Akshaya Tritiya 2025- ಅಕ್ಷಯ ತೃತೀಯ 2025: ಚಿನ್ನಾಭರಣ ಖರೀದಿಗೆ 12,000 ರೂ. ವರೆಗೂ ಭರ್ಜರಿ ಆಫರ್

Spread the love

ಏಪ್ರಿಲ್ 30ರ ಅಕ್ಷಯ ತೃತೀಯ ಹಬ್ಬದ ಪ್ರಯುಕ್ತ ಭೀಮ ಜುವೆಲರ್ ಹಾಗೂ ಜೋಯಾಲುಕ್ಕಾಸ್ ಆಭರಣ ಮಳಿಗೆಗಳು ವಿಶೇಷ ರಿಯಾಯಿತಿ ಹಾಗೂ ಭರ್ಜರಿ ಆಫರ್’ಗಳನ್ನು ಘೋಷಿಸಿವೆ. ಈ ಕುರಿತ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಭಾರತೀಯ ಧಾರ್ಮಿಕ ಆಚರಣೆಗಳಲ್ಲಿ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾಗಿರುವ ಅಕ್ಷಯ ತೃತೀಯ ಹಬ್ಬವು ಈ ಬಾರಿ ಏಪ್ರಿಲ್ 30ರಂದು ನಡೆಯಲಿದೆ. ಸಮೃದ್ಧಿ, ಸಂತೋಷದ ಸಂಕೇತವಾದ ಈ ದಿನದಲ್ಲಿ ಚಿನ್ನಾಭರಣ ಖರೀದಿಯನ್ನು ಶುಭದಾಯಕವೆಂದು ನಂಬಲಾಗುತ್ತದೆ. ಈ ಹಿನ್ನೆಲೆದಲ್ಲಿ ದೇಶದ ಪ್ರಮುಖ ಆಭರಣ ಮಳಿಗೆಗಳು ಗ್ರಾಹಕರಿಗೆ ಆಕರ್ಷಕ ಕೊಡುಗೆಗಳನ್ನು ಘೋಷಿಸಿವೆ.

ಭೀಮ ಜುವೆಲರ್‌ನ ಭರ್ಜರಿ ಆಫರ್‌ಗಳು

ಭೀಮ ಜ್ಯುವೆಲರ್, ತನ್ನ ಗ್ರಾಹಕರಿಗೆ ಈ ವರ್ಷವೂ ವಿಶಿಷ್ಟವಾದ ಆಫರ್‌ಗಳ ಮೂಲಕ ಸಡಗರದ ಸಂಭ್ರಮ ನೀಡುತ್ತಿದೆ. ಏಪ್ರಿಲ್ 18ರಿಂದ ಮೇ 1ರ ತನಕ ಈ ಕೊಡುಗೆಗಳು ಲಭ್ಯವಿರುತ್ತವೆ.

ಚಿನ್ನದ ಆಭರಣಗಳಿಗೆ ನೇರ ರಿಯಾಯಿತಿ: ಪ್ರತಿ 4 ಗ್ರಾಂ ಚಿನ್ನದ ಆಭರಣ ಖರೀದಿಗೆ ₹2,000 ನೇರ ರಿಯಾಯಿತಿಯನ್ನು ಘೋಷಿಸಲಾಗಿದೆ. ಇದರಿಂದಾಗಿ ಗ್ರಾಹಕರು ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡಿದರೆ ಒಟ್ಟಾರೆ ₹12,000 ವರೆಗೆ ರಿಯಾಯಿತಿಯನ್ನು ಪಡೆಯಬಹುದಾಗಿದೆ.

ವಜ್ರದ ಆಭರಣಗಳ ಮೇಲೆ ವಿಶೇಷ ದರ: ₹80,000 ಮೌಲ್ಯದ ವಜ್ರಾಭರಣ ಖರೀದಿದಾರರಿಗೆ ₹12,000 ರಿಯಾಯಿತಿಯನ್ನು ನೀಡಲಾಗುತ್ತಿದೆ.

PMFME Subsidy Scheme- ಮಹಿಳೆಯರು, ರೈತರಿಗೆ ₹15 ಲಕ್ಷ ಸಹಾಯಧನ | ಸಣ್ಣ ಉದ್ಯಮ ಸ್ಥಾಪನೆಗೆ ಆರ್ಥಿಕ ನೆರವು | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ಏಪ್ರಿಲ್ 30ರ ಅಕ್ಷಯ ತೃತೀಯ ಹಬ್ಬದ ಪ್ರಯುಕ್ತ ಭೀಮ ಜುವೆಲರ್ ಹಾಗೂ ಜೋಯಾಲುಕ್ಕಾಸ್ ಆಭರಣ ಮಳಿಗೆಗಳು ಭರ್ಜರಿ ಆಫರ್’ಗಳನ್ನು ಘೋಷಿಸಿವೆ. ಈ ಕುರಿತ ಮಾಹಿತಿ ಇಲ್ಲಿದೆ...
Akshaya Tritiya 2025 Offers

ಬೆಳ್ಳಿ ಆಭರಣಗಳ ಮೇಲೆ ರಿಯಾಯಿತಿ: ಪ್ರತಿ ಕೆ.ಜಿ ಬೆಳ್ಳಿಗೆ ₹5,000 ರಿಯಾಯಿತಿ ಘೋಷಿಸಲಾಗಿದೆ. ಬೆಳ್ಳಿ ಗಣಪತಿ ಅಥವಾ ಲಕ್ಷ್ಮೀ ವಿಗ್ರಹಗಳನ್ನು ಪಡೆಯಲು ಇದು ಉತ್ತಮ ಅವಕಾಶ.

ಅದೃಷ್ಟಕರ ಉಡುಗೊರೆ ಅವಕಾಶ: ಪ್ರತಿಯೊಬ್ಬ ಗ್ರಾಹಕರಿಗೂ ಸ್ಕ್ಯಾಚ್ – ಅಂಡ್ – ವಿನ್ ಕಾರ್ಡ್ ನೀಡಲಾಗುತ್ತದೆ. ಇದರಿಂದ ವಿಶೇಷ ಉಡುಗೊರೆಗಳನ್ನು ಗೆಲ್ಲುವ ಅವಕಾಶ ಸಿಗುತ್ತದೆ.

ಶ್ರೀಕೃಷ್ಣನ ವಿಶೇಷ ಗಟ್ಟಿ: ಉಡುಪಿಯ ಶ್ರೀಕೃಷ್ಣ ದೇವಸ್ಥಾನದ ಆಶೀರ್ವಾದದೊಂದಿಗೆ ಬಿಡುಗಡೆಗೊಂಡ 10 ಗ್ರಾಂ ತೂಕದ, 24 ಕ್ಯಾರೆಟ್ ಪರಿಶುದ್ಧ ಚಿನ್ನದ ಗಟ್ಟಿಗಳನ್ನು ಸೀಮಿತ ಗ್ರಾಹಕರಿಗೆ ನೀಡಲಾಗುತ್ತಿದೆ. ಈ ಗಟ್ಟಿಗಳನ್ನು ಪೆಂಡೆಂಟ್ ಆಗಿ ಅಥವಾ ಉಡುಗೊರೆಯಾಗಿ ಪಡೆಯಬಹುದು.

Blue Aadhaar Card- ನೀಲಿ ಆಧಾರ್ ಕಾರ್ಡ್ ಮಾಡಿಸುವುದು ಹೇಗೆ? ಇದರಿಂದ ಪ್ರಯೋಜನವೇನು? ಮಹತ್ವದ ಮಾಹಿತಿ ಇಲ್ಲಿದೆ…

ಜೋಯಾಲುಕ್ಕಾಸ್ ಸುವರ್ಣ ಸಮೃದ್ಧಿ ಅಭಿಯಾನ

ಆಭರಣ ಕ್ಷೇತ್ರದಲ್ಲಿ ಹೆಸರಾಂತ ಜೋಯಾಲುಕ್ಕಾಸ್ ಸಂಸ್ಥೆಯೂ ಸಹ ಅಕ್ಷಯ ತೃತೀಯ ಹಬ್ಬದ ಸಂಧರ್ಭದಲ್ಲಿ ಗ್ರಾಹಕರಿಗೆ ಹೊಸ ಕೊಡುಗೆಗಳನ್ನು ನೀಡುವ ‘ಸುವರ್ಣ ಸಮೃದ್ಧಿ ಅಭಿಯಾನ’ವನ್ನು ಘೋಷಿಸಿದೆ. ಈ ಅಭಿಯಾನವು ಏಪ್ರಿಲ್ 19ರಿಂದ ಮೇ 1ರ ವರೆಗೆ ನಡೆಯಲಿದೆ.

ಚಿನ್ನದ ಬಾರ್ ಉಡುಗೊರೆ: ₹75,000 ಅಥವಾ ಹೆಚ್ಚಿನ ಮೌಲ್ಯದ ವಜ್ರ, ಅನ್‌ಕಟ್ ವಜ್ರ ಅಥವಾ ಪ್ಲಾಟಿನಂ ಆಭರಣ ಖರೀದಿಸಿದ ಗ್ರಾಹಕರಿಗೆ 500 ಮಿ.ಗ್ರಾಂ ಚಿನ್ನದ ಬಾರ್ ಉಡುಗೊರೆಯಾಗಿ ನೀಡಲಾಗುತ್ತದೆ.

ಹೆಚ್ಚಿದ ಚಿನ್ನ ಖರೀದಿಗೆ ಹೆಚ್ಚಿದ ಉಡುಗೊರೆ: ₹1.5 ಲಕ್ಷ ಮೌಲ್ಯದ ಖರೀದಿಗೆ 1 ಗ್ರಾಂ ಚಿನ್ನದ ಬಾರ್ ಅಥವಾ ಲಕ್ಷ್ಮೀ ದೇವಿಯ ಚಿನ್ನದ ವಿಗ್ರಹ ಉಚಿತವಾಗಿ ಸಿಗಲಿದೆ.

Free Electric Scooter- ಮಹಿಳೆಯರಿಗೆ ಉಚಿತ ಎಲೆಕ್ಟ್ರಿಕ್ ಸ್ಕೂಟರ್ | ಅರ್ಜಿ ಆಹ್ವಾನ | ಹೀಗೆ ಅರ್ಜಿ ಸಲ್ಲಿಸಿ…

ಅಕ್ಷಯ ತೃತೀಯದ ವಿಶೇಷ ದಿನದ ಆಫರ್: ಏಪ್ರಿಲ್ 30ರಂದು, ಅಕ್ಷಯ ತೃತೀಯ ದಿನ ಗ್ರಾಹಕರು ₹75,000 ಅಥವಾ ಹೆಚ್ಚಿನ ಖರೀದಿ ಮಾಡಿದರೆ 22 ಕ್ಯಾರೆಟ್ ಚಿನ್ನದ 200 ಮಿ.ಗ್ರಾಂ ನಾಣ್ಯ ಉಡುಗೊರೆಯಾಗಿ ಪಡೆಯಬಹುದು.

ಕುಟುಂಬ ಸಹಿತ ಖರೀದಿಗೆ ಸುಸಮಯ: ಜೋಯಾಲುಕ್ಕಾಸ್ ಸಮೂಹದ ಅಧ್ಯಕ್ಷ ಜೋಯ್ ಆಲುಕ್ಕಾಸ್ ಅವರು, ಇದು ಕುಟುಂಬದೊಂದಿಗೆ ಸಂತಸದಿಂದ ಆಭರಣ ಖರೀದಿ ಮಾಡುವ ಸುಸಮಯ ಎಂದು ಹೇಳಿದ್ದಾರೆ.

ಅಕ್ಷಯ ತೃತೀಯದ ಹಬ್ಬವು ಸಂತಸ, ಸಮೃದ್ಧಿ ಹಾಗೂ ಶ್ರೇಷ್ಠ ಆರಂಭಗಳ ಸಂಕೇತವಾಗಿದೆ. ಈ ವಿಶೇಷ ದಿನದಲ್ಲಿ ಚಿನ್ನ ಖರೀದಿಯ ಮೂಲಕ ಭವಿಷ್ಯದಲ್ಲಿ ಧನ-ಸಂಪತ್ತಿಗೆ ಬುನಾದಿ ಹಾಕುವುದು ಎಂಬ ನಂಬಿಕೆಯ ಹಿನ್ನೆಲೆಯಲ್ಲಿ, ಭೀಮ ಜುವೆಲರ್ ಮತ್ತು ಜೋಯಾಲುಕ್ಕಾಸ್ ನೀಡುತ್ತಿರುವ ಆಫರ್‌ಗಳು ಗ್ರಾಹಕರಿಗೆ ಭರ್ಜರಿ ಲಾಭ ನೀಡಬಲ್ಲವು.


Spread the love
WhatsApp Group Join Now
Telegram Group Join Now
error: Content is protected !!