Karnataka Weather Forecast- ಮಳೆ ಮುನ್ಸೂಚನೆ | ಮೇ 10ರಿಂದ ನಾಲ್ಕು ದಿನ ರಾಜ್ಯಾದ್ಯಂತ ಮಳೆ | ಮಳೆಯಾಗುವ ಪ್ರಮುಖ ಜಿಲ್ಲೆಗಳ ಪಟ್ಟಿ ಇಲ್ಲಿದೆ…

Spread the love

ಭಾರತೀಯ ಹವಾಮಾನ ಇಲಾಖೆ ಮಾಹಿತಿಯಂತೆ, ರಾಜ್ಯದ್ಯಂತ ಇಂದಿನಿಂದ ಮುಂದಿನ ನಾಲ್ಕು ದಿನಗಳ ಕಾಲ ಮಳೆಯಾಗಲಿದೆ. ಈ ಕುರಿತ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಕರ್ನಾಟಕದಲ್ಲಿ ಇಂದಿನಿಂದ (ಮೇ 10) ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಉತ್ತರ ಒಳನಾಡಿನಲ್ಲಿ ‘ಟರ್ಫ್’ ಎನ್ನುವ ವಾತಾವರಣದ ಪರಿಸ್ಥಿತಿ ನಿರ್ಮಾಣ ಆಗಿರುವುದರಿಂದ ಈ ಮಳೆ ಸಂಭವಿಸಲಿದೆ. ಕೆಲವೆಡೆ ಈ ಮಳೆ ಬಿರುಗಾಳಿ ಹಾಗೂ ಗುಡುಗು-ಸಿಡಿಲಿನೊಂದಿಗೆ ಸಹ ಆಗುವ ಸಂಭವವಿದೆ.

ಹವಾಮಾನ ಶಾಸ್ತ್ರಜ್ಞರ ಮುನ್ಸೂಚನೆ

ಬೆಂಗಳೂರು ಹವಾಮಾನ ಕಚೇರಿಯ ನಿರ್ದೇಶಕರಾದ ಮತ್ತು ಹಿರಿಯ ವಿಜ್ಞಾನಿ ಸಿ.ಎಸ್. ಪಾಟೀಲ್ ಅವರ ಪ್ರಕಾರ, ಉತ್ತರ ಒಳನಾಡಿನಲ್ಲಿ ‘ಟರ್ಫ್’ ಎಂಬ ಹವಾಮಾನ ವೈಪರೀತ್ಯದ ಪರಿಣಾಮವಾಗಿ ರಾಜ್ಯದ ವಿವಿಧೆಡೆಗಳಲ್ಲಿ ವಾತಾವರಣದಲ್ಲಿ ತೇವಾಂಶ ಹೆಚ್ಚಳವಾಗಿದೆ.

ಇದರ ಫಲವಾಗಿ, ಮೇ 10ರಿಂದ ರಾಜ್ಯಾದ್ಯಂತ ಹಗುರದಿಂದ ಹಿಡಿದು ಸಾಧಾರಣ ಮಟ್ಟದ ಮಳೆಯಾಗುವ ನಿರೀಕ್ಷೆ ಇದೆ. ಇವುಗಳಲ್ಲಿ ಕೆಲವು ಕಡೆಗಳಲ್ಲಿ ಗುಡುಗು ಸಿಡಿಲುಗಳೂ ಸಹ ಸಂಭವಿಸಬಹುದು.

KVP Post Office Scheme- ಹಣ ಡಬಲ್ ಮಾಡುವ ಅಂಚೆ ಇಲಾಖೆ ಯೋಜನೆ | ₹5 ಲಕ್ಷಕ್ಕೆ ₹10 ಲಕ್ಷ ಪಡೆಯಿರಿ | ಕಿಸಾನ್ ವಿಕಾಸ ಪತ್ರ (KVP) ಸಂಪೂರ್ಣ ಮಾಹಿತಿ

ಮಳೆಯಾಗುವ ಪ್ರಮುಖ ಜಿಲ್ಲೆಗಳ ಪಟ್ಟಿ
  • ಮಲೆನಾಡು ಪ್ರದೇಶಗಳು (ಹೆಚ್ಚು ಮಳೆ): ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ
  • ದಕ್ಷಿಣ ಒಳನಾಡು (ಬಿರುಗಾಳಿ + ಸಿಡಿಲು): ಬೆಂಗಳೂರು ನಗರ/ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ
  • ಇತರ ಜಿಲ್ಲೆಗಳು (ಸಾಧಾರಣ ಮಳೆ): ಬಾಗಲಕೋಟೆ, ಬೆಳಗಾವಿ, ಧಾರವಾಡ, ಬಳ್ಳಾರಿ, ಯಾದಗಿರಿ, ಹಾವೇರಿ, ಕಲಬುರಗಿ, ಕೊಪ್ಪಳ, ವಿಜಯಪುರ, ಗದಗ
ಬಿರುಗಾಳಿ ಮತ್ತು ಗರಿಷ್ಠ ತಾಪಮಾನ

ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಮಳೆಯ ಸಮಯದಲ್ಲಿ ಕೆಲವೊಂದು ಪ್ರದೇಶಗಳಲ್ಲಿ ಪ್ರತಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಸಿಡಿಲು ಸಂಭವಿಸುವ ಕಾರಣದಿಂದ ಹವಾಮಾನ ಇಲಾಖೆ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದೆ.

New Leave Policy 2025- ಜುಲೈನಿಂದ ಸರ್ಕಾರಿ ನೌಕರರಿಗೆ 42 ಹೆಚ್ಚುವರಿ ರಜೆ | ಹೊಸ ರಜೆ ನೀತಿಯ ಸಂಪೂರ್ಣ ವಿವರ ಇಲ್ಲಿದೆ…

ರಾಜ್ಯದ ಪ್ರಾಂತ್ಯವಾರು ತಾಪಮಾನ ಮಾಹಿತಿ

ಹೆಚ್ಚು ತಾಪಮಾನದಿಂದಾಗಿ ಕೆಲವಡೆ ಮಳೆ ಬೀಳುವ ಮೊದಲು ಬೆಚ್ಚನೆಯ ಗಾಳಿ ಹಾಗೂ ತಾಪದ ಅಲೆಗಳ ಅನುಭವವಾಗಬಹುದು. ರಾಜ್ಯದ ಪ್ರಾಂತ್ಯವಾರು ತಾಪಮಾನ ಮಾಹಿತಿ ಈ ಕೆಳಗಿನಂತಿದೆ:

  • ಉತ್ತರ ಒಳನಾಡು: 38°C – 40°C
  • ಕರಾವಳಿ: 35°C – 37°C
  • ದಕ್ಷಿಣ ಒಳನಾಡು ಮತ್ತು ಬೆಂಗಳೂರು: 35°C – 37°C

ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಮಳೆ ಸಹಿತ ಬಿರುಗಾಳಿ ಹಾಗೂ ಸಿಡಿಲು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ, ಜನತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ. ಹವಾಮಾನ ಇಲಾಖೆಯಿಂದ ನಿರಂತರವಾಗಿ ಬರುತ್ತಿರುವ ಮಾಹಿತಿ ಮತ್ತು ಮುನ್ಸೂಚನೆಗಳನ್ನು ಗಮನಿಸುವುದು ಸೂಕ್ತ.

Karnataka New Ration Card- ಹೊಸ ರೇಷನ್ ಕಾರ್ಡ್ ವಿತರಣೆಗೆ ಸರ್ಕಾರ ರೆಡಿ | ಆಹಾರ ಸಚಿವರ ಸೂಚನೆ | ಹೊಸ ಅರ್ಜಿ ಆಹ್ವಾನಕ್ಕೆ ಸಿದ್ಧತೆ


Spread the love
WhatsApp Group Join Now
Telegram Group Join Now
error: Content is protected !!