ಕರ್ನಾಟಕದಲ್ಲಿ ಮುಂಗಾರು ಪೂರ್ವ ಮಳೆ (Pre Monsoon Rain) ಮಿಂಚು-ಸಿಡಿಲಿನಿಂದ ಕೂಡಿದ್ದು; ಹವಾಮಾನ ಇಲಾಖೆ ಮುನ್ಸೂಚನೆ (Meteorological department forecast) ನೀಡಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಕರ್ನಾಟಕದಲ್ಲಿ ಮುಂಗಾರು ಪೂರ್ವ ಮಳೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಗಾಳಿ, ಮಿಂಚು ಮತ್ತು ಸಿಡಿಲಿನ ಅಬ್ಬರ ಹೆಚ್ಚಾಗಿದೆ. ಮೇ ತಿಂಗಳಲ್ಲಿ ಈ ಸಿಡಿಲಿನ ಅಬ್ಬರ ಇನ್ನೂ ಹೆಚ್ಚುವ ಸಾಧ್ಯತೆ ಇರುವುದರಿಂದ ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲು ಮನವಿ ಮಾಡಿದೆ.
ಏಪ್ರಿಲ್-ಮೇ ತಿಂಗಳಲ್ಲಿ ಬೀಳುವ ಮಳೆಯನ್ನು ಮುಂಗಾರು ಪೂರ್ವ ಮಳೆ ಎಂದು ಕರೆಯಲಾಗುತ್ತದೆ. ಇದರಲ್ಲಿ ತೀವ್ರ ಗಾಳಿ, ಆಕಸ್ಮಾತ್ತಾಗಿ ಸಂಭವಿಸುವ ಭಾರೀ ಮಿಂಚು ಮತ್ತು ಸಿಡಿಲು. ಕೆಲವೊಮ್ಮೆ ಆಲಿಕಲ್ಲು ಸಹಿತ ಮಳೆ ಬೀಳುವುದು ಸಾಮಾನ್ಯವಾಗಿರುತ್ತದೆ.
ರಾಜ್ಯದಲ್ಲಿ 9,80,169 ಸಿಡಿಲು
ಹವಾಮಾನ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, 2020ರಿಂದ 2023ರ ಅವಧಿಯಲ್ಲಿ ರಾಜ್ಯದಲ್ಲಿ 9,80,169 ಸಿಡಿಲುಗಳು ದಾಖಲಾಗಿವೆ. ಇದರಲ್ಲಿ ಮೇ ತಿಂಗಳಲ್ಲಿ 3.63 ಲಕ್ಷ ಸಿಡಿಲು, ಏಪ್ರಿಲ್ನಲ್ಲಿ 2.52 ಲಕ್ಷ ಸಿಡಿಲು, ಅಕ್ಟೋಬರ್ನಲ್ಲಿ 97,000 ಸಿಡಿಲು ಹಾಗೂ ಜೂನ್ನಲ್ಲಿ ದಾಖಲಾಗಿದೆ.
ವಿಶೇಷವಾಗಿ ಮೇ ತಿಂಗಳಲ್ಲಿ ಸಿಡಿಲಿನ ತೀವ್ರತೆಯು ಅತಿ ಹೆಚ್ಚು ಇರುವುದರಿಂದ ಈ ಸಮಯದಲ್ಲಿ ಜಾಗರೂಕತೆಯಿಂದ ನಡೆಯಬೇಕು. ಮುಖ್ಯವಾಗಿ ಉತ್ತರ ಕರ್ನಾಟಕದ ಭಾಗದ ಜನ ಕಟೆಚ್ಚರಿಕೆಯಿಂದ ಇರಬೇಕು ಎಂದು ಹವಾಮಾನ ತಜ್ಞರು ಸಲಹೆ ನೀಡುತ್ತಿದ್ದಾರೆ.
ಉತ್ತರ ಕರ್ನಾಟಕದಲ್ಲೇ ಸಿಡಿಲು ಹೆಚ್ಚು!
ಉತ್ತರ ಕರ್ನಾಟಕದ ಭಾಗಗಳಲ್ಲಿ ವಾತಾವರಣದ ತಾಪಮಾನ ಬಹಳ ಹೆಚ್ಚಾಗುತ್ತದೆ. ಈ ಬಿಸಿಯ ತಾಪಮಾನದಿಂದಾಗಿ ನೆಲದಿಂದ ಆಕಾಶದತ್ತ ಬಿಸಿ ಗಾಳಿ ಹಾರುತ್ತದೆ. ಗಾಳಿಯ ಶಾಖ ಮತ್ತು ತೇವಾಂಶ ವೇಗವಾಗಿ ಮೇಲಕ್ಕೆ ಚಲಿಸಿ ಮೋಡದ ತಂಪಾದ ಗಾಳಿಯೊಂದಿಗೆ ಮಿಶ್ರಿತವಾಗುತ್ತದೆ.
ಈ ಸಂವಹನದಿಂದ ಕನ್ವೆಕ್ಟಿವ್ ಕ್ಲೌಡ್ಸ್ (ಸಂವಹನ ಮೋಡಗಳು) ರಚನೆಯಾಗಿ ತಕ್ಷಣ ಮಿಂಚು, ಗುಡುಗು ಮತ್ತು ಸಿಡಿಲು ಉಂಟಾಗುತ್ತದೆ. ಹೀಗಾಗಿ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಸಿಡಿಲಿನ ಅಬ್ಬರ ಹೆಚ್ಚಿರುವುದು ಸಾಮಾನ್ಯ.

ಸಿಡಿಲಿಗೆ ಬಲಿಯಾದವರ ಜಿಲ್ಲಾವಾರು ವಿವರ
2011ರಿಂದ 2023ರ ಅವಧಿಯಲ್ಲಿ ರಾಜ್ಯದಲ್ಲಿ 947 ಮಂದಿ ಸಿಡಿಲಿನ ಪರಿಣಾಮವಾಗಿ ಸಾವನ್ನಪ್ಪಿದ್ದಾರೆ. ಇದು ರಾಜ್ಯದಲ್ಲಿ ಸಿಡಿಲಿನ ತೀವ್ರತೆಗೆ ಸಾಕ್ಷಿಯಾಗಿದೆ. ಸಿಡಿಲಿಗೆ ಬಲಿಯಾದವರ ಜಿಲ್ಲೆವಾರು ವಿವರ ಹೀಗಿದೆ:
- ಬೆಳಗಾವಿ- 80
- ಕಲಬುರಗಿ- 80
- ವಿಜಯಪುರ- 79
- ಬೀದರ್- 75
- ಕೊಪ್ಪಳ- 49
- ಹಾವೇರಿ- 43
- ಬಾಗಲಕೋಟೆ- 43
- ಯಾದಗಿರಿ- 42
- ಬಳ್ಳಾರಿ- 33
- ರಾಯಚೂರು- 35
ಈ ಜಿಲ್ಲೆಗಳಲ್ಲಿ ಸಿಡಿಲು ಹೆಚ್ಚು
ಕರ್ನಾಟಕದ ಕೆಲವು ಜಿಲ್ಲೆಗಳು ಸಿಡಿಲಿನ ಪೆವರೇಟ್ ಸ್ಫಾಟ್ಗಳೆಂದು ಗುರುತಿಸಲ್ಪಟ್ಟಿವೆ. ಬಹುತೇಕ ಸಿಡಿಲಾಘಾತದ ಸಾವುಗಳು ಈ ಕೆಳಕಂಡ ಜಿಲ್ಲೆಗಳಲ್ಲೇ ಹೆಚ್ಚು ಸಂಭವಿಸುತ್ತವೆ:
- ಕಲಬುರಗಿ
- ದಕ್ಷಿಣ ಕನ್ನಡ
- ಬೆಳಗಾವಿ
- ವಿಜಯಪುರ
- ತುಮಕೂರು
- ಚಿತ್ರದುರ್ಗ
- ಶಿವಮೊಗ್ಗ
- ರಾಯಚೂರು
- ಬೀದರ್
Auto Taxi Loan Subsidy- ಆಟೋ ಮತ್ತು ಟ್ಯಾಕ್ಸಿ ಖರೀದಿಗೆ ಸರ್ಕಾರದ ಸಬ್ಸಿಡಿ | ಈಗಲೇ ಅರ್ಜಿ ಹಾಕಿ
ಹವಾಮಾನ ಇಲಾಖೆ ಕಟ್ಟೆಚ್ಚರ
ಮೇ ತಿಂಗಳು ಅತೀ ಹೆಚ್ಚು ಸಿಡಿಲು ಪ್ರಕರಣಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಭಾರತೀಯ ಹವಾಮಾನ ಇಲಾಖೆ ಕಟ್ಟೆಚ್ಚರಿಕೆ ನೀಡಿದೆ. ಸಿಡಿಲಾಘಾತದಿಂದ ಪಾರಾಗಲು ಇಲಾಖೆ ನೀಡಿದ ಸಾಮಾನ್ಯ ಸಲಹೆಗಳು ಹೀಗಿವೆ:
- ಯಾವುದೇ ಕಾರಣಕ್ಕೂ ಮಳೆ ಬರುವಾಗ ಮರದ ಕೆಳಗೆ ನಿಲ್ಲಬೇಡಿ.
- ಮಳೆಯ ಮುನ್ಸೂಚನೆ ಕಂಡಾಗ ತಕ್ಷಣ ಮನೆಯೊಳಗೆ ಹೋಗಿ.
- ಮನೆಯ ಬಾಗಿಲು, ಕಿಟಕಿಗಳನ್ನು ಮುಚ್ಚಿ, ಶಕ್ತಿಯುತ ಗಾಳಿಯಿಂದ ರಕ್ಷಿಸಿಕೊಳ್ಳಿ.
- ಕಾಂಕ್ರೀಟ್ ಮಹಡಿಗಳ ಮೇಲೆ ಮಲಗಬೇಡಿ.
- ಎಲ್ಲ ವಿದ್ಯುತ್ ಉಪಕರಣಗಳನ್ನು ಅನ್ಪ್ಲಗ್ ಮಾಡಿ.
- ನೀರಿನಲ್ಲಿದ್ದರೆ ಅಥವಾ ಬಯಲು ಪ್ರದೇಶದಲ್ಲಿ ಇದ್ದರೆ ತಕ್ಷಣ ಸುರಕ್ಷಿತ ಸ್ಥಳ ತಲುಪಿ.
- ಮೊಬೈಲ್, ಲ್ಯಾಪ್ಟಾಪ್ ಸೇರಿದಂತೆ ವಿದ್ಯುತ್ ಆಧಾರಿತ ಸಾಧನಗಳನ್ನು ಬಳಸಬೇಡಿ.
Monsoon Forecast 2025- ಈ ವರ್ಷದ ಮುಂಗಾರು ಮಳೆ ಸೂಪರ್: ಹವಾಮಾನ ಇಲಾಖೆಯ ಮಹತ್ವದ ಮುನ್ಸೂಚನೆ