್ಟಿ ಆಪ್ಷನ್ ಎಂಟ್ರಿಗೆ ಬ್ರೇಕ್ ಹಾಕಿದೆ. ಈ ಕುರಿತ ಮಾಹಿತಿ ಇಲ್ಲಿದೆ… ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಿಇಟಿ ಸೀಟ್ ಹಂಚಿಕೆ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕಗೊಳಿಸಲು ಹಾಗೂ ಸೀಟ್ ಬ್ಲಾಕಿಂಗ್ ದಂಧೆಯನ್ನು ತಡೆಗಟ್ಟಲು ಈ ವರ್ಷದಿಂದ ಹೊಸ ತಂತ್ರಜ್ಞಾನಾಧಾರಿತ ನಿಯಮಗಳನ್ನು ಜಾರಿಗೆ ತಂದಿದೆ. ಸ್ಫಷ್ಟವಾಗಿ ಹೇಳುವುದಾದರೆ, ವಿದ್ಯಾರ್ಥಿಗಳು ಬೇಕಾಬಿಟ್ಟಿ ಆಪ್ಷನ್ ಎಂಟ್ರಿ ಮಾಡುವುದಕ್ಕೆ ಕಡಿವಾಣ ಹಾಕಲಾಗಿದೆ! ಸಿಇಟಿ ಸೀಟು ಹಂಚಿಕೆ … Read more

Ration Card Correction- ಜುಲೈ 31 ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ | ಏನೆಲ್ಲ ತಿದ್ದುಪಡಿ ಮಾಡಿಕೊಳ್ಳಬಹುದು? ಸಂಪೂರ್ಣ ಮಾಹಿತಿ ಇಲ್ಲಿದೆ…

ಆಹಾರ ಇಲಾಖೆ ರಾಜ್ಯದ ಎಲ್ಲ ಕುಟುಂಬಗಳಿಗೆ ರೇಷನ್ ಕಾರ್ಡ್ ತಿದ್ದುಪಡಿ (Ration Card Correction) ಮಾಡಿಸಿಕೊಳ್ಳಲು ಜುಲೈ 31ರ ವರೆಗೆ ಮತ್ತೆ ಅವಕಾಶ ನೀಡಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ ನೀಡಿದ್ದು, ಜುಲೈ 08ರಿಂದ ಜುಲೈ 31, 2025ರ ವರೆಗೆ ಸಮಯ ನೀಡಲಾಗಿದೆ. ಈ ಅವಧಿಯಲ್ಲಿ ಯಾರು ಬೇಕಾದರೂ ತಮ್ಮ ಪಡಿತರ ಚೀಟಿಯಲ್ಲಿ ಅಗತ್ಯವಿರುವ ತಿದ್ದುಪಡಿ ಮಾಡಿಸಿಕೊಳ್ಳಬಹುದು. ಏನೆಲ್ಲ ತಿದ್ದುಪಡಿ … Read more

KCET Option Entry 2025- ಸಿಇಟಿ ಆಪ್ಷನ್ ಎಂಟ್ರಿ ಮಹತ್ವದ ಮಾಹಿತಿ | ಅಭ್ಯರ್ಥಿಗಳಿಗೆ ಕೆಇಎ ವಿಶೇಷ ಸೂಚನೆಗಳು ಇಲ್ಲಿವೆ…

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಆಪ್ಷನ್ ಎಂಟ್ರಿ (KCET Option Entry 2025) ಅವಧಿಯನ್ನು ವಿಸ್ತರಿಸಿ ಹೊಸ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಪರಿಷ್ಕೃತ ವೇಳಾಪಟ್ಟಿ ಸಹಿತ ಸಂಪೂರ್ಣ ಮಾಹಿತಿ ಇಲ್ಲಿದೆ… ವಿದ್ಯಾರ್ಥಿಗಳು ಉತ್ಸುಕತೆಯಿಂದ ಕಾಯುತ್ತಿರುವ ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) 2025ರ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಅಭ್ಯರ್ಥಿಗಳ ಆಗುಹೋಗು ಮತ್ತು ತಾಂತ್ರಿಕ ಸಮಸ್ಯೆಗಳನ್ನು ಪರಿಗಣಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಆಪ್ಷನ್ ಎಂಟ್ರಿ ಅವಧಿಯನ್ನು ಜುಲೈ 18, 2025ರ ವರೆಗೆ ವಿಸ್ತರಿಸಿದೆ. ಈ … Read more

Post Office Top 10 Saving Schemes- ಭರ್ಜರಿ ಲಾಭ ನೀಡುವ ಪೋಸ್ಟ್ ಆಫೀಸ್ ಟಾಪ್ 10 ಉಳಿತಾಯ ಯೋಜನೆಗಳು | ಸುರಕ್ಷಿತ ಹೂಡಿಕೆಗೆ ಸೂಕ್ತ ಸ್ಕೀಮುಗಳು

ಸುರಕ್ಷಿತ ಹೂಡಿಕೆ, ಉತ್ತಮ ಲಾಭ ಹಾಗೂ ಸರ್ಕಾರದ ಭದ್ರತೆ ಹೊಂದಿರುವ ಭಾರತೀಯ ಅಂಚೆ ಇಲಾಖೆಯ ಪ್ರಮುಖ 10 ಯೋಜನೆಗಳ (Post Office Top 10 Saving Schemes) ಮಾಹಿತಿ ಇಲ್ಲಿದೆ… ಹಣ ಹೂಡಿಕೆಯಲ್ಲಿ ಭದ್ರತೆ, ನಿರಂತರ ಆದಾಯ ಮತ್ತು ಸರ್ಕಾರದ ಅನುಮೋದನೆ ಬೇಕೆಂದು ಭಾವಿಸುವ ಹೂಡಿಕೆದಾರರಿಗಾಗಿ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು ಅತ್ಯುತ್ತಮ ಆಯ್ಕೆಯಾಗಿವೆ. ಈ ಯೋಜನೆಗಳು ಹಳ್ಳಿಯಿಂದ ನಗರದ ವರೆಗೆ ಎಲ್ಲ ಅಂಚೆ ಕಚೇರಿಗಳಲ್ಲಿ ಲಭ್ಯವಿದ್ದು, ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದೀಗ ನಾವು … Read more

Daughter Rights in Mothers Property- ತಾಯಿಯ ಆಸ್ತಿಯಲ್ಲಿ ಮಗಳಿಗೂ ಹಕ್ಕು ಇದೆಯಾ? ಹಿಂದೂ ಮತ್ತು ಮುಸ್ಲಿಂ ಧರ್ಮದ ಕಾನೂನು ಏನು ಹೇಳುತ್ತದೆ?

ತಾಯಿಯ ಮರಣದ ನಂತರ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಹಕ್ಕು ಇದೆಯಾ? ಹಿಂದು ಮತ್ತು ಮುಸ್ಲಿಂ ಕಾನೂನುಗಳು (Daughter Rights in Mothers Property) ಏನು ಹೇಳುತ್ತವೆ? ಸಂಪೂರ್ಣ ಮಾಹಿತಿ ಇಲ್ಲಿದೆ… ಭಾರತದಲ್ಲಿ ಆಸ್ತಿ ಹಕ್ಕಿಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಹಲವಾರು ಗೊಂದಲಗಳಿವೆ. ವಿಶೇಷವಾಗಿ ತಾಯಿಯ ಹೆಸರಿನಲ್ಲಿ ಆಸ್ತಿ ಇದ್ದರೆ ಅದರ ಮೇಲೆ ಹೆಣ್ಣುಮಕ್ಕಳಿಗೂ ಹಕ್ಕು ಇದೆಯೇ ಎಂಬ ಪ್ರಶ್ನೆ ಸಾಮಾನ್ಯವಾಗಿ ಕೇಳಿ ಬರುತ್ತದೆ. ತಾಯಿ ವಿಲ್ (Will) ಬರೆದಿಲ್ಲದೆ ಮೃತರಾದರೆ ಆ ಆಸ್ತಿ ಯಾರಿಗೆ ಸೇರಬೇಕು ಎಂಬುದರ ಬಗ್ಗೆ … Read more

error: Content is protected !!