Indira Food Kit- ರೇಷನ್ ಕಾರ್ಡುದಾರರಿಗೆ ಇನ್ಮುಂದೆ ಅಕ್ಕಿ ಬದಲು ಉಚಿತ ದಿನಸಿ ಕಿಟ್ ವಿತರಣೆ | ‘ಇಂದಿರಾ ಆಹಾರ ಕಿಟ್’ ಯೋಜನೆ ಅನುಷ್ಠಾನ

Spread the love

ರಾಜ್ಯ ಸರ್ಕಾರ ರೇಷನ್ ಕಾರ್ಡ್ ಹೊಂದಿದವರಿಗೆ ಪ್ರತಿ ತಿಂಗಳು ಅಕ್ಕಿ ಜೊತೆಗೆ ಉಚಿತ ‘ಆಹಾರ ಕಿಟ್’ಗಳನ್ನು (Indira Food Kit) ವಿತರಿಸಲು ಮುಂದಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ರಾಜ್ಯ ಸರ್ಕಾರದಿಂದ ಪಡಿತರ ಚೀಟಿದಾರರಿಗೆ ಸಿಹಿಸುದ್ದಿ ಹೊರಬಿದ್ದಿದೆ. ಇನ್ಮುಂದೆ ಪಡಿತರ ಕೇವಲ ಅಕ್ಕಿಗೆ ಮಾತ್ರ ಸೀಮಿತವಾಗದೆ, ಎಲ್ಲಾ ಆದ್ಯತಾ ಕುಟುಂಬಗಳಿಗೆ (BPL/Antyodaya) ಪೌಷ್ಟಿಕಾಂಶ ತುಂಬಿದ ಉಚಿತ ‘ಇಂದಿರಾ ಆಹಾರ ಕಿಟ್’ಗಳನ್ನು ಸರಕಾರ ವಿತರಿಸಲು ನಿರ್ಧರಿಸಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಎಚ್. ಮುನಿಯಪ್ಪ ಅವರು ಈ ಬಗ್ಗೆ ‘ಇದು ಉಚಿತ ಅಕ್ಕಿ ದುರುಪಯೋಗ ಆಗುತ್ತಿರುವುದನ್ನು ತಡೆಯಲು ಪೌಷ್ಟಿಕಾಂಶಗಳ ಕಿಟ್ ವಿತರಣೆ ಯೋಜನೆಯಾಗಿದ್ದು, ಜುಲೈ 2ರಂದು ನಂದಿಬೆಟ್ಟದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಂಡಿಸಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.

KCET Seat Blocking 2025- ಕೆಸಿಇಟಿ ಸೀಟ್ ಬ್ಲಾಕ್ | ಕೆಇಎ ಮಹತ್ವದ ಮಾಹಿತಿ | ವಿದ್ಯಾರ್ಥಿಗಳಿಗೆ ಪ್ರಮುಖ ಸೂಚನೆಗಳು ಇಲ್ಲಿವೆ…

ಕಾಳಸಂತೆ ಖದೀಮರಿಗೆ ಕಡಿವಾಣ

ರಾಜ್ಯ ಸರ್ಕಾರ ‘ಅನ್ನಭಾಗ್ಯ’ ಯೋಜನೆಯಡಿಯಲ್ಲಿ ಈಗಾಗಲೇ ಪ್ರತಿ ಕುಟುಂಬಕ್ಕೆ ತಿಂಗಳಿಗೆ 10 ಕೆಜಿ ಅಕ್ಕಿ ಉಚಿತವಾಗಿ ನೀಡುತ್ತಿದೆ. ಇದರಲ್ಲಿ 5 ಕೆಜಿ ಅಕ್ಕಿ ಕೇಂದ್ರ ಸರ್ಕಾರದಿಂದ ಮತ್ತು 5 ಕೆಜಿ ಅಕ್ಕಿ ರಾಜ್ಯ ಸರ್ಕಾರದಿಂದ ಲಭ್ಯವಾಗುತ್ತಿದೆ.

ಆದರೆ, ಕೆಲವು ಕುಟುಂಬಗಳಿಗೆ ಅಗತ್ಯಕ್ಕಿಂತ ಹೆಚ್ಚು ಅಕ್ಕಿ ದೊರೆಯುತ್ತಿರುವುದರಿಂದ, ಈ ಅಕ್ಕಿಯು ಕಾಳಸಂತೆಯಲ್ಲಿ ಕಡಿಮೆ ದರಕ್ಕೆ ಮಾರಾಟವಾಗುತ್ತಿದೆ. ಇದರ ಪರಿಣಾಮವಾಗಿ ಯೋಜನೆಯ ನಿಜವಾದ ಉದ್ದೇಶ ವಿಫಲವಾಗುತ್ತಿದ್ದು; ಸರ್ಕಾರಕ್ಕೆ ಬೃಹತ್ ಆರ್ಥಿಕ ಹೊರೆಯೂ ಉಂಟಾಗುತ್ತಿದೆ.

ರಾಜ್ಯ ಸರ್ಕಾರ ರೇಷನ್ ಕಾರ್ಡ್ ಹೊಂದಿದವರಿಗೆ ಪ್ರತಿ ತಿಂಗಳು ಅಕ್ಕಿ ಜೊತೆಗೆ ಉಚಿತ ‘ಆಹಾರ ಕಿಟ್’ಗಳನ್ನು ವಿತರಿಸಲು ಮುಂದಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ...
Indira Food Kit Ration Beneficiaries Karnataka 2025
‘ಇಂದಿರಾ ಆಹಾರ ಕಿಟ್’ನಲ್ಲಿ ಏನೇನು ಇರುತ್ತದೆ?

ಪೌಷ್ಟಿಕತೆ ಹಾಗೂ ಕುಟುಂಬದ ಆಹಾರ ಅಗತ್ಯಗಳನ್ನು ತೀವ್ರವಾಗಿ ಪರಿಗಣಿಸಿ ಈ ಹೊಸ ಕಿಟ್ ವಿನ್ಯಾಸಗೊಳ್ಳಲಿದೆ. ಪ್ರಸ್ತುತ ಪ್ರಸ್ತಾವನೆಯಂತೆ ಈ ಕಿಟ್‌ನಲ್ಲಿ ಈ ಕೆಳಗಿನ ವಸ್ತುಗಳು ಇರಲಿವೆ:

  • ಗೋಧಿ 2 ಕೆಜಿ
  • ತೊಗರಿ ಬೇಳೆ 1 ಕೆಜಿ
  • ಅಡುಗೆ ಎಣ್ಣೆ 1 ಲೀಟರ್
  • ಸಕ್ಕರೆ 1 ಕೆಜಿ
  • ಉಪ್ಪು 1 ಕೆಜಿ
  • ಚಹಾ ಪುಡಿ 100 ಗ್ರಾಂ
  • ಕಾಫಿ ಪುಡಿ 50 ಗ್ರಾಂ

ಈ ಎಲ್ಲಾ ವಸ್ತುಗಳು ಸಮತೋಲನ ಆಹಾರಕ್ಕೆ ಅಗತ್ಯವಿರುವ ಪೌಷ್ಟಿಕಾಂಶಗಳನ್ನು ಒಳಗೊಂಡಿವೆ. ರಾಜ್ಯದ ಸುಮಾರು 1.28 ಕೋಟಿ BPL ಪಡಿತರ ಚೀಟಿದಾರ ಕುಟುಂಬಗಳು ಈ ಯೋಜನೆಯ ಲಾಭ ಪಡೆಯಲಿವೆ.

PM-Kisan 20th Installment- ರೈತರ ಖಾತೆಗೆ ಈ ವಾರದಲ್ಲಿ ಪಿಎಂ ಕಿಸಾನ್ ₹2,000 ಹಣ ಜಮಾ | ಯಾರಿಗೆಲ್ಲ ಸಿಗಲಿದೆ ಹಣ? ಸಂಪೂರ್ಣ ಮಾಹಿತಿ ಇಲ್ಲಿದೆ…

ವೆಚ್ಚದ ಲೆಕ್ಕಾಚಾರ ಮತ್ತು ಉಳಿತಾಯ

ಸದ್ಯ ರಾಜ್ಯ ಸರ್ಕಾರ ಪಡಿತರ ಅಕ್ಕಿಗೆ ಪ್ರತಿ ತಿಂಗಳು ₹573 ಕೋಟಿ ವೆಚ್ಚ ಮಾಡುತ್ತಿದೆ. ಆದರೆ, ಕಿಟ್ ವಿತರಿಸಿದರೆ ಈ ವೆಚ್ಚವನ್ನು ₹512 ಕೋಟಿಗೆ ತಗ್ಗಿಸಬಹುದು. ಇದರ ಜೊತೆಗೆ ವರ್ಷಕ್ಕೆ ₹720 ಕೋಟಿ ರು. ಉಳಿತಾಯ ಸಾಧ್ಯವಾಗಬಹುದು ಎಂಬ ನಿರೀಕ್ಷೆಯಿದೆ.

ಯೋಜನೆಯನ್ನು ತಕ್ಷಣವೇ ರಾಜ್ಯದ ಎಲ್ಲೆಡೆ ಜಾರಿಗೊಳಿಸುವ ಬದಲು, ಪ್ರಥಮ ಹಂತದಲ್ಲಿ ಆಯ್ದ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರುವ ಯೋಜನೆ ರೂಪಿಸಲಾಗಿದೆ. ಯೋಜನೆಯ ಫಲಿತಾಂಶಗಳು ಯಶಸ್ವಿಯಾದ ನಂತರ ಹಂತ ಹಂತವಾಗಿ ಇಡೀ ರಾಜ್ಯಕ್ಕೆ ವಿಸ್ತರಿಸಲಾಗುತ್ತದೆ.

ಎಲ್ಲಾ ಪಡಿತರ ಚೀಟಿಗಳನ್ನು ಆಧಾರ್ ಲಿಂಕ್ ಮಾಡಲಾಗಿದ್ದು, ವಿತರಣೆ ವ್ಯವಸ್ಥೆಯ ಪಾರದರ್ಶಕತೆಗೆ ಹೆಚ್ಚಿನ ಒತ್ತಿದೆ. ಕಿಟ್ ವಿತರಣೆಗೆ ಅಗತ್ಯವಾದ ಸಾಮಗ್ರಿಗಳನ್ನು ಕರ್ನಾಟಕ ನಾಗರಿಕ ಸರಬರಾಜು ನಿಗಮ ಅಥವಾ ಇತರ ಮಾನ್ಯ ಏಜೆನ್ಸಿಗಳಿಂದ ಖರೀದಿಸುವ ಯೋಜನೆಯಿದೆ.

Five Days Work Week- ಕಾರ್ಮಿಕರಿಗೆ ಇನ್ಮುಂದೆ ವಾರಕ್ಕೆ ಐದೇ ದಿನ ಕೆಲಸ | ಕಾರ್ಮಿಕ ಇಲಾಖೆ ಮಹತ್ವದ ಅಪ್ಡೇಟ್ಸ್ ಇಲ್ಲಿದೆ…

ನಗದು ಬದಲು ಕಿಟ್‌ಗಳಿಗೆ ಒಲವು

ಇತ್ತೀಚೆಗೆ ಸರ್ಕಾರ ನಡೆಸಿದ ಸಮೀಕ್ಷೆಯ ಪ್ರಕಾರ, ಶೇಕಡಾ 90ಕ್ಕಿಂತಲೂ ಹೆಚ್ಚು ಫಲಾನುಭವಿಗಳು ಹೆಚ್ಚುವರಿ ಅಕ್ಕಿ ಅಥವಾ ನಗದು ವರ್ಗಾವಣೆಗೆ ಬದಲು ದಿನಸಿ ಕಿಟ್‌ಗಳೇ ಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಸರ್ಕಾರ ಜನರ ಅಭಿಪ್ರಾಯವನ್ನು ಆಧಾರವಾಗಿಸಿಕೊಂಡು ಈ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಲು ಸಿದ್ಧವಾಗಿದೆ.

ಈ ಯೋಜನೆಯಿಂದ ರಾಜ್ಯದ ಲಕ್ಷಾಂತರ ಬಿಪಿಎಲ್ ಕುಟುಂಬಗಳು ಆರೋಗ್ಯಪೂರ್ಣ ಆಹಾರ ಪಡೆಯಲಿದ್ದು, ಪೌಷ್ಟಿಕಾಂಶ ಕೊರತೆಯಿಂದಾಗಿ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಲಿದೆ. ಹಾಗೆಯೇ, ಪಡಿತರ ವಿತರಣಾ ವ್ಯವಸ್ಥೆಯಲ್ಲಿ ನಿಜವಾದ ಫಲಾನುಭವಿಗಳಿಗೆ ಲಾಭ ಸಿಗಲಿದೆ.

ಇಂದಿರಾ ಆಹಾರ ಕಿಟ್ ಯೋಜನೆಯು ಕೇವಲ ಪಡಿತರ ವಿನ್ಯಾಸ ಬದಲಾವಣೆಯಲ್ಲ; ಇದು ಆಹಾರ ಭದ್ರತೆಯತ್ತ ಒಂದು ಕ್ರಾಂತಿಕಾರಿ ಹೆಜ್ಜೆಯಾಗಲಿದೆ. ಇಂತಹ ಜನಪರ ಹಾಗೂ ಸಮರ್ಥ ಯೋಜನೆಯು ಯಶಸ್ವಿಯಾಗಿ ಜಾರಿಯಾದರೆ, ಇದು ಇತರ ರಾಜ್ಯಗಳಿಗೆ ಮಾದರಿಯಾಗಿ ನಿಲ್ಲಬಹುದು.

Free Sewing Machine- ಮಹಿಳೆಯರಿಗೆ ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆ ಸಂಪೂರ್ಣ ಮಾಹಿತಿ ಇಲ್ಲಿದೆ…


Spread the love
WhatsApp Group Join Now
Telegram Group Join Now
error: Content is protected !!