Ugadi 2026: ಮಾರ್ಚ್ 19ರಂದು ಆಚರಿಸಲಿರುವ 2026ರ ಯುಗಾದಿಯ ದಿನಾಂಕ, ಪಾಡ್ಯ ತಿಥಿ, ಮುಹೂರ್ತ, ಯುಗಾದಿ ಪಚಡಿ (ಬೇವು-ಬೆಲ್ಲ) ಮಹತ್ವ ಮತ್ತು ಸಂಪ್ರದಾಯಗಳ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ…
ಹಿಂದೂ ಧರ್ಮದಲ್ಲಿ ಹೊಸ ವರ್ಷದ ಆರಂಭವನ್ನು ಸೂಚಿಸುವ ಪ್ರಮುಖ ಹಬ್ಬಗಳಲ್ಲಿ ಯುಗಾದಿ ಅತ್ಯಂತ ಮಹತ್ವದ್ದಾಗಿದೆ. ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಈ ಹಬ್ಬವನ್ನು ಬಹಳ ಸಂತೋಷ ಮತ್ತು ಸಡಗರದಿಂದ ಆಚರಿಸಲಾಗುತ್ತದೆ. ಯುಗಾದಿ ಹಬ್ಬವು ಹೊಸ ಆರಂಭ, ಹೊಸ ಆಶೆಗಳು ಮತ್ತು ಜೀವನದಲ್ಲಿ ಹೊಸ ಚೈತನ್ಯವನ್ನು ಸೂಚಿಸುವ ದಿನವಾಗಿದೆ.
‘ಯುಗಾದಿ’ ಎಂಬ ಪದವು ಸಂಸ್ಕೃತದ ‘ಯುಗ’ (Yuga) ಮತ್ತು ‘ಆದಿ’ (Adi) ಎಂಬ ಪದಗಳಿಂದ ಬಂದಿದೆ. ಇದರ ಅರ್ಥ ಹೊಸ ಯುಗದ ಆರಂಭ (Beginning of a New Era) ಎಂಬುದು. ಈ ದಿನದಿಂದ ಹಿಂದೂ ಪಂಚಾAಗದ ಪ್ರಕಾರ ಹೊಸ ವರ್ಷ ಆರಂಭವಾಗುತ್ತದೆ ಮತ್ತು ಪ್ರಕೃತಿಯಲ್ಲೂ ಹೊಸ ಚೈತನ್ಯ ಕಾಣಿಸಿಕೊಳ್ಳುತ್ತದೆ.
2026ರಲ್ಲಿ ಯುಗಾದಿ ಹಬ್ಬ ಯಾವಾಗ?
2026ರಲ್ಲಿ ಯುಗಾದಿ ಹಬ್ಬವನ್ನು ಮಾರ್ಚ್ 19, ಗುರುವಾರ ಆಚರಿಸಲಾಗುತ್ತದೆ. ಇದು ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯ (Chaitra Shukla Pratipada) ದಿನದಂದು ಬರುತ್ತದೆ. ಇದೇ ದಿನದಿಂದ ತೆಲುಗು ಶಕ ಸಂವತ್ಸರ 1948 (Telugu Shaka Samvatsara) ಆರಂಭವಾಗುತ್ತದೆ.
ಹಿAದೂ ಕಾಲಗಣನೆಯ ಪ್ರಕಾರ ವರ್ಷಗಳು 60 ವರ್ಷದ ಚಕ್ರ (60 Year Cycle) ಆಧಾರಿತವಾಗಿದ್ದು, ಪ್ರತಿ ವರ್ಷಕ್ಕೂ ತನ್ನದೇ ಆದ ವಿಶಿಷ್ಟ ಹೆಸರು ಮತ್ತು ಮಹತ್ವವಿದೆ. ಯುಗಾದಿ ದಿನದಿಂದ ಹೊಸ ಸಂವತ್ಸರ ಆರಂಭವಾಗುತ್ತದೆ ಎಂದು ನಂಬಲಾಗುತ್ತದೆ.
ತಿಥಿ ಮತ್ತು ಮುಹೂರ್ತದ ವಿವರ
ದೃಕ್ ಪಂಚಾAಗದ ಪ್ರಕಾರ ಯುಗಾದಿ ಹಬ್ಬದ ಪ್ರಮುಖ ತಿಥಿ ವಿವರಗಳು ಹೀಗಿವೆ:
- ಪ್ರತಿಪದ ತಿಥಿ ಆರಂಭ – ಮಾರ್ಚ್ 19, 2026 ಬೆಳಿಗ್ಗೆ 06:52
- ಪ್ರತಿಪದ ತಿಥಿ ಅಂತ್ಯ – ಮಾರ್ಚ್ 20, 2026 ಬೆಳಗ್ಗೆ 04:52
ಹಿಂದೂ ಆಚರಣೆಗಳಲ್ಲಿ ಸೂರ್ಯೋದಯದ ಸಮಯದಲ್ಲಿ ಇರುವ ತಿಥಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಆದ್ದರಿಂದ ಸೂರ್ಯೋದಯದ ವೇಳೆಗೆ ಪಾಡ್ಯ ತಿಥಿ ಇರುವ ಕಾರಣ ಮಾರ್ಚ್ 19ರಂದೇ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: Uchita Thotagarike Tarabeti: 10 ತಿಂಗಳ ಉಚಿತ ತೋಟಗಾರಿಕೆ ತರಬೇತಿಗೆ ಅರ್ಜಿ | ರೈತ ಮಕ್ಕಳಿಗೆ ಅವಕಾಶ
ಯುಗಾದಿ ಹಬ್ಬದ ಆಚರಣೆ ಮತ್ತು ಸಂಪ್ರದಾಯಗಳು
ಯುಗಾದಿ ಹಬ್ಬದ ಸಿದ್ಧತೆಗಳು ಸಾಮಾನ್ಯವಾಗಿ ಒಂದು ವಾರ ಮುಂಚಿತವಾಗಿಯೇ ಆರಂಭವಾಗುತ್ತವೆ. ಮನೆಗಳಲ್ಲಿ ಸ್ವಚ್ಛತೆ ಮಾಡುವುದು, ಮನೆಗೆ ಹೊಸ ಬಣ್ಣ ಹಚ್ಚುವುದು ಮತ್ತು ಅಲಂಕಾರ ಮಾಡುವುದರ ಮೂಲಕ ಹಬ್ಬಕ್ಕೆ ಸಿದ್ಧರಾಗುತ್ತಾರೆ.
ಮನೆ ಅಲಂಕಾರ
ಹಬ್ಬದ ದಿನದಂದು ಬೆಳಗ್ಗೆ ಮನೆಯ ಮುಂಭಾಗದಲ್ಲಿ ಬಣ್ಣಬಣ್ಣದ ರಂಗೋಲಿ (Rangoli) ಬಿಡಲಾಗುತ್ತದೆ. ಇದು ಮನೆಗೆ ಶುಭ ಮತ್ತು ಸಮೃದ್ಧಿಯನ್ನು ತರಲಿದೆ ಎಂದು ನಂಬಲಾಗಿದೆ.
ಮನೆಯ ಬಾಗಿಲಿಗೆ ಹಸಿರು ಮಾವಿನ ಎಲೆಗಳ ತೋರಣ (Mango Leaf Toran) ಕಟ್ಟುವುದು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಇದು ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ ಎಂಬ ನಂಬಿಕೆ ಇದೆ.
ಇದನ್ನೂ ಓದಿ: LPG Cylinder Booking New Rule: ಸಿಲಿಂಡರ್ ಬುಕ್ ಮಾಡುವವರಿಗೆ ಹೊಸ ನಿಯಮ | ಕೇಂದ್ರ ಸರ್ಕಾರದ ಮಹತ್ವದ ಆದೇಶ

ಎಣ್ಣೆ ಸ್ನಾನ ಮತ್ತು ಹೊಸ ಬಟ್ಟೆ
ಯುಗಾದಿ ದಿನದಂದು ಬೆಳಗ್ಗೆ ಬೇಗ ಎದ್ದು ಎಣ್ಣೆ ಸ್ನಾನ (Oil Bath) ಮಾಡುವುದು ಸಂಪ್ರದಾಯವಾಗಿದೆ. ನಂತರ ಹೊಸ ಬಟ್ಟೆ ಧರಿಸಿ ದೇವರನ್ನು ಪೂಜಿಸುವುದು ವಾಡಿಕೆ.
ಅನೇಕ ಕುಟುಂಬಗಳು ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಈ ದಿನ ದಾನ ಧರ್ಮ (Charity) ಮಾಡುವುದಕ್ಕೂ ಹೆಚ್ಚಿನ ಮಹತ್ವ ನೀಡಲಾಗುತ್ತದೆ.
ಇದನ್ನೂ ಓದಿ: Zero Interest Crop Loan: 38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ಕೃಷಿ ಸಾಲ ವಿತರಣೆ | ಈ ಸಾಲ ಪಡೆಯೋದು ಹೇಗೆ?
ಪಂಚಾಂಗ ಶ್ರವಣ (Panchanga Shravanam)
ಯುಗಾದಿ ಹಬ್ಬದ ಮತ್ತೊಂದು ವಿಶೇಷ ಸಂಪ್ರದಾಯವೆಂದರೆ ಪಂಚಾಂಗ ಶ್ರವಣ. ಈ ದಿನ ಪಂಡಿತರು ಅಥವಾ ಹಿರಿಯರು ಹೊಸ ವರ್ಷದ ಪಂಚಾಂಗ (Hindu Almanac) ಓದಿ, ಆ ವರ್ಷದಲ್ಲಿ ನಡೆಯಬಹುದಾದ ಘಟನೆಗಳು, ಗ್ರಹಸ್ಥಿತಿಗಳು ಮತ್ತು ಭವಿಷ್ಯದ ಸೂಚನೆಗಳನ್ನು ವಿವರಿಸುತ್ತಾರೆ.
ಯುಗಾದಿ ಪಚಡಿ ಮತ್ತು ಬೇವು ಬೆಲ್ಲದ ವಿಶೇಷತೆ
ಯುಗಾದಿ ಹಬ್ಬದ ಪ್ರಮುಖ ವಿಶೇಷತೆ ಎಂದರೆ ಯುಗಾದಿ ಪಚಡಿ (Ugadi Pachadi) ಅಥವಾ ಕರ್ನಾಟಕದಲ್ಲಿ ಪ್ರಸಿದ್ಧವಾದ ಬೇವು-ಬೆಲ್ಲ (Neem-Jaggery Mix).
ಇದು ಆರು ವಿಭಿನ್ನ ರುಚಿಗಳ ಮಿಶ್ರಣವಾಗಿದ್ದು, ಪ್ರತಿಯೊಂದು ರುಚಿಯೂ ಜೀವನದ ವಿಭಿನ್ನ ಅನುಭವಗಳನ್ನು ಸೂಚಿಸುತ್ತದೆ. ಯುಗಾದಿ ಪಚಡಿಯಲ್ಲಿರುವ ರುಚಿಗಳು:
- ಸಿಹಿ (Sweet) – ಸಂತೋಷ
- ಕಹಿ (Bitter) – ದುಃಖ
- ಹುಳಿ (Sour) – ಆಶ್ಚರ್ಯ
- ಉಪ್ಪು (Salt) – ಜೀವನದ ಸಮತೋಲನ
- ಖಾರ (Spicy) – ಕೋಪ ಅಥವಾ ಉತ್ಸಾಹ
- ಒಗರು (Astringent) – ಅಸಹ್ಯ ಅಥವಾ ಕಠಿಣ ಅನುಭವ
ಈ ಮಿಶ್ರಣವು ಜೀವನದಲ್ಲಿ ಸುಖ-ದುಃಖಗಳು ಸಮಾನವಾಗಿ ಬರುತ್ತವೆ ಎಂಬ ಜೀವನದ ತತ್ವವನ್ನು ನೆನಪಿಸುತ್ತದೆ.
ಯುಗಾದಿಯ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವ
ಯುಗಾದಿ ಹಬ್ಬವು ಕೇವಲ ಹೊಸ ವರ್ಷದ ಆರಂಭವಲ್ಲ. ಇದು ಪ್ರಕೃತಿಯಲ್ಲಿನ ಹೊಸ ಚೈತನ್ಯ (New Energy in Nature) ಮತ್ತು ಮಾನವನ ಜೀವನದಲ್ಲಿನ ಹೊಸ ಆಶಾವಾದವನ್ನು ಸೂಚಿಸುತ್ತದೆ.
ಈ ಸಮಯದಲ್ಲಿ ವಸಂತ ಋತು ಆರಂಭವಾಗುತ್ತದೆ. ಮರಗಳಲ್ಲಿ ಹೊಸ ಎಲೆಗಳು ಮೂಡುತ್ತವೆ, ಹೂಗಳು ಅರಳುತ್ತವೆ. ಇದರಿಂದ ಪ್ರಕೃತಿ ಸಂಪೂರ್ಣವಾಗಿ ಹೊಸ ರೂಪ ಪಡೆದುಕೊಳ್ಳುತ್ತದೆ. ಯುಗಾದಿ ದಿನವನ್ನು ಹೊಸ ಯೋಜನೆಗಳು ಆರಂಭಿಸಲು ಅತ್ಯಂತ ಶುಭ ದಿನವೆಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: Mudra Loan 20 lakhs: ಮುದ್ರಾ ಸಾಲದ ಮಿತಿ 20 ಲಕ್ಷಕ್ಕೆ ಏರಿಕೆ! ಗ್ಯಾರಂಟಿ ಇಲ್ಲದೆ ಲೋನ್ – ಪಡೆಯುವುದು ಹೇಗೆ?
ಬೇರೆ ರಾಜ್ಯಗಳಲ್ಲಿ ಯುಗಾದಿ
ಭಾರತದ ವಿವಿಧ ಭಾಗಗಳಲ್ಲಿ ಈ ಹಬ್ಬವನ್ನು ಬೇರೆ ಬೇರೆ ಹೆಸರಿನಿಂದ ಆಚರಿಸಲಾಗುತ್ತದೆ.
- ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ – ಯುಗಾದಿ (Ugadi)
- ಮಹಾರಾಷ್ಟ್ರ – ಗುಡಿ ಪಾಡ್ವಾ (Gudi Padwa)
- ಕಾಶ್ಮೀರ – ನವರೇಹ್ (Navreh)
- ಮಣಿಪುರ – ಸಜಿಬು ನೊಂಗ್ಮಾ ಪಾನ್ಬಾ
ಹೆಸರು ಬದಲಾಗಿದ್ರೂ, ಹೊಸ ವರ್ಷದ ಆರಂಭವನ್ನು ಸಂಭ್ರಮದಿAದ ಆಚರಿಸುವ ಪರಂಪರೆ ಎಲ್ಲೆಡೆ ಒಂದೇ ಆಗಿದೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.